ಶತಮಾನಗಳ ಇತಿಹಾಸವಿರುವ ಖಡಕ್ ಸಮರ ಕಲೆ ಕಳರಿಪಯಟ್ಟು
ಪ್ರಪಂಚದಲ್ಲಿ ಹಲವಾರು ಸಮರ ಕಲೆಗಳಿವೆ. ಇಂದು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಹೊಂದಿರುವ ಕುಂಗ್ ಫು ಮತ್ತು ಕರಾಟೆ ಎಂಬ ಸಮರ ಕಲೆಯ ಮೂಲ ಭಾರತ. ಭಾರತದಲ್ಲಿ ವೇದಗಳ ಕಾಲದಲ್ಲಿ ಹುಟ್ಟಿದ ಸಮರ ಕಲೆ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದ ಮಣ್ಣಿನಲ್ಲಿ ಹುಟ್ಟಿದ ಸಾಪ್ರದಾಯಿಕ ಕುಸ್ತಿ ಕಲೆ ಪ್ರಪಂಚದಾದ್ಯಂತ ವಿಭಿನ್ನ ಹೆಸರಿನಲ್ಲಿ ಪ್ರಸಿದ್ಧಿಯಾಗಿದೆ. ಕುಂಗ್ ಫು, ಥೈಕಾಂಡೋ, ಕರಾಟೆ ಹೀಗೆ ಅನೇಕ ಅಂತರರಾಷ್ಟೀಯ ಸಮರ ಕಲೆಗಳಿಗೆ ಮೂಲ ಬೇರಾಗಿದ್ದು ಭಾರತದ ಸಮರ ಕಲೆ. ನಮ್ಮ ದೇಶದ ಮಣ್ಣಿನ ಸೊಗಡಿನಿಂದ ಹುಟ್ಟಿ ಬಂದ ಕಲೆ ಈಗ ಜಾಗತಿಕವಾಗಿ ದೊಡ್ಡ ಹೆಸರನ್ನು ಪಡೆದಿದೆ.ಅದೇ ರೀತಿಯ ಒಂದು ಕಲೆ ಇದು.
source and pic credit: https://ift.tt/3vaWpCE
ನಿಂತಲ್ಲಿ ನಿಲ್ಲದೆ ಮಿಂಚಿನಂತೆ ಸಂಚರಿಸುತ್ತಾರೆ.ಗಾಳಿಯವೇಗದಲ್ಲಿ ಕತ್ತಿಯನ್ನು ಬೀಸುತ್ತಾರೆ.ಅಸ್ತ್ರಕ್ಕೆ ಅಸ್ತ್ರ..ಶಸ್ತ್ರಕ್ಕೆ ಶಸ್ತ್ರ.. ಹದ್ದಿನಕಣ್ಣಿನಿಂದ ನೋಡುತ್ತಾರೆ. ಚಿರತೆಯಂತೆ ಜಿಗಿಯುತ್ತಾರೆ. ಬೀಸಿ ಬರುವ ಕತ್ತಿಯ ರಭಸಕ್ಕೆ ಕ್ಷಣ ಮಾತ್ರದಲ್ಲಿ ಪ್ರತಿರೋಧ ಒಡ್ಡಬೇಕು. ಅಷ್ಟೇ ವೇಗದಲ್ಲಿ ಪ್ರತಿದಾಳಿ ಮಾಡಬೇಕು. ದೇಹದ ಪ್ರತಿ ಅಂಗಾಂಗಗಳೂ ಶರವೇಗದಲ್ಲಿ ಚಲಿಸಬೇಕು.ಅದುವೇಮೈನವಿರೇಳಿಸುವ ಸಮರ ಕಲೆಕಳರಿಪಯಟ್ಟು.
ದಕ್ಷಿಣ ಭಾರತದ ಕೇರಳದಲ್ಲಿ ಹುಟ್ಟಿದ ಈ ಕಳರಿಪಯಟ್ಟು ಸಮರ ಕಲೆಗೆ ಶತಮಾನಗಳ ಇತಿಹಾಸವಿದೆ. ಅಂಗಾಂಗಳ ಚಲನೆ ಮತ್ತು ದೇಹಧಾರ್ಡ್ಯಗಳ ಸಂಯೋಜನೆಯಲ್ಲಿ ಮೂಡಿಬಂದಿದೆ ಈ ಸಮರ ಕಲೆ ಕಳರಿಪಯಟ್ಟು. ಈ ಪುರಾತನ ಕಲೆಯ ಬೇರುಗಳ ಜಾಡು ಹಿಡಿದು ಹೊರೆಟರೆ ಅದು ಧನುರ್ ವೇದಗಳ ಕಾಲಕ್ಕೆ ತಲುಪುತ್ತದೆ. ಈ ವೈಜ್ಞಾನಿಕ ಸಮರ ಕಲೆಯಲ್ಲಿ ಆಯುಧಗಳು ಬಳಕೆಯಾಗುತ್ತೆ, ಹಾಗೆಯೇ ಬರಿಗೈ ಕುಸ್ತಿಗಳೂ ಒಳಗೊಂಡಿದೆ.
source and pic credit: https://karmagroup.com
ಕಳರಿಪಯಟ್ಟು ಸಮರಕಲೆಯ ಹಿನ್ನಲೆ
7 ಮತ್ತು 8ನೇ ಶತಮಾನದಲ್ಲಿ ಪೆರುಮಾಳ್ ಆಳ್ವಿಕೆಯ ಕಾಲದಲ್ಲಿ ಕಳರಿಪಯಟ್ಟು ಸಮರ ಕಲೆಗೆ ಚಿನ್ನದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಅನೇಕ ಸಾಮ್ರಾಜ್ಯಗಳಿದ್ದವು. ಅವುಗಳಲ್ಲಿ ರಾಜರು ಖಾಸಗಿ ಸೈನ್ಯಗಳನ್ನು ಹೊಂದಿದ್ದರು, ಆ ಸೇನಾನಿಗಳು ಕಳರಿಪಯಟ್ಟು ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಪೋರ್ಚುಗೀಸ್ ಕಾಲದಲ್ಲಿ ಇದ್ದ ಈ ಕಳರಿಪಯಟ್ಟು ಆನಂತರ ಬ್ರಿಟಿಷರ ಕಾಲದಲ್ಲೂ ಮುಂದುವರೆಯಿತು.1804ರಲ್ಲಿ ಪರ್ಷಿಯಾ ಧಂಗೆಯಾಗಿತ್ತು. ಇದು ಶಸ್ತ್ರಸಜ್ಜಿತ ಧಂಗೆಯಾಗಿತ್ತು. ಅಲ್ಲೂ ಸಹಾ ಕಳರಿಪಯಟ್ಟು ಸಮರ ಕಲೆ ಇತ್ತು.
source and pic credit: https://ift.tt/3vaWpCE
ಆಂಗ್ಲರಲ್ಲಿ ಆತಂಕ ಹುಟ್ಟಿಸಿತ್ತು ಕಳರಿಪಯಟ್ಟು ಕಲೆ
ಕಳರಿಪಯಟ್ಟು ಬಡಿದಾಟದ ಕಲೆ ಬ್ರಿಟಿಷರನ್ನೇ ಕಂಗೆಡಿಸಿತ್ತು. ಯಾಕೆಂದರೆ ಕಳರಿಪಯಟ್ಟು ಎಂಬುದು ಬಹಳ ಕಠಿಣವಾದ ಕಲೆಯಾಗಿತ್ತು. ಅದರಲ್ಲಿನ ಭೀಕರತೆಗೆ ಬ್ರಿಟಿಷರೇ ಬೆದರಿದ್ದರು. ಇದೊಂದೇ ಕಲೆಯಿಂದ ಭಾರತೀಯರು ವೀರ ಸೇನಾನಿಗಳಾಗಿ ಬೆಳೆದು ನಿಲ್ಲೋದು ಗ್ಯಾರಂಟಿ ಎಂದು ಅರಿತಿದ್ದ ಬ್ರಿಟಿಷರು, ಆ ಸಮರ ಕಲೆಯನ್ನೇ ಬ್ಯಾನ್ ಮಾಡಿದ್ದರು. ಅಂದಿನ ದಿನಗಳಲ್ಲಿ ಕಳರಿಪಯಟ್ಟು ಕಲಿಯುತ್ತಿದ್ದವರನ್ನು ಬ್ರಿಟಿಷರು ಜೈಲಿಗೆ ಹಾಕುತ್ತಿದ್ದರು.
source and pic credit: https://ift.tt/2SXkH4M
ಮಹಾಭಾರತದಲ್ಲೂ ಇತ್ತು ಕಲರಿಯ ಕಲರವ
ಕಳರಿಪಯಟ್ಟುವಿನ ಕುರುಹುಗಳು ಮಹಾಭಾರತ ಮತ್ತು ರಾಮಾಯಣದಲ್ಲೂ ಇತ್ತು. ಅಗಸ್ತ್ಯ, ಬಲರಾಮ, ಭೀಮ ದುರ್ಯೋಧನ, ಪರಶುರಾಮ, ಹನುಮಂತ, ಜಾಂಬುವಂತ ಹೀಗೆ ಹಲವರು ಈ ಸಮರ ಕಲೆಯನ್ನು ಕಲಿತಿದ್ದರು. ಗದಾಯುದ್ಧ, ಮಲ್ಲ ಯುದ್ಧ, ಭರ್ಜಿ ಕುಸ್ತಿ. .ಹೀಗೆ ಅನೇಕ ಪುರಾತನ ಯುದ್ಧ ನೀತಿಗಳ ಹಾದಿಯಲ್ಲೇ ಈ ಕಳರಿಪಯಟ್ಟು ಸಮರ ಕಲೆಯ ಹೆಜ್ಜೆ ಗುರುತುಗಳಿವೆ. ಹಾಗೇ ಯುಗಗಳಿಂದ ಶತಮಾನಗಳಲ್ಲಿ ಸರಿದು ಬಂದ ಈ ಸಮರ ಕಲೆಯಲ್ಲಿ ವೈಜ್ಞಾನಿಕತೆಯೂ ಅಡಕವಾಗಿದೆ.ಈ ಸಮರ ಎಷ್ಟು ರಣಭೀಕರವಾಗಿದೆಯೋಅಷ್ಟೇ ಶಿಸ್ತನ್ನು ಕೂಡಾ ಅಳವಡಿಸಿಕೊಂಡಿದೆ. ಪುರಾತನ ಯೋಗಾಸನದ ಕೆಲವು ಅಂಶಗಳು ಈ ಕಳರಿಪಯಟ್ಟುವಿನಲ್ಲಿ ಅಡಕವಾಗಿದೆ. ಹಾಗೆಯೇ ಭಾರತೀಯ ನೃತ್ಯ ಕಲೆ, ನಟ ನೃತ್ಯಗಳ ಕೆಲವು ಬಾವ ಭಂಗಿಗಳು ಈ ಸಮರ ಕಲೆಯಲ್ಲಿದೆ.
source and pic credit: https://www.google.com
ಕಳರಿಪಯಟ್ಟುವಿನ ಕಲೆಯಲ್ಲಿ ಹಲವು ವಿಶೇಷತೆಗಳಿವೆ.ಅದರಲ್ಲಿ ಪ್ರಾಣಿಗಳ ಶೈಲಿಯೂ ಒಂದು.ಹೊಂಚು ಹಾಕುವ ರೀತಿ, ಎದುರಾಳಿಗಳ ಮೇಲೆ ಪ್ರಾಣಿಗಳು ದಾಳಿ ಮಾಡುವ ಪರಿ, ಅವುಗಳ ಹಾವಭಾವ ಹೀಗೆ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಕಳರಿಪಯಟ್ಟುವಿನಲ್ಲಿ ಅಳವಡಿಸಲಾಗಿದೆ. ಆರನೇ ಶತಮಾನದಲ್ಲೇ ಅಂದರೆಚೋಳರ ಕಾಲದಲ್ಲೇ ಕಳರಿಪಯಟ್ಟುವಿನ ಕುರುಹುಗಳಿದ್ದವು. ದಕ್ಷಿಣ ಕೇರಳದಲ್ಲಿ ಬಹಳ ಹಳೆಯದಾದ ವೆಳ್ಳಂಕಳಿ ಎಂಬುದು ಅಲ್ಲಿನ ಸಾಂಪ್ರಧಾಯಿಕ ನೃತ್ಯ ಕಲೆ. ನಾಯರ್ ಜನಾಂಗದವರು ಮಾಡುತ್ತಿದ್ದ ಈ ನೃತ್ಯ ಶೈಲಿಯೂ ಕಳರಿಪಯಟ್ಟುವಿನಲ್ಲಿದೆ. ಕಳರಿಪಯಟ್ಟುವಿನ ಪ್ರಾದೇಶಿಕ ರೂಪಾಂತರಗಳು ಕೇರಳದ ಆಯಾ ಭೌಗೋಳಿಕ ಪ್ರದೇಶದ ಮೇಲೆ ಅವಲಂಬಿತವಾಗಿರುತ್ತೆ.
ಕಳರಿಪಯಟ್ಟು ಕಲಿಗಳ ಕಾಳಗ, ಆಯುಧಗಳ ಅಪಾಯದ ಆಟ
source and pic credit: https://ift.tt/1TqjAkU
ಕಳರಿ ಎಂಬುದು ಸಮರ ಕಲೆಯನ್ನು ಕಲಿಯುವ ಕುಟೀರಕ್ಕೆ ಕರೆಯುವ ಹೆಸರು. ಈ ಕಳರಿ ಎಂಬ ಕುಟೀರದಲ್ಲಿ ಕಳರಿಪಯಟ್ಟು ಕಲಿಯುವಾಗ ನೆಲದಲ್ಲಿರುವ ನಾಲ್ಕು ಅಡಿಯಷ್ಟು ಮಣ್ಣನ್ನು ತೆಗೆದು ಒಂದು ಸಮತಟ್ಟಾದ ಜಾಗ ಮಾಡುತ್ತಾರೆ .ಒಂದು ಮೂಲೆಯಲ್ಲಿ ಪೂಜೆಗೆ ಜಾಗ ಮಾಡಿರುತ್ತಾರೆ. ಅದನ್ನು ಪೋತ್ರ ಎನ್ನುತ್ತಾರೆ. ಮತ್ತೊಂದು ಬದಿಯಲ್ಲಿ ಗುರುತ್ರ ಎಂಬ ಸ್ಥಳವಿರುತ್ತೆ. ಅಲ್ಲಿ ಕಲೆಯ ಹಳೆಯ ಶಿಕ್ಷಕರಿಗೆ ಗುರು ಸ್ಥಾನ ನೀಡಿ ಗೌರವಿಸಲಾಗುತ್ತೆ. ಕಳರಿಪಯಟ್ಟು ಸಮರ ಕಲೆಯನ್ನ ನಾಲ್ಕು ವಿಭಾಗಗಳಲ್ಲಿ ಅಭ್ಯಾಸ ಮಾಡುತ್ತಾರೆ.
ಮೊದಲನೆಯದು ಮೆಪಯಟ್ ಎಂದು ಕರೆಯುತ್ತಾರೆ. ಈ ಭಾಗದಲ್ಲಿ ದೇಹ ಸ್ಥಿತಿಯನ್ನು ಹಗುರ ಮಾಡಲಾಗುತ್ತೆ. ಇದರಿಂದ ಮೂಳೆ ಜೋಡಣೆಗಳು ಹಗುರವಾಗುತ್ತೆ. ಎರಡನೆಯದು ಕೋಲು ಕುಸ್ತಿ ಇಲ್ಲಿ ಮರದಿಂದ ಮಾಡಿದ ಆಯುಧಗಳನ್ನ ಬಳಸಿ ಕುಸ್ತಿ ಅಭ್ಯಾಸ ಮಾಡುತ್ತಾರೆ. ಮೂರನೆಯದು ಸ್ವಲ್ಪ ತೀಕ್ಷಣವಾದದ್ದು ಯಾಕೆಂದರೇ ಇಲ್ಲಿ ಚೂಪಾದ ಆಯುಧಗಳನ್ನು ಬಳಸುತ್ತಾರೆ, ಕತ್ತಿ ಗುರಾಣಿ, ಡ್ಯಾಗರ್ ಮುಂತಾದ ಅಪಾಯದ ಆಯುಧಗಳನ್ನು ಬಳಸುತ್ತಾರೆ ಅದರ ಜೊತೆಗೆ ಸೊಂಟದ ಸುತ್ತಲ್ಲೂ ಬಳಸಿಕೊಳ್ಳುವ ಸಾಧನಗಳನ್ನ ಬಳಸುತ್ತಾರೆ ಈ ವಿಭಾಗಕ್ಕೆ ಅಂಗತ್ತಾರಿ ಎನ್ನುತ್ತಾರೆ. ನಾಲ್ಕನೆಯ ಕೊನೆಯ ಹಂತದಲ್ಲಿ ಬರಿಗೈ ಕುಸ್ತಿ ಮಾಡುತ್ತಾರೆ ಇದರಲ್ಲೂ ಹಲವು ವಿಧಗಳಿರುತ್ತೆ.
ource and pic credit: https://ift.tt/3vaWpCE
ಕೇರಳದ ಕಣ್ಣೂರು ಜಿಲ್ಲೆಯ ಮಲಬಾರಿ ಕರಾವಳಿ ಪ್ರೆದೇಶದ ತಲಾಸರಿ ಎಂಬಲ್ಲಿ 1960ರಲ್ಲಿ ಕಳರಿಪಯಟ್ಟು ಕಲೆ ಹರಡಿತು. ಆನಂತರ ಅದು 1970ರಲ್ಲಿ ವಿಶ್ವ ವ್ಯಾಪ್ತಿಯಾಗಿ ಬೆಳೆಯಲಾರಂಭಿಸಿತು. ಕಳರಿಪಯಟ್ಟುವಿನಲ್ಲಿ ದಿಕ್ಕುಗಳ ಆಧಾರದಲ್ಲೂ ಭಿನ್ನ ನೆಲೆಗಳಿವೆ. ಉತ್ತರದ ಕಳರಿಪಯಟ್ಟುವನ್ನ ವಧಾಕಾನ್ ಕಲರಿ ಎನ್ನುತ್ತಾರೆ. ಇದನ್ನ ಹೆಚ್ಚಾಗಿ ತೈಯನ್ಸ್ ಮತ್ತು ಕುರುಪುಗಳ ಜನಾಂಗದವರು ಅಭ್ಯಾಸ ಮಾಡುತ್ತಾರೆ. ಈ ವಿಭಾಗದಲ್ಲಿ ಆಯುಧಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ವಿಷ್ಣುವಿನ ಆರನೇ ಅವತಾರ ಎಂದು ಹೇಳಲಾಗುವ ಪರಶುರಾಮನ ಉಲ್ಲೇಖ ಇಲ್ಲಿ ಬಹಳ ಮುಖ್ಯ.ಈ ಉತ್ತರದ ಕಳರಿಯ ಸಮರ ಕಲೆಯ ಮುಖ್ಯ ಶೈಲಿ ರೂಪುಗೊಂಡಿದ್ದೇ ಪರಶುರಾಮನಿಂದಎಂದು ಇತಿಹಾಸದಲ್ಲಿದೆ.
source and pic credit: https://www.ozy.com
ಕಳರಿಪಯಟ್ಟು ಎಂಬ ವಿದ್ಯೆ ಬರೀ ಹೊಡೆದಾಟ ಮತ್ತು ಕುಸ್ತಿಗಳಿಗೆ ಸೀಮಿತವಾಗಿಲ್ಲ. ಅಲ್ಲಿ ಮಸಾಜ್ ಕೂಡಾ ಇದೆ. ಈ ಮಸಾಜ್ಗೆ ವೈಜ್ಞಾನಿಕ ಹಿನ್ನಲೆ ಇದೆ. ಹಾಗೆಯೇ ಮಸಾಜ್ಗೆ ಆಯುರ್ವೇದದ ಆಯಾಮವೂ ಇದೆ. ಈ ಮಸಾಜ್ ದಣಿದ ದೇಹದ ಮಾಂಸಖಂಡಗಳನ್ನು ನವಿರಾಗಿಸುತ್ತೆ. ಗಿಡ ಮೂಲಿಕೆಗಳಿಂದ ತಯಾರಾದ ಎಣ್ಣೆ ಮಸಾಜ್ ನರಗಳನ್ನು ನವಿರಾಗಿಸಿ ನೋವನ್ನು ಶಮನ ಮಾಡುತ್ತದೆ. ಕಲರಿಪಯಟ್ಟುವಿನ ಹಲವು ವಿದ್ಯೆಗಳಲ್ಲಿ ಈ ಮಸಾಜ್ ಕೂಡಾ ಪ್ರಮುಖವಾದದ್ದು.
ಕನ್ನಡ ಚಿತ್ರರಂಗದಲ್ಲೂ ಕಳರಿಪಯಟ್ಟು
source and pic credit: Deccan herald
1978ರಲ್ಲಿ ಬಿಡುಗಡೆಯಾದ ಗಿರೀಶ್ ಕಾರ್ನಾಡ್ ನಿರ್ದೇಶನದ ಶಂಕರ್ನಾಗ್ ಅಭಿನಯದ ಮೊದಲ ಚಿತ್ರವೇ ’ಒಂದಾನೊಂದು ಕಾಲದಲ್ಲಿ’. ಅಂದಿಗೆ ಆ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಗಂಡುಗಲಿ ಪಾತ್ರದಲ್ಲಿ ಶಂಕರ್ನಾಗ್ ಅದ್ಭುತವಾಗಿ ನಟಿಸಿದ್ದರು. ಆ ಚಿತ್ರದ ಮುಖ್ಯ ಹೈಲೈಟ್ ಎಂದರೇ ಸಾಹಸ. ಗಂಡುಗಲಿಯಾಗಿ ಶಂಕರ್ನಾಗ್ ಸಾಹಸ ದೃಶ್ಯಗಳಲ್ಲಿ ಮಿಂಚಿನಂತೆ ಸಂಚರಿಸಿ ಫೈಟ್ ಮಾಡಿದ್ದರು. ಆ ಸಾಹಸ ಸಂಯೋಜನೆ ಕಳರಿಪಯಟ್ಟು ಸಮರ ಕಲೆಯದ್ದೇ ಆಗಿತ್ತು. ಕಳರಿಪಯಟ್ಟುವಿನ ಹಲವು ಸಾಹಸ ಶೈಲಿಗಳು ಪ್ರೇಕ್ಷಕರನ್ನು ರಂಜಿಸಿದ್ದವು.
ಹಾಲಿವುಡ್ನಲ್ಲೂ ಕಳರಿಪಯಟ್ಟುವಿನ ಕಲರವsource and pic credit: https://ift.tt/3u4RX79
ಕುಂಗ್ ಫು ಅಥವಾ ಕರಾಟೆ ಸಮರ ಕಲೆಗಳು ಸಂಪೂರ್ಣವಾಗಿ ಕಳರಿಪಯಟ್ಟುವನ್ನ ಅವಲಂಬಿಸಿಲ್ಲ.ಆದರೆ ಕಳರಿಪಯಟ್ಟುವಿನ ತಳಹದಿಯಿಂದ ಕೆಲವು ಶೈಲಿಯ ಕುಂಗ್ ಫು ಮತ್ತು ಕರಾಟೆ ಕಲೆಗಳು ರೂಪುಗೊಂಡಿವೆ. ಚೈನಾದ ಪವಿತ್ರ ಬೆಟ್ಟಗಳ ಮೇಲೆ ನೆಲೆಸಿರುವ ಶಾವೂಲಿನ್ ಸಮರ ಕಲೆಯ ನಿಲಯಗಳಿಗೆ ದೊಡ್ಡ ಇತಿಹಾಸವಿದೆ. ಧ್ಯಾನದಲ್ಲಿ ಕೇಂದ್ರೀಕೃತವಾದ ಶವೋಲಿನ್ನಲ್ಲಿ ಹಲವಾರು ವಿದಧ ಕಲೆಗಳಿವೆ. ಅವುಗಳಲ್ಲಿ ದೇಹದ ದಂಡನೆಯೂ ಇದೆ. ಶವೂಲಿನ್ ಶಾಲೆಗಳ ಗೋಡೆಯ ಮೇಲೆ ಕಳರಿಪಯಟ್ಟುವಿನ ಸಮರ ಕಲೆಯ ಭಾವಚಿತ್ರಗಳೆವೆ. ಇದೊಂದೇ ಕುರುಹು ಕಳರಿಪಯಟ್ಟುವಿನ ಇತಿಹಾಸದ ಪುಟಗಳನ್ನು ತೆರೆದಿಡುತ್ತೆ.
ಜಾಕಿಚಾನ್ ಮೆಚ್ಚಿದ ಕಳರಿಪಯಟ್ಟು ಸಮರ ಕಲೆ
source and pic credit: pinrest.com
ಪ್ರಪಂಚದಲ್ಲೇ ಜನಪ್ರಿಯವಾಗಿರುವ ಕುಂಗ್ ಫು ಪಟು ಜಾಕಿಚಾನ್ ಕೂಡಾ ಕಳರಿಪಯಟ್ಟುವನ್ನು ಮೆಚ್ಚಿಕೊಂಡಿದ್ದರು. ಜಾಕಿಚಾನ್ ಒಬ್ಬ ವಿಶ್ವ ಮಟ್ಟದಲ್ಲಿ ದಂತಕಥೆಯಾಗಿ ಬೆಳೆದಿರುವ ವ್ಯಕ್ತಿ. ಅಂತಹಾ ವ್ಯಕ್ತಿಯನ್ನು ಕೇರಳದ ಪ್ರವಾಸಿ ಇಲಾಖೆ ತಮ್ಮ ಪ್ರವಾಸೋಧ್ಯಮದ ಪ್ರಚಾರಕ್ಕಾಗಿ ರಾಯಭಾರಿಯಾಗಬೇಕೆಂದು ಕೇಳಿಕೊಂಡಿತ್ತು. ಅದಕ್ಕಾಗಿ ಕೇರಳದ ನೆಲದ ಸಂಸ್ಕೃತಿ ಜಾನಪದ ಕಲೆ, ಅಲ್ಲಿನ ಪ್ರವಾಸಿ ಕ್ಷೇತ್ರಗಳ ಬಗ್ಗೆ ಪರಿಚಯಿಸುವ ಒಂದು ಸೀಡಿಯನ್ನ ಜಾಕಿಚಾನ್ಗೆ ಕಳುಹಿಸಿದ್ದರು. ಅದರಲ್ಲಿಕೇರಳದ ಕಳರಿಪಯಟ್ಟುವಿನ ಸಮರ ಕಲೆಯನ್ನು ನೋಡಿ ಚಿಕಿತನಾದಜಾಕಿಚಾನ್, ಕೇರಳದ ಸತ್ಯನಾರಾಯಣ ಎಂಬ ಪ್ರಬುದ್ದ ಕಳರಿಪಯಟ್ಟುವನ್ನ ಕರೆಸಿಕೊಂಡರುಈ ಸಮರಕಲೆಯ ಬಗ್ಗೆ ಹೆಚ್ಚು ತಿಳಿದುಕೊಂಡರು. ಕಡೆಗೆ ತನ್ನದೇ ’ದಿ ಮೈಥ್’ ಎಂಬ ಚಿತ್ರದಲ್ಲಿ ಕಳರಿಪಯಟ್ಟು ಸಮರ ಕಲೆಯನ್ನ ಅಳವಡಿಸಿಕೊಂಡರು.
ವೀರ ವನಿತೆಯರೂ ಕಲಿತಿದ್ದಾರೆ ಕಳರಿಪಯಟ್ಟು
source and pic credit: media india group.com
ಕಳರಿಪಯಟ್ಟು ಸಮರ ಕಲೆ ಬರೀ ಗಂಡಸರಿಗಾಗಿ ಮೀಸಲಾಗಿಲ್ಲ. ಅಲ್ಲಿ ವೀರ ವನಿತೆಯರೂ ಇದ್ದಾರೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಂದ ಹಿಡಿದು ದೊಡ್ಡ ಹೆಂಗಸರವರೆಗೆ ಕಳರಿಪಯಟ್ಟು ಕಲೆಯನ್ನ ಕಲಿಯುತ್ತಾರೆ. ಕೇರಳದ ವದಾಕರ ಕೊಪ್ಪಲುವಿನಲ್ಲಿರುವ ಎಪ್ಪತ್ತ ನಾಲ್ಕರ ವಯೋ ವೃದ್ದೆ ಮೀನಾಕ್ಷಿ ಗುರುಕಾಲ್ ಎಂಬುವರು ತಮ್ಮ ಬದುಕಿನುದ್ದಕ್ಕೂ ಕಳರಿಪಯಟ್ಟುವಿನ ಸಮರ ಕಲೆಯನ್ನು ಕರಗತ ಮಾಡಿಕೊಂಡು ಬಂದಿದ್ದಾರೆ.ನೂರಾ ಐವತ್ತು ಮಂದಿಗೆ ಕಳರಿಪಟ್ಟು ಕಲಿಸಿಕೊಡುತ್ತಿದ್ದಾರೆ. ಭಾರತದ ನೆಲದಲ್ಲಿ ಹುಟ್ಟಿ ವಿಶ್ವದಾದ್ಯಂತ ಬೆಳೆದಿರುವ ಕಳರಿಪಯಟ್ಟು ಎಂಬ ಕಲೆ ನಿಜಕ್ಕು ಭಾರತದ ಹೆಮ್ಮೆಯ ಸಮರ ಕಲೆ.
from ಸುದ್ದಿ - Planet Tv https://ift.tt/3fwu9nj
May 20, 2021 at 06:15PM