12 ಭವ್ಯ ಗೋಪುರಗಳ ಮಧುರೈನ ಮೀನಾಕ್ಷಿ ಅಮ್ಮನವರ ದೇವಸ್ಥಾನ
ಭಾರತದ ತಮಿಳುನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದೂ ದೇವಾಲಯವಾಗಿದೆ, ಮೀನಾಕ್ಷಿ ಅಮ್ಮನ ದೇವಾಲಯ. ವೈಗೈ ನದಿ ದಡದ ಮೇಲೆ ಇರುವ ಪ್ರಾಚೀನ ನಗರ ಮಧುರೈ. ಇಲ್ಲಿ ಬಣ್ಣ ಬಣ್ಣದ ಗೋಪುರಗಳಿಂದ ಭಕ್ತರನ್ನು ಆಕರ್ಷಿಸುವ ದೇಗುಲವೇ ಮೀನಾಕ್ಷಿ ಅಮ್ಮನ ದೇವಸ್ಥಾನ. ಇದು ಸುಂದರೇಶ್ವರರ್ ಎಂದು ಕರೆಯಲ್ಪಡುವ ಶಿವದೇವರಿಗೆ ಮತ್ತು ಮೀನಾಕ್ಷಿ ಎಂದು ಕರೆಯಲ್ಪಡುವ ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ಈ ದೇವಾಲಯದಲ್ಲಿ ಮೀನಾಕ್ಷಿ ಅಮ್ಮನಿಗೆ ದಿನಕ್ಕೆ ಆರು ಬಾರಿ ಪೂಜೆ ನಡೆಯುತ್ತದೆ. 2500 ವರ್ಷಗಳ ಇತಿಹಾಸ ಹೊಂದಿರುವ ಈ ಪವಿತ್ರ ಕ್ಷೇತ್ರ ಮಧುರೈನ ಹೃದಯ ಭಾಗದಲ್ಲಿದೆ.
ದೇವಾಲಯವು 45 ಎಕರೆ ವಿಸ್ತೀರ್ಣದಲ್ಲಿದ್ದು, 254 ಮೀಟರ್ ಉದ್ದ ಹಾಗೂ 237 ಮೀ. ಅಗಲವನ್ನು ಹೊಂದಿದೆ. ಈ ದೇಗುಲವು ಪುರಾತನ ನಗರ ಮಧುರೈನ ಭೌಗೋಳಿಕ ಮತ್ತು ಧಾರ್ಮಿಕ ಅನುಷ್ಠಾನಗಳ ಕೇಂದ್ರವಾಗಿದೆ. ದೇಗುಲದ ಸುತ್ತಲಿನ ಗೋಡೆಗಳು ಹಾಗೂ ರಸ್ತೆಗಳನ್ನು ಏಕ ಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ತಮಿಳು ಗ್ರಂಥ ಒಂದರ ಪ್ರಕಾರ ದೇವಸ್ಥಾನದ ರಸ್ತೆಗಳು ತಾವರೆ ಮತ್ತು ಅದರ ದಳದಂತೆ ಹರಡಿಕೊಂಡಿವೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಎಲ್ಲಕ್ಕಿಂತಲೂ ವಿಶೇಷ ಅಲ್ಲಿನ ಗೋಪುರಗಳು..ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
12 ಭವ್ಯ ಗೋಪುರಗಳ ದೇವಸ್ಥಾನ
Image Credits : Temple@dinamalar
ಮಧುರೈನ ಮೀನಾಕ್ಷಿ ಅಮ್ಮನ ದೇವಾಲಯವು 12 ಭವ್ಯ ಗೋಪುರಗಳನ್ನು ಒಳಗೊಂಡಿದೆ. ಸೂಕ್ಷ್ಮಕೆತ್ತನೆ ಮತ್ತು ಪ್ರಮುಖ ದೇವರುಗಳು ಚಿತ್ರಣವಿರುವ ಎರಡು ಬಂಗಾರದ ಗೋಪುರಗಳು ಇಲ್ಲಿವೆ. ಪ್ರಸ್ತುತವಿರುವ ರಚನೆಯನ್ನು 1600ರಲ್ಲಿ ನಿರ್ಮಿಸಿರುವುದೆಂದು ನಂಬಲಾಗಿದೆ. ಈ ಗೋಪುರಗಳಲ್ಲಿ ದಕ್ಷಿಣ ಗೋಪುರವು ಅತ್ಯಂತ ಎತ್ತರ ಹಾಗೂ ಪುರಾತನ ಗೋಪುರ. ಅದರಲ್ಲಿ ದಕ್ಷಿಣದ ಗೋಪುರವು 170 ಅಡಿ ಎತ್ತರವನ್ನು ಹೊಂದಿದೆ. ಈ ದೇವಸ್ಥಾನದಲ್ಲಿ ಅನೇಕ ದೇವರ ವಿಗ್ರಹಗಳಿವೆ. ಶಿವನ ಗುಡಿಯು ಸಂಕೀರ್ಣದ ಕೇಂದ್ರಭಾಗದಲ್ಲಿದೆ. ಮೀನಾಕ್ಷಿ ಗುಡಿಯು ಶಿವನ ಗುಡಿಯ ಎಡಭಾಗದಲ್ಲಿದೆ.
ಗುಡಿಯ ಹೊರಗೆ ಏಕಶಿಲೆಯಿಂದ ಕೆತ್ತಿದ ದೊಡ್ಡ ಗಣೇಶನ ವಿಗ್ರಹವಿದೆ ಮತ್ತು ಆ ಗಣೇಶನಿಗೆ ಮುಕುರುನಿ ವಿನಾಯಕರ್ ಎನ್ನುವ ಒಂದು ಗುಡಿಯಿದೆ. ಈ ದೇವರ ಮೂರ್ತಿಯು ದೇವಸ್ಥಾನದ ಕೆರೆಯನ್ನು ಅಗೆಯುವ ಸಂದರ್ಭದಲ್ಲಿ ಲಭಿಸಿತೆಂದು ನಂಬಲಾಗಿದೆ.
ಸಾವಿರ ಕಂಬದ ಮಂಟಪ
Image Credits : TripAdvisor
ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನದ ಸಾವಿರ ಕಂಬದ ಮಂಟಪವನ್ನು ಪುರಾತನ ನೆಲ್ಲೆಯಪ್ಪರ್ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಆಯಿರಮ್ ಕಾಲ್ ಮಂಡಪಮ್ ಅಥವಾ ಸಾವಿರ ಕಂಬದ ಮಂಟಪವು 985 ಕೆತ್ತಿದ ಕಂಬಗಳನ್ನು ಹೊಂದಿದೆ. ಈ ಸಾವಿರ ಕಂಬದ ಮಂಟಪವನ್ನು ಆರ್ಯನಾಥ ಮುದಲಿಯಾರ್ 1569ರಲ್ಲಿ ರಚಿಸಿದನು ಎಂದು ತಿಳಿದುಬಂದಿದೆ. ಪ್ರತಿಯೊಂದು ಕಂಬವನ್ನು ಸುಂದರವಾಗಿ ಕೆತ್ತಿ ರಚಿಸಲಾಗಿದೆ. ಅಲ್ಲದೆ ಇದು ದ್ರಾವಿಡ ಶಿಲ್ಪದ ಒಂದು ಸ್ಮಾರಕವಾಗಿದೆ. ಈ ಮಂಟಪದ ಹೊರಗೆ, ಪಶ್ಚಿಮ ದಿಕ್ಕಿನಲ್ಲಿ ಸಂಗೀತದ ಕಂಬಗಳಿವೆ. ಪ್ರತಿಯೊಂದು ಕಂಬವು ಹೊಡೆದಾಗ ವಿವಿಧ ರೀತಿಯ ಸಂಗೀತವನ್ನು ಹೊರಡಿಸುತ್ತದೆ. ಕಂಬಗಳ ಮಂಟಪದ ದಕ್ಷಿಣ ದಿಕ್ಕಿನಲ್ಲಿರುವ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷ ಮಧ್ಯ-ಎಪ್ರಿಲ್ನಲ್ಲಿ ಚಿತಿರೈ ಹಬ್ಬದ ಸಂದರ್ಭದಲ್ಲಿ ಶಿವ ಮತ್ತು ಪಾರ್ವತಿಯ ಮದುವೆಯನ್ನು ಆಚರಿಸುತ್ತಾರೆ.
ಈ ದೇಗುಲದಲ್ಲಿ ಅಷ್ಟ ಶಕ್ತಿ ಮಂಟಪವೂ ಇದೆ. ದೇವಾಲಯಕ್ಕೆ ಬರುವಾಗ ಸಿಗುವ ಮೊದಲ ಮಂಟಪದಲ್ಲಿ ಎಂಟು ದೇವತೆಗಳ ಮೂರ್ತಿಗಳಿವೆ. ಆದ್ದರಿಂದಲೇ ಇದನ್ನು ಅಷ್ಟ ಶಕ್ತಿ ಮಂಟಪ ಎಂದು ಕರೆಯುತ್ತಾರೆ. ಇಲ್ಲಿ ಕಂಡು ಬರುವ ವೆಲ್ಲಿ ಅಂಬಲಮ್, ಪೂಜಾವೇದಿಕೆಯ ಐದು ಭವ್ಯ ಮಂದಿರಗಳಲ್ಲಿ ಒಂದಾಗಿದೆ. ಈ ಶಿವ ಗುಡಿಯಲ್ಲಿ ನಟರಾಜನ ಅಸಾಮಾನ್ಯ ವಿಗ್ರಹವೊಂದಿದೆ. ಈ ವಿಗ್ರಹವು ದೊಡ್ಡದಾದ ಬೆಳ್ಳಿಯ ಪೂಜಾವೇದಿಕೆಯನ್ನು ಹೊಂದಿದ್ದು, ಆದ್ದರಿಂದ ಇದನ್ನು ವೆಲ್ಲಿ ಅಂಬಲಮ್ ಎಂದು ಕರೆಯುತ್ತಾರೆ. ಮೀನಾಕ್ಷಿ ಅಮ್ಮನ ದೇವಾಲಯಕ್ಕೆ ಅದರದ್ದೇ ಆದ ಪೌರಾಣಿಕ ಹಿನ್ನಲೆಯಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ
ಪೌರಾಣಿಕ ಹಿನ್ನಲೆ
Image Credits : Kated
ಹಿಂದೂ ಪುರಾಣದ ಪ್ರಕಾರ, ಶಿವನು ಸುಂದರೇಶ್ವರರ್ನ ರೂಪದಲ್ಲಿ ಪಾರ್ವತಿಯ ಅವತಾರ ಮೀನಾಕ್ಷಿಯನ್ನು ವಿವಾಹವಾಗಲು ಭೂಮಿಗೆ ಇಳಿದುಬಡುತ್ತಾನೆ. ಪಾರ್ವತಿ ದೇವಿ ಮಧುರೈನ ಆಡಳಿತಗಾರ ಮಲಯದ್ವಜ ಪಾಂಡ್ಯನ ಪ್ರಾಯಶ್ಚಿತಕ್ಕೆ ಪ್ರತಿಯಾಗಿ ಮೊದಲೇ ಸಣ್ಣ ಮಗುವಿನ ರೂಪದಲ್ಲಿ ಭೂಮಿಗೆ ಇಳಿದುಬಂದಿರುತ್ತಾಳೆ. ದೊಡ್ಡವಳಾದ ಬಳಿಕ ನಗರವನ್ನು ಆಳಲು ಆರಂಭಿಸುತ್ತಾಳೆ. ಶಿವ ದೇವರು ಭೂಮಿಗೆ ಇಳಿದು ಬಂದು, ಆಕೆಗೆ ವಿವಾಹದ ಪ್ರಸ್ತಾಪ ಮಾಡುತ್ತಾನೆ. ಮಧುರೈನಲ್ಲಿ ಈ ವಿವಾಹ ಅದ್ದೂರಿಯಾಗಿ ನಡೆಯಲು ತಯಾರಿ ಆರಂಭವಾಗುತ್ತದೆ.
ಮೀನಾಕ್ಷಿಯ ಸಹೋದರ ವಿಷ್ಣು ಮದುವೆಯ ಮೇಲ್ವಿಚಾರಣೆ ವಹಿಸಲು ವೈಕುಂಠದಿಂದ ಹೋಗುತ್ತಿದ್ದನು. ಆದರೆ ದಾರಿಯಲ್ಲಿ ದೇವರ ಮಹಿಮಾ ಆಟದಲ್ಲಿ ಇಂದ್ರನಿಂದ ಮೋಸ ಹೋಗಿ ಮಧುರೈಗೆ ತಲುಪುವುದು ತಡವಾಗಿ ಹೋಯಿತು. ಅಷ್ಟರಲ್ಲಿ ವಿವಾಹವು ಸ್ಥಳೀಯ ದೇವರು ತಿರುಪ್ಪರಂಕುಂದ್ರಮ್ನಿಂದ ನಡೆಸಲ್ಪಟ್ಟಿತು. ಇದನ್ನು ವಾರ್ಷಿಕವಾಗಿ ಮಧುರೈನಲ್ಲಿ 'ಚಿತಿರೈ ತಿರುವಿಳವೆಂದು ಆಚರಿಸಲಾಗುತ್ತದೆ.
ದೇವಸ್ಥಾನದಲ್ಲಿರುವ ಪವಿತ್ರ ಕೆರೆ ಪೂರ್ತಮರೈ ಕೆರೆ
Image Credits : Nirvan Diaries
ದೇವಸ್ಥಾನದ ಒಳ ಭಾಗದಲ್ಲಿರುವ ಒಂದು ಪವಿತ್ರ ಕೆರೆ ಪೂರ್ತಮರೈ ಕೆರೆ. ಇದನ್ನು ಬಹಳ ಪೂಜ್ಯನೀಯ ಸ್ಥಳವೆಂದು ಪರಿಗಣಿಸಲಾಗಿದೆ. ಈ ಕೆರೆಯಲ್ಲಿ ಯಾವುದೇ ಜಲಚರಗಳು ಇಲ್ಲದಿರುವುದು ಈ ಕೆರೆಯ ವಿಶೇಷ. ಜನರು ಪ್ರಮುಖ ಮಂದಿರದೊಳಗೆ ಪ್ರವೇಶಿಸುವುದಕ್ಕಿಂತ ಮೊದಲು ಸುಮಾರು 165 ಫೀಟ್ ಉದ್ದ ಮತ್ತು 120 ಫೀಟ್ ಅಗಲದ ಈ ಕೆರೆಯನ್ನು ದಾಟಿ ಮುಂದೆ ಹೋಗಬೇಕಾಗಿದೆ. ಪೂರ್ತಮರೈ ಕೆರೆ ಎಂದರೆ ಚಿನ್ನದ ತಾವರೆಗಳ ಕೆರೆ ಎಂದರ್ಥ. ಇದರಲ್ಲಿ ಬೆಳೆಯುವ ತಾವರೆಗಳು ಚಿನ್ನದ ಬಣ್ಣದಿಂದಿರುತ್ತವೆ ಎಂದು ಹೇಳುತ್ತಾರೆ.
ಪುರಾಣ ಕಥೆಯ ಪ್ರಕಾರ, ಶಿವ ದೇವರು ಇಲ್ಲಿ ಯಾವುದೇ ಮೀನು ಅಥವಾ ಇತರ ಜಲಚರ ಜೀವಿಗಳು ಬೆಳೆಯುವುದಿಲ್ಲವೆಂದು ಕೊಕ್ಕರೆಯೊಂದಕ್ಕೆ ಮಾತುಕೊಟ್ಟಿರುತ್ತಾನೆ, ಆದ್ದರಿಂದ ಈ ಕೆರೆಯಲ್ಲಿ ಯಾವುದೇ ಜಲಚರ ಜೀವಿಗಳು ಕಂಡುಬರುವುದಿಲ್ಲ. ದೇವಾಲಯವು 7ನೇ ಶತಮಾನದ ಇತಿಹಾಸವನ್ನು ಹೊಂದಿದೆ. 1310ರಲ್ಲಿ ಮುಸ್ಲಿಂ ಆಕ್ರಮಣಕಾರ ಮಲಿಕ್ ಕಾಫರ್ ದೇವಸ್ಥಾನವನ್ನು ಕೊಳ್ಳೆಹೊಡೆದಿದ್ದ. ಜೊತೆಗೆ ಎಲ್ಲಾ ಪುರಾತನ ಪುರಾವೆಗಳನ್ನು ನಾಶಮಾಡಿದ್ದ ಎನ್ನಲಾಗುತ್ತದೆ.
Featured Image Credits : Mysteryofindia
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 16, 2021 at 12:36PM