ಲಕ್ಷ್ಮೀ ಮಾತೆ ಯಾಕೆ ಸದಾ ಶ್ರೀಹರಿಯ ಪಾದಗಳನ್ನು ಒತ್ತುತ್ತಿರುವಳು..?
image credits: https://ift.tt/3i6lkn9
ಕೈಲಾಸದೊಡೆಯನ ಮನದೊಡತಿ ಪಾರ್ವತಿ ದೇವಿ ಸದಾ ತನ್ನ ಪ್ರಿಯಪತಿ ಶಿವನ ಪಕ್ಕದಲ್ಲೇ ಆಸೀನಳಾಗಿರೋದನ್ನು ಪುರಾಣಗಳ ಮೂಲಕ ತಿಳಿದಿದ್ದುಂಟು. ಸೃಷ್ಟಿಕರ್ತ ಬ್ರಹ್ಮನ ಸನಿಹದಲ್ಲೇ ಶ್ವೇತ ಕಮಲದ ಮೇಲೆ ಕುಳಿತು ಮಧುರವಾಗಿ ವೀಣೆ ನುಡಿಸುತ್ತಿರುವ ಸರಸ್ವತಿ ಮಾತೆಯನ್ನೂ ಕಂಡಿದ್ದೀರಿ. ಆದ್ರೆ ಜಗತ್ತಿನ ಸಕಲ ಸಿರಿ ಸಂಪತ್ತುಗಳ ಅರಸಿಯಾದ ಲಕ್ಷ್ಮೀ ಮಾತೆ ಯಾಕೆ ಸದಾ ಶ್ರೀಹರಿಯ ಪಾದಗಳನ್ನು ಒತ್ತುತ್ತಿರುವಳು? ಲಕ್ಷ್ಮೀದೇವಿ ಈ ರೀತಿ ಕಾಣಿಸಿಕೊಳ್ಳೋದ್ರ ಹಿಂದಿನ ಸ್ಪಷ್ಟ ಕಾರಣ ಏನ್ ಗೊತ್ತಾ? ಬನ್ನಿ ತಿಳಿಯೋಣ..
ಜಗತ್ತಿನ ಯಾವ ದೇಶದಲ್ಲಿ ಪತಿ ಪತ್ನಿಯ ಸಂಬಂಧಕ್ಕೆ ಏನೇನು ಮಾನ್ಯತೆ ಉಂಟೋ ಇಲ್ವೋ, ಆದ್ರೆ ಭಾರತೀಯರಲ್ಲಿ ಮಾತ್ರ ಪತಿ ಪತ್ನಿಯ ಸಂಬಂಧ ಬಲು ಪವಿತ್ರ ಅಂತಲೇ ಪರಿಗಣಿಸಲಾಗುತ್ತೆ. ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು, ವರಮಾಲೆ ಬದಲಿಸಿ, ಮಾಂಗಲ್ಯಧಾರಣೆ ಆದ್ರೆ ಆ ಹೆಣ್ಣಿನ ಪಾಲಿಗೆ ತನ್ನ ಪತಿಯೇ ಸರ್ವಸ್ವ, ಪತಿಯೇ ಪರದೈವ. ಇದು ಅನಾದಿಕಾಲದಿಂದ್ಲೂ ಪಾಲನೆಯಾಗ್ತಾ ಬಂದಿರೋ ಪದ್ಧತಿ ಕೂಡ. ಆಧುನಿಕತೆ ಎಷ್ಟೇ ವ್ಯಾಪಕವಾಗಿದ್ರೂ ಪತಿ ಪತ್ನಿಯ ಸಂಬಂಧಕ್ಕಿರೋ ಮೌಲ್ಯ ನಮ್ಮ ಭಾರತೀಯ ಸಮಾಜದಲ್ಲಿ ಕಿಂಚಿತ್ತೂ ಕುಂದಿಲ್ಲ.
image credits: https://ift.tt/3i6lkn9
ಹೆಂಡತಿಗೆ ಪತಿಸೇವೆಯಲ್ಲೇ ಸಕಲ ಸುಖ ಪ್ರಾಪ್ತಿ ಅಂತ ಯಾರೂ ಕಟ್ಟಪ್ಪಣೆ ಮಾಡದಿದ್ರೂ, ತನ್ನ ಗಂಡನಉಪಚಾರ ಮಾಡುವುದರಲ್ಲೇ ಸಂತಸ ಕಾಣುವ ವಿಶಿಷ್ಟ ಸ್ವಭಾವ ಭಾರತೀಯ ನಾರಿಯದ್ದು. ಅನ್ಯದೇಶೀ ಸಂಪ್ರದಾಯಗಳಲ್ಲಿ ಈ ವೈಖರಿಗೆ ಗುಲಾಮಗಿರಿ ಅಂತ ಹೇಳುವರಾದ್ರೂ ಅಪ್ಪಟ ಭಾರತೀಯ ನಾರಿ ಈ ಮಾತನ್ನು ಸುತಾರಾಂ ಒಪ್ಪಲಾರಳು. ಜಗತ್ತಿನಲ್ಲಿ ಪುರುಷ ಸಮಾಜಕ್ಕೆ ಹೆಚ್ಚು ಮನ್ನಣೆ ಅನ್ನೋ ಅಪವಾದದ ನಡುವೆಯೇ, ಕಾಲ ಬದಲಾದಂತೆ ತನ್ನ ಕಾರ್ಯವ್ಯಾಪ್ತಿಯನ್ನು ಅಡುಗೆಮನೆಯಿಂದ ಹೊರತಾದ ರಂಗಗಳಲ್ಲೂ ಪಸರಿಸಿಕೊಂಡಿರೋ ಹೆಣ್ಣು ಅದರ ಜೊತೆ ಜೊತೆಗೇ ಪತಿಸೇವೆಯನ್ನು ಕಡೆಗಣಿಸದೆ ಪಾಲಿಸುವಳು.
ಸಿರಿದೇವಿ ಏಕೆ ಸದಾ ಒತ್ತುವಳು ಹರಿಯ ಪಾದ?
ನೀವು ಗಮನಿಸಿದ್ದೀರಾ, ಯಾವ್ದೇ ಪೌರಾಣಿಕ ಕಥೆಗಳಿರ್ಲಿ, ಸಿನಿಮಾ ಇರ್ಲಿ ವೈಕುಂಠದ ದೃಶ್ಯ ಬಂತು ಅಂದ್ರೆ ಅಲ್ಲಿ ಮಾತೆ ಲಕ್ಷ್ಮಿಯು ತನ್ನೊಡೆಯ ಶ್ರೀಹರಿಯ ಪದತಲಗಳಲ್ಲಿ ರಾರಾಜಿಸುತ್ತಿರ್ತಾಳೆ. ಹರಿಯ ಕೋಮಲ ಪಾದಗಳನ್ನು ಒತ್ತುತ್ತಾ ಮಂದಸ್ಮಿತಳಾಗಿ ಕಾಣಿಸುತ್ತಾಳೆ. ಅಕ್ಷರಶಃ ತಾನು ಶ್ರೀಹರಿಯ ಚರಣ ಸೇವೆಯಲ್ಲೇ ಲೋಕದ ಸಕಲ ಸುಖ ಸಂಪತ್ತನ್ನು ಕಾಣಬಲ್ಲೆ ಅನ್ನೋ ಹಾಗಿರುತ್ತೆ ಆಕೆಯ ವದನಾರವಿಂದ.
image credits: https://ift.tt/3i6lkn9
ಕೈಲಾಸವಾಸಿ ಮಹಾಶಿವನಂತೂ ತನ್ನ ಮನದನ್ನೆ ಪಾರ್ವತಿಯನ್ನು ಸದಾ ತನ್ನ ಸನಿಹದಲ್ಲಿ ಕುಳ್ಳಿರಿಸಿಕೊಳ್ಳುವನು. ತನ್ನ ಮಹಾಸಭೆಯಲ್ಲೂ ಮಡದಿಯನ್ನು ತೋಳು ಬಳಸಿಯೇ ಕೂರುವನು. ಅರ್ಥಾತ್ ಶಿವ ಪಾರ್ವತಿಯರ ಒಲುಮೆಯ ಅಗಾಧತೆ ಇಲ್ಲಿ ಜಾಹೀರಾಗುತ್ತದೆ. ಇನ್ನು ಬ್ರಹ್ಮಲೋಕ. ಸೃಷ್ಟಿಕರ್ತ ಬ್ರಹ್ಮ ಮತ್ತು ಸರಸ್ವತಿಯು ಪ್ರತ್ಯೇಕ ಆಸನಗಳಲ್ಲಿ ಆಸೀನರಾದ್ರೂ ಸರಸ್ವತಿ ಬ್ರಹ್ಮನ ಚರಣಗಳ ಬಳಿಯಂತೂ ಇರಲಾರಳು. ಆದ್ರೆ ಸಕಲ ಜೀವಚರಗಳ ಪಾಲಕನಾದ ಪರಮಾತ್ಮ ಶ್ರೀಹರಿಯಾಕೆ ಇಂಥ ಬೇಧ ಮಾಡುವನು? ಲೋಕೈಕ ಸುಂದರಿಯೂ, ಸಿರಿದೇವಿಯೂ, ಸಕಲ ಸದ್ಗುಣ ಸಂಪನ್ನೆಯೂ, ತನ್ನ ಹೃದಯನಿವಾಸಿಯೂ ಆದ ಮಹಾಲಕ್ಷ್ಮಿಗೆ ಹರಿಯೇಕೆ ತನ್ನ ಚರಣ ಕಮಲಗಳ ಬಳಿ ಸ್ಥಾನ ಕೊಟ್ಟ?
image credits: https://ift.tt/3i6lkn9
ಜಗತ್ತಿನ ಸಕಲ ಸಿರಿ ಸಂಪತ್ತುಗಳಿಗೆ ಲಕುಮಿಯೇ ಅಧಿದೇವತೆ. ಸಿರಿ ಸಂಪತ್ತು ವೃದ್ಧಿಗೆ ಬಯಸುವ ಪ್ರತಿಯೊಬ್ಬರೂ ಲಕ್ಷ್ಮೀದೇವಿಯನ್ನು ಆರಾಧಿಸಿ ಆಕೆಯನ್ನು ಪ್ರಸನ್ನಗೊಳಿಸುವರು. ಹೌದು, ಅಂಥ ಲಕ್ಷ್ಮಿಯು ತನ್ನ ಪರದೈವವಾದ ಶ್ರೀಹರಿಯನ್ನು ಪ್ರಸನ್ನಗೊಳಿಸೋದ್ರಲ್ಲೇ ವೈಕುಂಠ ಸುಖ ಕಾಣುವಳು. ನಿಮಗೆ ತಿಳಿದಿರಲಿ ಭಕ್ತಿಯಲ್ಲೂ ನವವಿಧಗಳಿವೆ. ಆ 9 ವಿಧಗಳಲ್ಲಿ ಚರಣಸೇವೆಯೂ ಒಂದು. ಅದನ್ನೇ ಸಾಕ್ಷಾತ್ ಮಹಾಲಕ್ಷ್ಮಿಯೂ ಇಲ್ಲಿ ಮಾಡ್ತಿರೋದೇ ಹೊರತು, ಆಕೆ ಹರಿಯ ಗುಲಾಮಳಲ್ಲ. ಜಗದೇಕ ಸುಂದರಿಯಾದ ಸಿರಿಲಕ್ಷ್ಮಿಯನ್ನು ಮನಸಾರೆ ವರಿಸಿದ ಮಹಾವಿಷ್ಣುವು ಆಕೆಗೆ ಅಸಲಿಗೆ ಕೊಟ್ಟಿರುವ ಸ್ಥಾನ ತನ್ನ ಹೃದಯದಲ್ಲಿ. ಅರ್ಥಾತ್ ಲಕ್ಷ್ಮೀ ವಿಷ್ಣುವಿನ ಪ್ರಾಣಕ್ಕೆ ಸಮ. ಆಕೆ ಆತನ ಎದೆಬಡಿತ. ಇಂಥ ಪರಮೋಚ್ಛ ಸ್ಥಾನ ಕೊಟ್ಟ ಪತಿಯ ಸೇವೆ ಮಾಡೋದ್ರಲ್ಲಿ ಲಕುಮಿಯೂ ಸುಖಿಸುವಳು.
image credits: https://ift.tt/3i6lkn9
ಪರಮಾತ್ಮನ ಪಾದವನ್ನು ಒತ್ತೋದ್ರಿಂದಭಕ್ತಿ ಸಮರ್ಪಣೆ
ಪರಮಾತ್ಮನ ಪಾದವನ್ನು ಒತ್ತೋದ್ರಿಂದಲೂ ಭಕ್ತಿ ಸಮರ್ಪಣೆಯಾಗುತ್ತದೆಯಂತೆ. ಈ ಸಂಗತಿಯನ್ನು ಮಹಾಲಕ್ಷ್ಮೀ ಮಾತ್ರವೇ ಪೂರ್ಣಗೊಳಿಸೋ ಗುಣ ಹೊಂದಿರುವಳು. ಇದೇ ಕಾರಣಕ್ಕೆ ವಿಷ್ಣುವು ಆಕೆಗೆ ಒಲಿದನಂತೆ. ಸಾತ್ವಿಕ ಗುಣವುಳ್ಳವನಾದ ಪರಮಾತ್ಮನ ಸೇವೆಗೆ ಲಕುಮಿ ಮಾತ್ರವೇ ಅರ್ಹಳೂ ಕೂಡ. ತನ್ನೊಡೆಯನ ಮೇಲಿನ ಅನುರಾಗದಿಂದ ಆತನ ಪಾದ ಒತ್ತುವುದರ ಸಹಿತ ಎಲ್ಲ ವಿಧದ ಸೇವೆ ಮಾಡೋಳೆ ಲಕ್ಷ್ಮೀ. ಅದಕ್ಕೇ ಆಕೆಯನ್ನು ನಿತ್ಯಾವಿಯೋಗಿನಿ ಎಂದೇ ಕರೆಯಲಾಗುವುದು.
ಪತಿಯ ಸೇವೆಯಲ್ಲಿ ಸಿರಿದೇವಿಗೆ ಬಲು ನಿಷ್ಠೆ
image credits: https://ift.tt/3i6lkn9
ಹಲವಾರು ರೀತಿಯ ಉಪಚಾರಗಳಲ್ಲಿ ಪಾದಸೇವೆಯೂ ಒಂದು. ಜಗತ್ತಿನ ಸಕಲ ಜೀವಿಗಳನ್ನು ಲಾಲಿಸಿ ಪಾಲಿಸಿ ದಣಿಯುವ ಸರ್ವಶಕ್ತನ ಪದತಲಗಳ ಬಳಿ ಆಸೀನಳಾಗಿ ಮೃದುವಾಗಿ ಒತ್ತುವ ಪರಿ ಲಕ್ಷ್ಮೀ ಮಾತೆಗೆ ಬಲುಪ್ರಿಯ. ಈ ಕ್ರಿಯೆ ಅತೀವ ಆನಂದ ಜ್ಞಾನ ಕೊಡುತ್ತೆ ಎನ್ನಲಾಗುವುದು. ಇದೇ ಕಾರಣಕ್ಕೆ ಹರಿಯ ಜೊತೆ ಆಕೆ ಸದಾ ಆನಂದದಿಂತಳಾಗಿರುವಳು. ಜೊತೆಗೆ ತನ್ನೊಡೆಯನನ್ನು ಸ್ಮರಿಸಿ, ಪೂಜಿಸಿ, ಹಾಡಿ ಹೊಗಳುವ ಎಲ್ಲರಿಗೂ ಹೆಚ್ಚೆಚ್ಚು ಆನಂದ ಕೊಡುವ ವಿಶ್ವರೂಪಿಣಿಯೂ ಲಕ್ಷ್ಮಿಯೇ ಆಗಿರುವಳು.
ಪತಿಸೇವೆಯಲ್ಲಿ ಪರಮಸುಖ ಕಾಣೋ ಸಿರಿದೇವಿಯ ಔದಾರ್ಯ ಗುಣಗಳ ಬಗ್ಗೆ ತಿಳಿದುಕೊಂಡ್ರಿ. ಜಗತ್ತಿನ ಅಷ್ಟೈಶ್ವರ್ಯಗಳಿಗೆ ಒಡತಿಯಾದ ಲಕ್ಷ್ಮಿಯು ಆ ಶಕ್ತಿ ಗಳಿಸಿದ್ದೇ ಶ್ರೀಹರಿಯಿಂದ ಅಂದ್ರೆ ನಂಬ್ಲೇಬೇಕು. ಹೌದು, ಲಕ್ಷ್ಮೀದೇವಿಗೆ ಸಕಲ ಐಸಿರಿ ಒಲಿಯಲು ಕಾರಣ ಮಗದೊಮ್ಮೆ ಆಕೆಯ ಪತಿ ಮೇಲಿನ ಅತೀವ ಪ್ರೇಮ.
ಲಕ್ಷ್ಮಿಗೊಲಿದ ಅಷ್ಟೈಶ್ವರ್ಯ, ಮಹಾವಿಷ್ಣುವಿನ ಕೃಪಾಕಟಾಕ್ಷ
image credits: https://ift.tt/3i6lkn9
ಸಂಪತ್ತಿನ ದೇವತೆ ಲಕ್ಷ್ಮೀ ಮಾತೆ ಐಸಿರಿಯಲ್ಲಿ ಮಾತ್ರ ಸಿರಿವಂತಳಲ್ಲ, ಆಕೆ ಸರ್ವಗುಣ ಸಂಪನ್ನಳೂ ಹೌದು. ಹಿಂದೂಗಳ ಪಾಲಿಗಂತೂ ಆಕೆ ಅದೃಷ್ಟದ ಸಂಕೇತ. ತನಗೆ ಇನ್ನಿಲ್ಲದ ಗೌರವಾದರಗಳನ್ನು ಕೊಡಮಾಡುವವರಿಗೆ ಅಷ್ಟೇ ಧಾರಾಳಿಯಾಗಿ ಧನಕನಕ, ಆಸ್ತಿ ಅಂತಸ್ತುಗಳನ್ನು, ಸಮಾಜದಲ್ಲಿ ಗೌರವ ಸ್ವರೂಪದ ಸಂಪತ್ತನ್ನು ದಯಪಾಲಿಸುವ ಕರುಣಾಮಯಿ ಆಕೆ. ಲೌಕಿಕ ಮತ್ತು ಆಧ್ಯಾತ್ಮಿಕ ಸಂಪತ್ತಿಗೂ ಅವಳೇ ಅಧಿದೇವತೆ. ಇಂಥ ಸಿರಿದೇವಿಯ ಮನಸ್ಸಲ್ಲಿ ಸದಾಕಾಲ ವಿರಾಜಿಸುವವನು ಜಗದೊಡೆಯ ಮಹಾವಿಷ್ಣು.
ಮಹಾವಿಷ್ಣುವು ತ್ರಿಮೂರ್ತಿಗಳಲ್ಲೇ ಅತಿ ವಿಶಿಷ್ಟ ಗುಣವುಳ್ಳವನು. ಆತ ಮಹಾ ಮಹಿಮಾನ್ವಿತನು. ವಿಷ್ಣುವಿನ ಸಾತ್ವಿಕ ಗುಣ ಪ್ರಭಾವ ಎಂಥದ್ದು ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಿಲ್ಲ. ಮಹಾವಿಷ್ಣುವಿನ ಸಾತ್ವಿಕ ಗುಣಾವಳಿಯು ಎಷ್ಟು ಉತ್ಕಷ್ಟದ್ದು ಅಂತ ಸಾರಿ ಹೇಳ್ತವೆ ನಮ್ಮ ಪುರಾಣಗಳು. ಕೆಲ ಸಂದರ್ಭಗಳಲ್ಲಿ ಜಟಾಧಾರಿ ಹರನು ಮತ್ತು ಚತುರ್ಮುಖ ಬ್ರಹ್ಮನಿಗಿಂತ ವಿಷ್ಣುವು ಅತ್ಯುಚ್ಛ ಅನ್ನಿಸಿಕೊಳ್ಳಲು ಇದುವೂ ಕಾರಣ. ತಾಮಸ, ರಜೋಗುಣಗಳನ್ನು ತ್ಯಜಿಸಿ ಸಾತ್ವಿಕತೆಯನ್ನು ತನ್ನದಾಗಿಸಿಕೊಂಡ ಹರಿಯ ಮನದೊಡತಿಯೂ ಆತನ ಗುಣಸ್ವಭಾವಕ್ಕೆ ಅನುಗುಣಳಾದವಳೇ ಇರಬೇಕು. ಮತ್ತು ಅಂಥ ಸರ್ವಗುಣ ಸಂಪನ್ನೆಯು ದೇವಿ ಮಹಾಲಕ್ಷ್ಮಿಯಲ್ಲದೆ ಮತ್ತಾರೂ ಅಲ್ಲ.
image credits: https://ift.tt/3i6lkn9
ಸಮುದ್ರಮಂಥನದ ವೇಳೆ ಜನಿಸಿದ ಮಹಾಲಕುಮಿ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಕರುಣಿಸುವವಳು. ನೀವು ಬಂಗಾರ, ಬೆಳ್ಳಿಯಂಥ ಅಮೂಲ್ಯ ಲೋಹಗಳನ್ನು ಗಮನಿಸಿದ್ದೀರಾ. ಚಿನ್ನ ಬೆಳ್ಳಿಯ ಪರಿಶುದ್ಧತೆಯೇ ಅದರ ಹೊಳಪನ್ನು, ಮೌಲ್ಯವನ್ನು ನಿರ್ಧರಿಸುತ್ತದೆ. ಹೊಳಪು ಮತ್ತು ಮಿಕ್ಕೆಲ್ಲಾ ಲೋಹಗಳಿಗಿಂತ ಅಮೂಲ್ಯವಾಗಿರೋದೇ ಅವುಗಳ ಶ್ರೇಯಸ್ಸು. ಹಾಗೇ ಚಂಚಲತೆ, ಹುಡುಗು ಸ್ವಭಾವಗಳು ಹರಿಯ ಗುಣಸ್ವಭಾವಕ್ಕೆ ಒಪ್ಪುವಂಥವಲ್ಲ. ಸಾತ್ವಿಕತೆ ಆತನ ಗುಣೋಧರ್ಮ. ಕಿಂಚಿತ್ ದೋಷವಿಲ್ಲದ ಅಂಥ ವ್ಯಕ್ತಿತ್ವಕ್ಕೆ ಸರಿಹೊಂದುವವಳೇ ಲಕ್ಷ್ಮೀದೇವಿ.
ಪುರಾಣಗಳೇ ಹೇಳುವಂತೆ ಲಕ್ಷ್ಮೀ ಮಾತೆ ಮತ್ತು ಹರಿಯ ಪರಸ್ಪರ ಒಲವಿನ ಸರಪಳಿ ಯುಗಯುಗಗಳಿಗೂ ಬಿಡಿಸಲಾರದಂಥದ್ದು. ಧರೆಯಲ್ಲಿ ಮಹಾವಿಷ್ಣು ಶ್ರೀರಾಮನಾಗಿ ಅವತರಿಸಿದಾಗ ಸೀತೆಯಾಗಿ ಜನಿಸಿ ಕೈಹಿಡಿದ ಜಾನಕಿ ಸ್ವಯಂ ಮಹಾಲಕ್ಷ್ಮಿ. ಶ್ರೀಕೃಷ್ಣನಾಗಿ ಹರಿಯು ಅವತಾರವೆತ್ತಿದಾಗ ರಾಧಾ ರುಕ್ಮಿಣಿಯರ ಸ್ವರೂಪದಲ್ಲಿ ನಂದಕಿಶೋರನ ಮನದನ್ನೆಯಾದಳು. ಅದಕ್ಕೇ ಆಕೆ ಹರಿಯ ಪ್ರಾಣಸಖಿ. ಪದ್ಮಪ್ರಿಯಳು ಹರಿಯ ಸೇವೆಗೈದು ಆತನ ಕೃಪೆಯಿಂದಲೇ ಆಕೆ ಇಡೀ ಜಗತ್ತಿಗೆ ಸಿರಿ ಸಂಪತ್ತನ್ನು ಕರುಣಿಸುವಳಂತೆ.
image credits: https://ift.tt/3i6lkn9
ಲಕ್ಷ್ಮಿ ಪಯಣಿಸೋ ಪಕ್ಷಿ ಗೂಬೆ..!
ಪುರಾಣಗಳಲ್ಲಿ ಹೇಳುವಂತೆ ಶಿವನಿಗೆ ನಂದಿಯೂ, ಗಣಪನಿಗೆ ಮೂಷಿಕನೂ, ಸ್ಕಂದನಿಗೆ ಮಯೂರವೂ, ಹರಿಗೆ ಗರುಡವೂ ವಾಹನಗಳು. ಅಂತೆಯೇ ಜಗನ್ಮಾತೆ ಲಕ್ಷ್ಮಿಯ ವಾಹನ ಗೂಬೆ ಅಂತ ಉಲ್ಲೇಖಿಸಲಾಗುತ್ತೆ. ಹಗಲು ಹೊತ್ತಲ್ಲಿ ನೋಡಲಾಗದ ಗೂಬೆಯನ್ನು ಲಕುಮಿ ತನ್ನ ವಾಹನವಾಗಿಸಿಕೊಳ್ಳಲೂ ಕಾರಣವಿದೆ. ಲಕ್ಷ್ಮೀ ಮಾತೆಯು ಕೇವಲ ತನ್ನನ್ನು ಶುದ್ಧ ಚಿತ್ತದಿಂದ ಆರಾಧಿಸೋ ಭಕ್ತರ ಮನೆಗೆ ಮಾತ್ರ ಬರುವಳಂತೆ. ಅಷ್ಟೇ ಅಲ್ಲ, ಯಾರ ಮನೆಯಲ್ಲಿ ಗರುಡಾಸೀನನಾದ ವಿಷ್ಣುವಿಗೆ ಪ್ರಥಮ ಪೂಜೆ ಸಲ್ಲುವುದೋ ಅಂಥವರ ನಿವಾಸಗಳಿಗೆ ಪದ್ಮನಯನೆ ಸಂತುಷ್ಟ ಮನದಿಂದ ಆಗಮಿಸುವಳಂತೆ. ಅಷ್ಟರ ಮಟ್ಟಿಗೆ ಆಕೆ ಪತಿಪ್ರಿಯಳು. ಲಕ್ಷ್ಮಿಯ ವಾಹನ ಗೂಬೆಯು ಅಂಧಕಾರದಲ್ಲೂ ಜಗತ್ತನ್ನು ಸ್ಪಷ್ಟವಾಗಿ ಕಾಣಬಲ್ಲ ಗುಣವುಳ್ಳ ಪಕ್ಷಿ. ಅಂಧಕಾರವು ನಿರ್ಲಕ್ಷ್ಯದ ಸಂಕೇತ. ಹೀಗೆ ಸಂಪಾದನೆಯಾದ ಸಂಪತ್ತನ್ನು ಮೆಟ್ಟಿ ನಿಲ್ಲುವಳಂತೆ ಲಕ್ಷ್ಮೀದೇವಿ.
image credits: https://ift.tt/3i6lkn9
ಒಟ್ಟಿನಲ್ಲಿ ಮಾತೆ ಲಕ್ಷ್ಮಿಯ ಕೃಪೆಯು ಜಗತ್ತಿನ ಎಲ್ಲಾ ನ್ಯಾಯಮಾರ್ಗದಲ್ಲಿ ಗಳಿಸಿದ ಸಂಪತ್ತಿನ ಮೇಲೂ ಖಂಡಿತ ಇದೆ. ಇಂಥ ಜಗನ್ಮಾತೆ ಮಾತ್ರವೇ ಸರ್ವಗುಣ ಸಂಪನ್ನನೂ, ಶೂರವೀರನೂ, ಮಹಾಸಾತ್ವಿಕ ಗುಣವುಳ್ಳವನೂ ಆದ ಶ್ರೀಹರಿಯ ಮಡದಿಯಾಗಲು ಅರ್ಹಳು ಅಂತ ಪುರಾಣಗಳು ಸಾರಿ ಸಾರಿ ಹೇಳ್ತವೆ. ತನಗೊಲಿದ ಸೌಭಾಗ್ಯವನ್ನು ಜನರಂಜನಿ ನಿತ್ಯಪ್ರಕಾಶಿನಿ ಲಕ್ಷ್ಮಿಯು ಹೃದಯಾಂತರಾಳದಿಂದ ಸ್ವೀಕರಿಸಿ ಅಕ್ಷರಶಃ ಪಾಲಿಸುತ್ತಿದ್ದಾಳೆ.
from ಸುದ್ದಿ - Planet Tv https://ift.tt/2RTUO5N
May 29, 2021 at 09:02AM