ಚಂದನವನದ ‘ಸಿಂಧೂರ ತಿಲಕ’; ಮಿಂಚಿ ಮರೆಯಾದ ಧ್ರುವತಾರೆ ನಟ ಸುನಿಲ್
ಚಂದನವನದಲ್ಲಿ ಅದ್ಭುತ ಅಭಿನಯದಿಂದಲೇ ಜನಮನಸೂರೆಗೊಳಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿದ ಅದೆಷ್ಟೋ ನಟ-ನಟಿಯರಿದ್ದಾರೆ. ಇಂಥವರಲ್ಲಿ ಅಪಘಾತದಲ್ಲಿ, ಆಕಸ್ಮಿಕವಾಗಿ ಮರಣ ಹೊಂದಿದವರೂ ಹಲವರಿದ್ದಾರೆ. ಆದರೆ, ಕನ್ನಡ ಚಿತ್ರರಂಗಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಮಂದಿಯನ್ನು ಇಲ್ಲಿನ ಮಂದಿ ಯಾವತ್ತೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಹಾಗೇ ಮಿಂಚಿ ಮರೆಯಾದ ನಟರಲ್ಲಿ ಒಬ್ಬರು ಸುನಿಲ್. ಹೌದು, ಅದೇ ಸುನಿಲ್..ಮಾಲಾಶ್ರೀ ಜತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಚಿಗುರುಮೀಸೆಯ ಹುಡುಗ.
ನಟನಾಗುವ ಕನಸು ಹೊತ್ತಿದ್ದ ರಾಮಕೃಷ್ಣ
Featured Image Credits : FilmiBeats
ನಟ ಸುನಿಲ್ ಅವರ ಮೂಲ ಹೆಸರು ರಾಮಕೃಷ್ಣ ಎಂದಾಗಿತ್ತು. ಏಪ್ರಿಲ್ 1,1964ರಂದು ಮಂಗಳೂರಿನ ಬಾರ್ಕೂರು ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದರು. ಜಯಶೀಲ ಶೆಟ್ಟಿ ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗ. ಬಾರ್ಕೂರಿನ ಸಮೀಪದ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ಆಗಲೇ ರಾಮಕೃಷ್ಣ ನಟನೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. ಆರಂಭದ ದಿನಗಳಲ್ಲಿ ಯಕ್ಷಗಾನ ಕಲಾವಿದರಾಗಿದ್ದ ರಾಮಕೃಷ್ಣ ಅವರಿಗೆ ತಾನು ನಟ ಆಗಬೇಕು ಅನ್ನುವ ಆಸೆ ಇತ್ತು.
ಹೇಗಾದರೂ ಸರಿ ನಟನಾಗಬೇಕು ಅನ್ನೋ ಕನಸು ಹೊತ್ತಿದ್ದ ರಾಮಕೃಷ್ಣ ಅದಕ್ಕಾಗಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದರು, ಅಂದಿನ ಜನಪ್ರಿಯ ಮ್ಯಾಗಜೀನ್ ಅಭಿಮಾನಿಗಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳಿಂದಲೇ ಸುನಿಲ್ಗೆ ಬಿಸಿರಕ್ತ, ನಾದ ಸುರಭಿ ಮೊದಲಾದ ಚಿತ್ರಗಳಿಗೆ ಅವಕಾಶ ದೊರಕಿತ್ತು. ಈ ಸಿನಿಮಾದ ಅವಕಾಶಕ್ಕೆ ಕರೆ ಬಂದಾಗ ಸುನಿಲ್ ಇಂಜಿನಿಯರಿಂಗ್ ಶಿಕ್ಷಣ ಮುಂದುವರೆಯುತ್ತಿತ್ತು.
‘ಶೃತಿ’ ಚಿತ್ರದಲ್ಲಿ ನಟ ಸುನಿಲ್ ಅಭಿನಯ
Image Credits : Times of india
ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರಕ್ಕೆ ತಂಡ ನಾಯಕ ನಟನನ್ನು ಹುಡುಕುತ್ತಿತ್ತು. ‘ಶೃತಿ’ ಹೆಸರಿನ ಚಿತ್ರಕ್ಕಾಗಿ ನಿರ್ದೇಶಕ ದ್ವಾರಕೀಶ್ ಮುಖ್ಯ ಪಾತ್ರಧಾರಿ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದವನೇ ರಾಮಕೃಷ್ಣ. ಇದೇ ರಾಮಕೃಷ್ಣರನ್ನು ಸುನೀಲ್ ಆಗಿ ದ್ವಾರಕೀಶ್ ಚಿತ್ರರಂಗದಲ್ಲಿ ಪರಿಚಯಿಸಿದರು. ಶೃತಿ ಚಿತ್ರದಲ್ಲಿ ಅಭಿನಯಿಸದವರೆಲ್ಲಾ ಹೊಸಬರೇ. ಚಿತ್ರೀಕರಣ ಮುಗಿಸಿ ಚಿತ್ರವೇನೋ ಬಿಡುಗಡೆ ಆಯಿತು. ಆದರೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ ಇತ್ತು. ಥಿಯೇಟರ್ನಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ಸುನಿಲ್ ತುಂಬಾ ಅತ್ತಿದ್ದರಂತೆ ಆದರೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಾ ಹೋಗಿ ಸಿನಿಮಾ ಶತದಿನೋತ್ಸವ ಆಚರಿಸೇ ಬಿಡ್ತು. ಅಂದಿನಿಂದ ಸುನಿಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲಿಯೆ ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ಚಿತ್ರರಂಗದಲ್ಲಿ ತೊಡಗಿಸಿಕೊಂಡರು.
ಸುನಿಲ್-ಮಾಲಾಶ್ರೀ ಜೋಡಿ ಸೂಪರ್ ಹಿಟ್
Image Credits : Photo Art Inc
ಟೈಗರ್ ಪ್ರಭಾಕರ್, ನವರಸನಾಯಕ ಜಗ್ಗೇಶ್, ರಮೇಶ್ ಅರವಿಂದ್ ಅವರ ಜೊತೆ ಒಟ್ಟಾಗಿ ‘ಸಿಬಿಐ ಶಿವ’ ಚಿತ್ರದಲ್ಲಿ ಸುನಿಲ್ ನಟಿಸಿದ್ದು, ಚಿತ್ರ ಸೂಪರ್ ಹಿಟ್ ಆಯಿತು. ಮಾಲಾಶ್ರೀ ಜತೆ ಸುನಿಲ್ ಅತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಎಲ್ಲವೂ ಯಶಸ್ವಿಯಾಗಿದೆ. ಈ ಜೋಡಿಯ ‘ಬೆಳ್ಳಿ ಕಾಲುಂಗರ’, ‘ಮೆಚ್ಚಿದ ಮದುಮಗ’, ‘ನಗರದಲ್ಲಿ ನಾಯಕರು’, ‘ಸಿಂಧೂರ ತಿಲಕ’ ‘ಸಾಹಸಿ’, ‘ತವರುಮನೆ ಉಡುಗೊರೆ’, ‘ಮನ ಮೆಚ್ಚಿದ ಸೊಸೆ’, ‘ಸ್ನೇಹದ ಕಡಲಲ್ಲಿ’, ‘ಮಾಲಾಶ್ರೀ ಮಾಮಾಶ್ರೀ’ ಚಿತ್ರವನ್ನು ಪ್ರೇಕ್ಷಕರು ಬಹಳ ಮೆಚ್ಚಿಕೊಂಡರು. ಥಿಯೇಟರ್ಗಳಲ್ಲಿ ಈ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಇಂದಿಗೂ ಈ ಸಿನೆಮಾಗಳನ್ನು ಕನ್ನಡ ಸಿನಿಪ್ರಿಯರು ಇಷ್ಟಪಟ್ಟು ನೋಡುತ್ತಾರೆ..
ಅನಂತ ನಾಗ್-ಲಕ್ಷ್ಮೀ ಜೋಡಿ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಇಷ್ಟಪಡುತ್ತಿದ್ದರೂ ಹಾಗೆಯೇ ಸುನಿಲ್-ಮಾಲಾಶ್ರೀ ಜೋಡಿಯನ್ನೂ ಇಷ್ಟಪಡುತ್ತಿದ್ದರು. ‘ಬೆಳ್ಳಿ ಕಾಲುಂಗುರ’ ಚಿತ್ರದಿಂದ ಸುನಿಲ್ ಬಹು ಬೇಡಿಕೆಯ ನಟರಾದರು. ಶಿವರಾಜಕುಮಾರ್, ವಿ.ರವಿಚಂದ್ರನ್, ಶಶಿಕುಮಾರ್ ಅವರಂತೆಯೇ ಸುನಿಲ್ ಚಿತ್ರರಂಗದಲ್ಲಿ ಮಿಂಚುತ್ತಾರೆ ಎಂದು ಅಭಿಮಾನಿಗಳು ಖುಷಿಪಟ್ಟರು. ಆದರೆ ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುತ್ತಿರುವಾಗಲೇ ಆ ಒಂದು ಘಟನೆ ನಡೆದು ಹೋಯಿತು.
ಜುಲೈ 24, 1994ರಂದು ನಡೆದಿತ್ತು ಆ ದುರಂತ..!
Image credits : google
ಜುಲೈ 23ಕ್ಕೆ ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ, ಜುಲೈ 24,1994ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆಯುವ ರಸಮಂಜರಿ ಕಾರ್ಯಕ್ರಮಕ್ಕೆ ಸುನಿಲ್ ಮತ್ತು ಮಾಲಾಶ್ರೀ ಜೋಡಿಯನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಮುಗಿದಾಗ ರಾತ್ರಿ 1 ಗಂಟೆ. ಹೀಗಾಗಿ ರಾತ್ರಿ ಅಲ್ಲೇ ಉಳಿದುಕೊಂಡು ಮಾರನೇ ದಿನ ಬೆಳಗ್ಗೆ ಮರಳಿ ಹೋಗುವುದೆಂದು ಎಲ್ಲರೂ ನಿರ್ಧರಿಸಿದರು. ಬಹುಶಃ ಆ ನಿರ್ಧಾರವನ್ನು ಗಟ್ಟಿ ಮಾಡಿ ಅಲ್ಲೇ ಉಳಿದುಕೊಂಡಿದ್ದರೆ, ಅಂದು ಆ ದುರಂತ ನಡೆಯುತ್ತಿರಲ್ಲಿಲ್ಲವೇನೋ..
ಆದರೆ ಡ್ರೈವರ್ ಕೃಷ್ಣ, ಇವತ್ತು ನನ್ನ ಮಗನ ಬರ್ತ್ ಡೇ ಇದೆ ನಾನು ಹೋಗಲೇಬೇಕು ಎಂದು ಒತ್ತಾಯಿಸಿದರು. ಆ ಮಾತಿಗೆ ಒಪ್ಪಿದ ಸುನೀಲ್ ಅವರು ಮತ್ತು ಮಾಲಾಶ್ರೀ, ಸುನಿಲ್ ಸೋದರ ಸಂಬಂಧಿ ಸಚಿನ್ ಮಲ್ಲಿ ಅವರ ಜೊತೆಗೆ ತಮ್ಮ ಕಾಂಟೆಸ್ಸಾ ಕಾರಿನಲ್ಲಿ ಆ ಕತ್ತಲ ರಾತ್ರಿಯಲ್ಲಿ ಚಿಕ್ಕೋಡಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ರಾತ್ರಿ ಮೂರೂವರೆ ಹೊತ್ತಿಗೆ ಕಾರು ದಾವಣಗೆರೆ ದಾಟಿತು. 4ಕ್ಕೆ ಚಿತ್ರದುರ್ಗ ತಲುಪಿ ಮಾದನಾಯಕನಹಳ್ಳಿ ಹೆದ್ದಾರಿಯಲ್ಲಿ ಹೋಗುತ್ತಿರಬೇಕಾದರೆ ತಮಿಳುನಾಡಿನಿಂದ ಅತಿ ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಸುನಿಲ್ ಅವರ ಕಾರಿನ ಮೇಲೆ ಹಾದು ಹಾಯಿತು.
ಟ್ರಕ್ ಕಾರಿಗೆ ಗುದ್ದಿದ ರಭಸಕ್ಕೆ ಕಾರು ಹಿಗ್ಗಾಮುಗ್ಗಾ ಪುಡಿಯಾಗಿ ಜಜ್ಜಿ ಹೋಯಿತು. ಡ್ರೈವರ್ ಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೆದರು. ಸುನಿಲ್ ಅವರ ಎರಡೂ ಕಾಲು ಮುರಿದು ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಮಾಲಾಶ್ರೀ ಮತ್ತು ಸಚಿನ್ ಮಲ್ಲಿಯವರಿಗೆ ಮಲ್ಟಿಪಲ್ ಫ್ರಾಕ್ಚರ್ ಆಗಿತ್ತು. ಸ್ಥಳೀಯರು ಎಲ್ಲರನ್ನೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಸುನಿಲ್ ಮೃತಪಟ್ಟಿದ್ದರು. ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.. ಬಾರ್ಕೂರಿನಲ್ಲಿಯೇ ಸುನಿಲ್ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಹಾಗೆ ಚಂದನವನದಲ್ಲಿ ಹಲವು ಅದ್ಭುತ ಚಿತ್ರಗಳಲ್ಲಿ ಅಭಿನಯಿಸಿ ಕರುನಾಡಿನ ಸಿಂಧೂರ ತಿಲಕದಂತಿದ್ದ ಸುನಿಲ್ ಇದ್ದಕ್ಕಿದಂತೆ ಕಣ್ಮರೆಯಾದರು. ಆದರೆ ಅವರು ಅಭಿನಯಿಸಿದ ಅದ್ಭುತ ಚಿತ್ರಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ನೆಲೆಯಾಗಿದ್ದಾರೆ. ಮಿಂಚಿ ಮರೆಯಾದ ನಟನನ್ನು ಕನ್ನಡ ಚಿತ್ರರಂಗ ಸದಾ ನೆನಪಿಸಿಕೊಳ್ಳುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3g61JlL
June 09, 2021 at 05:30PM