Featured Image Source : atmanirvana.com
ಭಾರತ ದೇಶ ಹಲವು ಧರ್ಮಗಳಿಗೆ ತಾಯಿ. ಅದರಲ್ಲೂ ಹಿಂದೂ ಧರ್ಮ ಅದಷ್ಟೋ ಪುರಾತನವಾದುದು. ಪ್ರಾಚೀನ ಸಂಸ್ಕೃತಿ, ಆಚಾರ-ವಿಚಾರಗಳ ನೆಲೆವೀಡು. ದೇಶದ ವಿವಿಧ ರಾಜ್ಯಗಳಲ್ಲಿ ನಾವು ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ ಅದೆಷ್ಟೋ ದೇವಾಲಯಗಳನ್ನು ನೋಡಬಹುದು. ಕರ್ನಾಟಕದಲ್ಲೂ ಅಸಂಖ್ಯಾತ ಪುರಾತನ ದೇವಾಲಯಗಳಿವೆ. ಎಷ್ಟೋ ದೇವಾಲಯಗಳು ಅನನ್ಯವಾಗಿವೆ. ಅವುಗಳ ವಾಸ್ತುಶಿಲ್ಪ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನದೇ ಒಂದು ವಿಶಿಷ್ಟ ಛಾಪು ಮೂಡಿಸಿವೆ. ಆದರೆ ಪ್ರಸಿದ್ಧವಾದರೂ ಹಲವು ದೇವಸ್ಥಾನಗಳ ಮಹತ್ವವನ್ನು ಅದೆಷ್ಟೋ ಜನರು ತಿಳಿದಿಲ್ಲ. ಅಂಥಹಾ ದೇವಸ್ಥಾನವೊಂದರ ಕುರಿತು ನಾವು ಹೇಳಲು ಹೊರಟಿದ್ದೇವೆ.
ಹಾಸನದಲ್ಲಿರುವ ಹಾಸನಾಂಬೆ ದೇವಾಲಯ ಇಂಥಹಾ ದೇವಸ್ಥಾನಗಳಲ್ಲಿ ಒಂದು. ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಕಾಲಾನಂತರದಲ್ಲಿ ಅದು ಹಾಸನ ಎಂದು ಬದಲಾಯಿತು ಎಂದು ಹೇಳುತ್ತಾರೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು. ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂದು ಸಹ ಹೇಳುತ್ತಾರೆ.
ಇದನ್ನು ಓದಿ : ದೇವಾಲಯದ ಗರ್ಭಗುಡಿಯ ತಲದಿಂದ ಹರಿಯುತ್ತೆ ಸ್ಪಟಿಕಶುಭ್ರ ನೀರಿನ ಒರತೆ..!
12ನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯ
Image Source : NativePlanet
ಹಾಸನಾಂಬೆ ದೇವಸ್ಥಾನದ ಪ್ರವೇಶದ್ವಾರವು 81 ಅಡಿಗಳಷ್ಟು ಎತ್ತರದಲ್ಲಿದೆ. ಶ್ರೀ ಹಾಸನಾಂಬದಲ್ಲಿನ ಮುಖ್ಯ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಈ ದೇವಾಲಯದ ಆವರಣದಲ್ಲಿ ದರ್ಬಾರ್ ಗಣಪತಿ, ಹಾಸನಾಂಬ ಮತ್ತು ಸಿದ್ಧೇಶ್ವರಕ್ಕೆ ಮೀಸಲಾಗಿರುವ ಮೂರು ಪ್ರಮುಖ ದೇವಾಲಯಗಳಿವೆ. ಗರ್ಭಗೃಹವು ಶಿವನಿಂದ ಪಶುಪತಾಸ್ತ್ರವನ್ನು ಸ್ವೀಕರಿಸುವ ಅರ್ಜುನನ ಚಿತ್ರಗಳನ್ನು ಹೊಂದಿದೆ.
ಹಾಸನಾಂಬೆ ದೇವಾಲಯದ ಗೋಪುರವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇವಾಲಯಗಳಿವೆ. ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಬ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ
ಹಲವು ಪವಾಡಗಳ ಕತೆಗಳನ್ನು ಹೊಂದಿರುವ ಈ ದೇವಾಲಯವು ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಹಾಸನದಲ್ಲಿದೆ. ಶಕ್ತಿ ದೇವಿಗೆ ಸಮರ್ಪಿಸಲಾಗಿರುವ ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇದೆಲ್ಲವೂ ಅಲ್ಲದೆ ದೇವಸ್ಥಾನವು ಇನ್ನೂ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ. ಅದೇನೆಂದು ತಿಳಿಯೋಣ.
ಇದನ್ನು ಓದಿ : ಶ್ರೀರಂಗಂ ದೇವಾಲಯದ ಆವರಣದಲ್ಲಿದೆ ವೈಷ್ಣವ ತತ್ವಜ್ಞಾನಿಯ 1000 ವರ್ಷದ ಹಳೆಯ ದೇಹ..!
ವರ್ಷಕ್ಕೊಮ್ಮೆ ದರುಶನ ನೀಡುವ ಹಾಸನಾಂಬೆ
ಹಾಸನಾಂಬೆಯ ದೇವಾಲಯ ಇತರ ದೇವಾಲಯಕ್ಕಿಂತ ಯಾಕೆ ವಿಶಿಷ್ಟವಾಗಿದೆಯಂದರೆ ಈ ದೇವಾಲಯದ ಬಾಗಿಲನ್ನು ವರ್ಷಕ್ಕೊಮ್ಮೆ ಮಾತ್ರ ತೆಗೆಯುತ್ತಾರೆ. ಪ್ರತೀ ದಿನ ಭಕ್ತರಿಗೆ ದೇವಿಯರ ದರ್ಶನ ಭಾಗ್ಯ ಇರುವುದಿಲ್ಲ. ವರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ಭಕ್ತಾಧಿಗಳು ದೇವಿಯ ದರ್ಶನ ಪಡೆಯಬಹುದು. ದೀಪಾವಳಿಯ ಸಂದರ್ಭದಲ್ಲಿ 12 ದಿನಗಳ ಕಾಲ ಮಾತ್ರ ಈ ದೇವಾಲಯವನ್ನು ತೆರೆಯಲಾಗುತ್ತದೆ. ಅದೂ ಸಹ ಈ ದೇವಾಲಯವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ತೆರೆಯುವುದು ವಿಶೇಷ.
ವರ್ಷಕ್ಕೊಮ್ಮೆ ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ದೇವಾಲಯದ ತೆರೆಯಲಾಗುತ್ತದೆ. ಬಲಿಪಾಡ್ಯದ ಮೂರನೇ ದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ. ಈ ರೀತಿ ವರ್ಷದ ನಂತರ ದೇವಾಲಯದ ಬಾಗಿಲು ತೆಗೆದಾಗಲೂ ಹಚ್ಚಿದ ದೀಪ ಮುಂದಿನ ವರ್ಷದವರೆಗೂ ಬೆಳಗುತ್ತಿರುತ್ತದೆ ಹಾಗೂ ಹೂವುಗಳೂ ಕೂಡ ತಾಜಾವಾಗಿರುತ್ತದೆ ಎನ್ನುತ್ತಾರೆ. ಇಲ್ಲಿಗೆ ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ಗರ್ಭಗುಡಿಯಲ್ಲಿ ವರ್ಷವಿಡೀ ಉರಿಯುತ್ತೆ ದೀಪ
Image Source : https://ift.tt/3jRxRLY
ಹಾಸನಾಂಬೆ ದೇವಿಯ ದೇವಾಲಯದಲ್ಲಿ ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ. ಹೂವು ಹಾಗೂ ನೈವೇದ್ಯವನ್ನು ಅರ್ಪಿಸಿ ಬಾಗಿಲು ಮುಚ್ಚಲಾಗುತ್ತದೆ. ಮುಂದಿನ ವರ್ಷ ಮತ್ತೆ ದೀಪಾವಳಿ ಸಂದರ್ಭದಲ್ಲಿ ಗರ್ಭ ಗುಡಿಯ ಬಾಗಿಲು ತೆರೆದಾಗ ಕಳೆದ ವರ್ಷ ಉರಿಸಿದ ದೀಪ ಹಾಗೆಯೇ ಉರಿಯುತ್ತಿರುತ್ತದೆ. ಹೂವು ಸಹ ತಾಜಾವಾಗಿರುತ್ತದೆ. ಹಾಗೆಯೇ ನೈವೇದ್ಯವು ಹಾಳಾಗಿರುವುದಿಲ್ಲ. ಇದು ದೇವಿಯ ಪವಾಡವೆಂದೇ ಭಕ್ತಾಧಿಗಳು ನಂಬುತ್ತಾರೆ.
ಇದನ್ನು ಓದಿ : ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು..?
ಊರಲ್ಲಿ ಒಗ್ಗರಣೆ ಹಾಕುವಂತಿಲ್ಲ..!
ಹೌದು, ಇದು ಈ ಊರಿನ ಮುಖ್ಯ ನಿಯಮ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ನಂತರ ಆ ಪ್ರದೇಶದಲ್ಲಿ ಯಾರ ಮನೆಯಲ್ಲೂ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ. ದೇಗುಲ ಬಾಗಿಲು ತೆರೆದಾಗ ದೇವಿ ಕಣ್ಣುಬಿಟ್ಟ ರೀತಿಯಲ್ಲೇ ಗೋಚರಿಸುವುದರಿಂದ ಯಾರೂ ಒಗ್ಗರಣೆ ಹಾಕಲ್ಲ. ಸಾಂಬಾರು ಪದಾರ್ಥ ಸಾಂಬಾರು ಪದಾರ್ಥ ಕರಿಯುವುದಿಲ್ಲ. ಒಗ್ಗರಣೆ ಹಾಕಿದರೆ ದೇವಿಗೆ ಕಣ್ಣು ತೆರೆಯಲಾಗುವುದಿಲ್ಲ ಎನ್ನುವುದು ಇಲ್ಲಿನ ಜನರ ನಂಬಿಕೆ. .
ಪೌರಾಣಿಕ ಹಿನ್ನಲೆಯಲ್ಲೇನಿದೆ..?
Image Source : The Holiday spot
ಬಹಳ ಹಿಂದೆ, ಅಂಧಕಾಸುರ ಎಂಬ ರಾಕ್ಷಸನಿದ್ದನು, ಕಠಿಣ ತಪಸ್ಸಿನ ನಂತರ, ಅಜೇಯನಾಗಲು ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಹೊಸದಾಗಿ ಸ್ವಾಧೀನಪಡಿಸಿಕೊಂಡ ಶಕ್ತಿಯಿಂದ, ಅವನು ಎಲ್ಲೆಡೆ ಹಾನಿಯನ್ನುಂಟುಮಾಡುತ್ತಾನೆ. ಶಿವನು ಅವನನ್ನು ಕೊಲ್ಲಲು ಪ್ರಯತ್ನಿಸಿದಾಗಲೂ ರಾಕ್ಷಸನ ದೇಹದ ಪ್ರತಿಯೊಂದು ಹನಿ ನೆಲಕ್ಕೆ ಬೀಳುತ್ತಿದ್ದಂತೆ ಅದರಿಂದ ರಾಕ್ಷಸರು ಸೃಷ್ಠಿಯಾಗಲಾರಂಭಿಸಿದರು. ಶಿವನು ತನ್ನ ಶಕ್ತಿಯಿಂದ ಸಪ್ತಮಾತ್ರಿಕೆಯರ ಜೊತೆಗೆ ಯೋಗೇಶ್ವರಿ ದೇವತೆಯನ್ನು ಸೃಷ್ಟಿಸುತ್ತಾನೆ, ಅವರುಗಳೆಂದರೆ ಬ್ರಾಹ್ಮಿ, ಮಹೇಶ್ವರಿ, ಕೌಮರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ಚಾಮುಂಡಿ. ಅವರುಗಳ ಮೂಲಕ ರಾಕ್ಷಸನ ಅಂತ್ಯವನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಇನ್ನೊಂದು ದಂತಕಥೆಯ ಪ್ರಕಾರ ಸೊಸೆಯೊಬ್ಬಳು ಪ್ರತೀ ದಿನ ದೇವಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಳು, ಕ್ರೂರಿ ಅತ್ತೆ ಸೊಸೆಯನ್ನು ಹಿಂಬಾಲಿಸಿ ದೇವಸ್ಥಾನಕ್ಕೆ ಬಂದು ಸೊಸೆ ಪ್ರಾರ್ಥಿಸುತ್ತಿರುವುದನ್ನು ಕಂಡು ಬಲವಾದ ಆಯುಧದಿಂದ ಹೊಡೆಯುತ್ತಾಳೆ. ಸೊಸೆಯು ನೋವಿನಿಂದ ಸಹಾಯಕ್ಕಾಗಿ ದೇವಿಯನ್ನು ಕೂಗುತ್ತಾಳೆ. ಆಗ ದೇವಿ ಅತ್ತೆಯನ್ನು ಕಲ್ಲಾಗಿಸುತ್ತಾಳೆ. ಇಂದಿಗೂ ನೀವು ದೇವಸ್ಥಾನದಲ್ಲಿ ಕಲ್ಲನ್ನು ನೋಡಬಹುದು. ಈ ಕಲ್ಲು ದೇವಿಯ ಶಾಪಕ್ಕೆ ತುತ್ತಾದ ಕಲ್ಲು ಎನ್ನಲಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2TFPrbb
July 05, 2021 at 06:24PM