ಮಕ್ಕಳಾಗದವರಿಗೆ ಸಂತಾನಭಾಗ್ಯ ಕರುಣಿಸುವ ಸಂತಾನೇಶ್ವರ ಮಹಾದೇವ
Image credits: https://ktmguide.com
ಭಾರತ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಹಲವಾರು ದೇವಾಲಯಗಳಿವೆ. ಆಯಾ ದೇವಾಲಯವೂ ತನ್ನದೇ ಆದ ಹಿನ್ನಲೆ ಹೊಂದಿದ್ದು, ವಿಶಿಷ್ಟ ಆಚರಣೆ, ನಂಬಿಕೆಯಿಂದಲೇ ಪ್ರಸಿದ್ಧಿಯಾಗಿದೆ. ಎಲ್ಲಾ ದೇವಸ್ಥಾನಗಳನ್ನು ತಮ್ಮದೇ ಆದ ಪವಾಡ ಶಕ್ತಿಯನ್ನು ಹೊಂದಿದ್ದು, ಜನರು ಇದನ್ನು ಬಲವಾಗಿ ನಂಬುತ್ತಾರೆ. ದೇಶದ ಮೂಲೆ ಮೂಲೆಯಿಂದ ನಂಬಿಕೆಯಿಟ್ಟು ಅಂಥಹಾ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ತೆರಳುತ್ತಾರೆ. ಇದು ಅಂತಹದ್ದೇ ದೇವಾಲಯಗಳಲ್ಲಿ ಒಂದು.
Image credits: https://ktmguide.com
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರಿದ್ದಾರೆ ಅನ್ನೋದು ನಂಬಿಕೆ. ಅದರಲ್ಲೂ ಮುಖ್ಯವಾದ ವಿಚಾರವೆಂದರೆ ಹಿಂದೂ ಸಂಸ್ಕೃತಿಯಲ್ಲಿ ಒಬ್ಬೊಬ್ಬ ದೇವರಿಗೂ ಒಂದೊಂದು ವಿಶೇಷ ಶಕ್ತಿಯಿದೆ ಎಂದು ನಂಬಲಾಗಿದೆ. ಆ ನಂಬಿಕೆಗೆ ತಕ್ಕಂತೆ ಜನರು ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಒಂದೊಂದು ಸಂಕಷ್ಟವನ್ನೂ ಒಬ್ಬೊಬ್ಬ ದೇವರು ಪರಿಹರಿಸುತ್ತಾನೆ ಎಂದು ನಂಬಲಾಗಿದೆ. ವಿದ್ಯಾಭ್ಯಾಸಕ್ಕೆ ಶಾರದಾ ದೇವಿ, ಹಸಿವು ನೀಗಿಸಲು ಅನ್ನಪೂರ್ಣೇಶ್ವರಿ, ಮದುವೆಯಾಗಲು, ಸಂತಾನಕ್ಕಾಗಿ ಹೀಗೆ ಹಲವು ಸಂಕಷ್ಟಗಳನ್ನು ಪರಿಹರಿಸಲು ದೇವಾಲಯಗಳಿವೆ, ಇಂಥಹಾ ದೇಗುಲಗಳಿಗೆ ತೆರಳಿ ಭಕ್ತಿಯಿಂದ ಬೇಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂದು ನಂಬಲಾಗಿದೆ.
ಸಂತಾನಭಾಗ್ಯ ಕರುಣಿಸುವ ದೇವಾಲಯ
Image credits: https://ktmguide.com
ಇದು ಅದೇ ರೀತಿಯ ವಿಶಿಷ್ಟವಾದ ದೇವಸ್ಥಾನ..ಸಂತಾನಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ ಕರುಣಿಸುವ ದೇವಾಲಯ. ಮಕ್ಕಳಿಲ್ಲದ ದಂಪತಿ ಇಲ್ಲಿಗೆ ಆಗಮಿಸಿ ಭಕ್ತಿಯಿಂದ ಬೇಡಿಕೊಂಡು ಪೂಜೆ ಸಲ್ಲಿಸಿದರೆ ಸಾಕು ದೇವರು, ಸಂತಾನಭಾಗ್ಯ ಕರುಣಿಸುತ್ತಾನೆ. ಅದೆಷ್ಟೋ ವರ್ಷಗಳಿಂದ ಮಕ್ಕಳಿಲ್ಲದೆ ಕೊರಗಿದವರೂ ಈ ದೇಗುಲಕ್ಕೆ ಭೇಟಿ ಕೊಟ್ಟು ಮಕ್ಕಳಾಗಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಈ ದೇಗುಲಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯ ದೇವರ ಪವಾಡವೇ ಅಂತದ್ದು. ಇಷ್ಟಕ್ಕೂ ಯಾವುದು ಆ ದೇವಸ್ಥಾನ. ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂತಾನೇಶ್ವರ ಮಹಾದೇವ ಮಂದಿರ
Image credits: https://ktmguide.com
ಭಾರತದಲ್ಲಿ ಹಲವು ದೇವಸ್ಥಾನಗಳಿವೆ. ಅಲ್ಲಿ ಹೋಗಿ ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತದೆ ಎಂದು ಜನರು ನಂಬುತ್ತಾರೆ. ಉತ್ತರ ಪ್ರದೇಶದಲ್ಲಿರುವ ಈ ಸಂತಾನೇಶ್ವರ ಮಹಾದೇವನ ಮಂದಿರವೂ ಅಂಥಹ ದೇವಸ್ಥಾನಗಳಲ್ಲಿ ಒಂದು. ಪತಿ-ಪತ್ನಿಯರು ಈ ದೇವಾಲಯಕ್ಕೆ ಜತೆಯಾಗಿ ತೆರಳಿ ಪೂಜೆ ಸಲ್ಲಿಸಿದರೆ ಮಹಾದೇವ ಮಕ್ಕಳನ್ನು ಕರುಣಿಸುತ್ತಾನೆ ಅನ್ನೋದು ಭಕ್ತರ ನಂಬಿಕೆ. ಈ ದೇವರ ಸನ್ನಿಧಿಗೆ ಒಂದು ಸಾರಿ ಬಂದರೆ ಸಾಕು ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನೇಶ್ವರನ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದಂತೆ.
ಪುರಾಣದಲ್ಲಿ ಸಂತಾನೇಶ್ವರ ಮಹಿಮ
Image credits: https://ktmguide.com
ಸಂತಾನೇಶ್ವರ ಮಹಾದೇವನ ಮಂದಿರ ಕಾಲಭೈರವದಿಂದ ಚೌಖಂಬಾ ಕಡೆಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಈ ಮಂದಿರ ನಿರ್ಮಾಣದ ಕುರಿತಂತೆ ಯಾವುದೇ ಸ್ಪಷ್ಟ ಇತಿಹಾಸವೂ ಇಲ್ಲ. ಆದರೆ ಸ್ಕಂದ ಪುರಾಣದ ಪ್ರಕಾರ ಕಾಶಿ ಖಂಡದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಶಿವ ಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಇದರ ಅನುಸಾರ ಕಾಶಿಯ ಸಂತಾನೇಶ್ವರ ಮಹಾದೇವನ ಮುಂದೆ ಯಾವುದೇ ಮಕ್ಕಳಿಲ್ಲದ ದಂಪತಿ ಬಂದು ಜಲಾಭಿಷೇಕ ಮಾಡಿ, ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿದರೆ, ಸಂತಾಸ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಪೌರಾಣಿಕ ಹಿನ್ನಲೆ
Image credits: https://ktmguide.com
ಪುರಾಣದಲ್ಲಿ ಸಂತಾನೇಶ್ವರನ ಮಹಿಮೆ
ಹಿಂದೂಗಳ ಪವಿತ್ರಗ್ರಂಥವಾದ ಸ್ವಸ್ತನಿ ಬಾತ್ರಾ ಕಥಾದಲ್ಲಿ ಸಂತಾನೇಶ್ವರ ಮಹಾದೇವ ಮಂದಿರದ ಉಲ್ಲೇಖವಿದೆ. ಇದರ ಪ್ರಕಾರ ಪರಶಿವನು ತನ್ನ ಪ್ರಿಯಸಖಿ ಪಾರ್ವತಿಯನ್ನು ಕಳೆದುಕೊಂಡಾಗ ಬೇಸರದಿಂದ ಆಕೆಯ ಮೃತಶರೀರದೊಂದಿಗೇ ಲೋಕವಿಡೀ ಸಂಚಾರ ಮಾಡುತ್ತಾರೆ. ಆಕೆ ಬದುಕಿಲ್ಲ ಎಂಬುದನ್ನು ಸ್ವೀಕರಿಸಲು ಸದಾಶಿವನು ಸಿದ್ಧನಿರುವುದಿಲ್ಲ. ಶಿವನು ಹೋದಲ್ಲಿ ಬಂದಲ್ಲಿ ಪಾರ್ವತಿಯ ದೇಹವನ್ನು ಕೊಂಡೊಯ್ಯುವುದನ್ನು ಗಮನಿಸಿದ ಸ್ವರ್ಗದ ದೇವತೆಗಳು ಸದಾಶಿವನ ಸಂಕಷ್ಟವನ್ನು ಕಳೆಯಲು ಏನಾದರೂ ಮಾಡಬೇಕೆಂದು ನಿರ್ಧರಿಸುತ್ತಾರೆ.
Image credits: https://ktmguide.com
ಅದರಂತೆ, ಅದ್ವಿತೀಯ ಶಕ್ತಿಯಿಂದ ಚಿಟ್ಟೆಗಳನ್ನು ಕಳುಹಿಸಿ ದೇಹ ಮಣ್ಣಲ್ಲಿ ಮಣ್ಣಾಗುವಂತೆ ಮಾಡುತ್ತಾರೆ. ಹೀಗೆ ಸಂಭವಿಸುವ ಅದ್ವಿತೀಯ ಶಕ್ತಿಯಿಂದ ಪಾರ್ವತಿಯ ದೇಹದ ಭಾಗಗಳು ಭೂಮಿಗೆ ಬೀಳಲು ಆರಂಭವಾಗುತ್ತದೆ. ಮತ್ತು ದೇಹದ ಪ್ರತಿ ಅಂಗಗಳು ಭೂಮಿಗೆ ಬಿದ್ದ ಸ್ಥಳಗಳು ಪುಣ್ಯ ಕ್ಷೇತ್ರವಾಗಿ ನೆಲೆಯಾಗುತ್ತವೆ. ಪಾರ್ವತಿಯ ಮೇಲಿನ ತುಟಿ ಬಿದ್ದ ಜಾಗವೇ ಸಂತಾನೇಶ್ವರ ಮಹಾದೇವನ ಮಂದಿರ ಎಂದು ಹೆಸರು ಪಡೆಯುತ್ತದೆ. ಇಲ್ಲಿಗೆ ಬರುವ ದಂಪತಿಗೆ ಸದಾಶಿವ ಸಂತಾನಭಾಗ್ಯ ಕರುಣಿಸುತ್ತಾ ಬಂದಿದ್ದಾನೆ.
Image credits: https://ktmguide.com
ಪ್ರತಿದಿನ ನೂರಾರು ಭಕ್ತರು ಸಂತಾನೇಶ್ವರನ ದರ್ಶನಕ್ಕೆ ಬರುತ್ತಾರೆ. ಸೋಮವಾರ ಈ ಮಂದಿರದಲ್ಲಿ ಸಂತಾನ ಪ್ರಾಪ್ತಿಗಾಗಿ
ಬರುವ ಜೋಡಿಗಳ ಸಂಖ್ಯೆ ಅಧಿಕವಾಗಿರುತ್ತದೆ. ರುದ್ರಾಭಿಷೇಕ ಮಾಡುವುದು ಅಲ್ಲಿನ ವಿಶೇಷ. ಸಂತಾನೇಶ್ವರ ಮಹಾದೇವನ ಮಂದಿರದ ಆವರಣದಲ್ಲೇ ಅಮೃತೇಶ್ವರ ಮಹಾದೇವನ ಮಂದಿರವಿದೆ. ಈ ದೇವನ ದರ್ಶನ ಪಡೆದರೆ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವಿದ್ದವರು ಮುಕ್ತಿ ಪಡೆಯಬಹುದು ಎಂಬ ನಂಬಿಕೆಯಿದೆ. ಜತೆಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
from ಸುದ್ದಿ - Planet Tv https://ift.tt/3fz5aRL
May 29, 2021 at 07:16PM