ಅಷ್ಟವಿನಾಯಕ ಮಂದಿರಗಳು ಯಾವ್ಯಾವು? ಎಲ್ಲಿವೆ ಗೊತ್ತಾ?
ಅಷ್ಟವಿನಾಯಕ ಮಂದಿರಗಳು ಯಾವ್ಯಾವು? ಎಲ್ಲಿವೆ ಗೊತ್ತಾ?
Ganesha,
ಮೋರೆಗಾಂವ್ನ ಮಯೂರೇಶ್ವರ: ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ, ಈ ಸ್ಥಳದ ಆಕಾರ, ನವಿಲಿನಂತೆ ಇರುವುದರಿಂದ ಮೋರೆಗಾಂವ ಎಂಬ ಹೆಸರು ಬಂದಿದೆ.
ಶ್ರೀ ಚಿಂತಾಮಣಿ, ತೇವೂರ: ತನ್ನ ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮದೇವರು, ಇಲ್ಲಿ ತಪಸ್ಸನ್ನು ಮಾಡಿದರಂತೆ. ಚಿಂತೆಗಳು ಮಾಯವಾದದ್ದರಿಂದ, ಮೂರ್ತಿಗೆ ಚಿಂತಾಮಣಿ ಎಂಬ ಹೆಸರು ಬಂತು. ಈ ಜಾಗವು ತೇವೂರ್ ಕುದುರೆ ಲಾಯಗಳ ಪ್ರದೇಶವೆನ್ನುತ್ತಾರೆ.
ಶ್ರೀ ಸಿದ್ಧಿವಿನಾಯಕ, ಸಿದ್ಧಟೇಕ: ವಿಷ್ಣುದೇವರು ಇಲ್ಲಿನ ಸಿದ್ಧಟೇಕ ಬೆಟ್ಟದ ಮೇಲೆ ತಪಸ್ಸನ್ನು ಆಚರಿಸಿದರಂತೆ. ಇದು ಭೀಮಾ ನದಿಯ ದಂಡೆಯ ಮೇಲಿದೆ. ಮಹಾವಿಷ್ಣುವಿಗೆ ಮಧು ಮತ್ತು ಕೈಟಭರೆಂಬ ದೈತ್ಯರನ್ನು ಸಂಹರಿಸಲು ಸಹಾಯವಾಯಿತು. ಗಣಪತಿಯ ಸಿದ್ಧಿಯಿಂದ ವಿಷ್ಣುವಿಗಾದ ವಿಜಯ ಕಾರ್ಯಕ್ಕೋಸ್ಕರವಾಗಿ ಈ ಕ್ಷೇತ್ರವನ್ನು ಸಿದ್ಧಿವಿನಾಯಕ, ಎನ್ನುತ್ತಾರೆ.
ಶ್ರೀ ಮಹಾಗಣಪತಿ, ಶಿರೂರ: ಮಹಾಗಣಪತಿಯ ಆರಾಧನೆಮಾಡಿ, ಶಿವನು, ವರಪಡೆದನು. ಇಲ್ಲಿನ ಗಣಪತಿಗೆ, 8, 10, ಅಥವಾ 12 ಕೈಗಳಿವೆ. ತ್ರಿಪುರಾಸುರನ ವಧೆಮಾಡಿದ್ದು ಗಣಪತಿಯ ಅನುಗ್ರಹವಾದಮೇಲೆ. ಶಿವಶಂಕರನಿಗೆ, ತ್ರಿಪುರಾರಿ ಎಂಬ ಹೆಸರು ಬಂತು.
ಶ್ರೀ ವಿಘ್ನೇಶ್ವರ, ಓಜಾರ: ಕುಕಡಿ ನದಿಯ ದಡದ ಮೇಲೆ ಸ್ಥಾಪಿತವಾಗಿದೆ. ಇಲ್ಲಿನ ದೇವಸ್ಥಾನದ ಮೇಲೆ ಬಂಗಾರದ ಗೋಪುರ ಮತ್ತು ಕಲಶಗಳಿವೆ.
ಶ್ರೀ ಗಿರ್ಜಾತ್ಮಕ, ಲೆನ್ಯಾದ್ರಿ; ಇಲ್ಲಿ ಪಾರ್ವತಿ ತನ್ನ ಕಠಿಣ ತಪಸ್ಸಿನ ಫಲದಿಂದ ಗಣಪತಿಯನ್ನು ಪುತ್ರನನ್ನಾಗಿ ಪಡೆಯುತ್ತಾಳೆ. ಇಲ್ಲಿನ ದೇವಾಲಯ ಬೌದ್ಧವಿಹಾರಗಳ ಸಮೀಪದಲ್ಲಿದ್ದು ಪರ್ವತದ ಅತ್ಯಂತ ಎತ್ತರದಲ್ಲಿ ಕಟ್ಟಲಾಗಿದೆ.
ಬಲ್ಲಾಳೇಶ್ವರ, ಪಾಲಿ: ಬಲ್ಲಾಳನೆಂಬ ಭಕ್ತನು ಕಲ್ಲಿನಲ್ಲಿ ಗಣಪತಿಯನ್ನು ಕೆತ್ತಿ ಪೂಜಿಸಿದಾಗ, ಗಣಪತಿಯು ಸುಪ್ರೀತನಾಗಿ ಅವನ ಬಳಿಯಲ್ಲಿಯೆ ವಾಸಮಾಡಿದರು. ಬ್ರಾಹ್ಮಣನ ವಟುವಿನ ರೂಪದಲ್ಲಿ ಬಂದು ದರ್ಶನ ಕೊಟ್ಟನು.
ಶ್ರೀ ವರದ ವಿನಾಯಕ, ಮಹಾಡ: ಇಲ್ಲಿನ ವಿಶೇಷವೆಂದರೆ, ಸುಮಾರು 107 ವರ್ಷಗಳಿಂದ ಒಂದು ನಂದಾದೀಪ ಸತತವಾಗಿ ಉರಿಯುತ್ತಿದೆ.
ಮೇಲೆ ತಿಳಿಸಿದ 8 ಕ್ಷೇತ್ರಗಳೂ ಮಹಾರಾಷ್ಟ್ರದಲ್ಲೇ ಇವೆ. ಕೆಲವು, ಪುರಾತನ ದೇವಾಲಯಗಳು. ಉಳಿದವುಗಳನ್ನು ಮಾಧವರಾವ ಪೇಷ್ವೆಯವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಪುನರ್ನಿಮಿಸಲಾಗಿದೆ. ಅಷ್ಟವಿನಾಯಕನ ಪ್ರತಿಮೆಗಳು ಸ್ವಯಂಭು. ಅಷ್ಟವಿನಾಯಕನ ದರ್ಶನಮಾಡಲು ವಿಧಿವತ್ತಾಗಿ ಹೋಗಬೇಕು. ಇದನ್ನು ಪುರಾಣದಲ್ಲಿ ನಿರೂಪಿಸಲಾಗಿದೆ.
#Vinayaka #AshtaVinayaka #Ganapati #Vigneshwara #VignaVinashaka
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..