Featured Image Source : Halfsamosa
ಭಾರತದಲ್ಲಿ ಅದೆಷ್ಟೋ ಪರ್ವತಗಳು, ಬೆಟ್ಟಗಳು, ನದಿಗಳು ಕುತೂಹಲದ ಮೂಲವಾಗಿ ಪರಿಣಮಿಸಿವೆ. ಅದೆಷ್ಟೋ ನದಿಗಳ ಉಗಮ, ಎಲ್ಲಾಗಿ ಹರಿಯುತ್ತೆ ಅನ್ನೋದು ಪ್ರಶ್ನಾರ್ಥಕವಾಗಿ ಉಳಿದುಬಿಟ್ಟಿದೆ. ಅದೇ ರೀತಿ, ಗುಹೆಗಳ ಕುರಿತಾದ ಸಂಶಯಗಳು, ಸಂಶೋಧನೆಗಳು ನಿರಂತರವಾಗಿ ನಡೆದಿದೆ. ತಿಳಿಯದ ವಿಷಯಗಳ ಬಗ್ಗೆ ಕೆದಕುವ ಮನುಷ್ಯನ ಕುತೂಹಲ ಯಾವತ್ತೂ ಕಡಿಮೆಯಾಗಿಲ್ಲ. ಹೊಸ ಹೊಸ ವಿಚಾರಗಳನ್ನು ನಿರಂತರವಾಗಿ ತಿಳಿದುಕೊಳ್ಳುವ ಪ್ರಯತ್ನದಲ್ಲೇ ಅಚ್ಚರಿ ಮೂಡಿಸುವ ಹೊಸ ವಿಷಯಗಳು ತಿಳಿದುಕೊಳ್ಳಲು ಸಾಧ್ಯವಾಗಿದೆ. ಜಗತ್ತಿಗೆ ಪರಿಚಯವಿರದ ಹೊಸ ಜಾಗಗಳ ಪರಿಚಯವಾಗಿದೆ.
ಗುಹೆಗಳು ಸಹ ಇಂಥಹಾ ಕುತೂಹಲಕಾರಿ ತಾಣಗಳಲ್ಲಿ ಒಂದು. ಅದೆಷ್ಟೋ ಗ್ರಾಮಗಳಲ್ಲಿ ಯಾರಿಗೂ ತಿಳಿಯದ ಅಜ್ಞಾತ ಗುಹೆಗಳಿವೆ. ಗುಹೆಗಳಿಗೆ ಹೋಗುವ ದಾರಿ, ಗುಹೆಯೊಳಗೇನಿದೆ ಅನ್ನುವ ಬಗ್ಗೆ ವರ್ಷಗಳಿಂದಲೂ ಕುತೂಹಲಗಳು ಬೆಳೆಯುತ್ತಲೇ ಇದೆ. ಇದು ಅಂಥಹಾ ಗುಹೆಗಳಲ್ಲಿ ಒಂದು. ಬಿಹಾರದ ಸೋನ್ ಭಂಡಾರ್ ಗುಹೆ..ಏನಿದರ ವಿಶೇಷತೆ..? ಇಲ್ಲಿರುವ ಗುಹೆಯ ಬಗ್ಗೆ ಹಬ್ಬಿಕೊಂಡಿರುವ ಸುದ್ದಿಯೇನು..ತಿಳಿದುಕೊಳ್ಳೋಣ..
ಸೋನ್ ಭಂಡಾರ್ ಗುಹೆಯ ರಹಸ್ಯವೇನು?
Image Source : Nativeplanet
ಗುಹೆಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ರಹಸ್ಯ ಕಥೆಗಳಿಂದಾಗಿ ಸಂಶೋಧಕರು ಮತ್ತು ಇತಿಹಾಸಕಾರರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತವೂ ಸಹ ಅಂತಹ ಅನೇಕ ಗುಹೆಗಳನ್ನು ಹೊಂದಿದೆ. ಅವುಗಳ ಬಗ್ಗೆ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ಬಿಹಾರದ ರಾಜ್ಗೀರ್ನಲ್ಲಿರುವ ಸೋನ್ ಭಂಡಾರ್ ಗುಹೆಗಳು ಇದೇ ರೀತಿ ಎಲ್ಲರ ಹುಬ್ಬೇರುವಂತೆ ಮಾಡಿ ಕುತೂಹಲಕಾರಿಯಾಗಿ ಪರಿಣಮಿಸಿದೆ. ಇಲ್ಲಿರುವ ಗುಹೆಗಳು ಸನ್ ಭಂಡಾರ್ ಅಥವಾ ಸೋನೆಭಂಡಾರ್ ಗುಹೆಗಳು ಎಂದು ಕರೆಯಲ್ಪಡುತ್ತವೆ.
ಈ ಗುಹೆಗಳು ಮೂಲತಃ ಕ್ರಿ.ಪೂ 3 ಅಥವಾ 4ನೇ ಶತಮಾನದಲ್ಲಿ ನಿರ್ಮಾಣವಾಗಿರುವ ವೈಬರ್ ಬೆಟ್ಟಗಳ ತಪ್ಪಲಿನಲ್ಲಿರುವ ಎರಡು ಕೃತಕ ಗುಹೆ ರಚನೆಗಳ ಒಂದು ಗುಂಪಾಗಿದೆ ಎಂದು ತಿಳಿದುಬಂದಿದೆ. ದೇಶದಲ್ಲಿರುವ ಕಲ್ಲಿನಿಂದ ನಿರ್ಮಾಣವಾಗಿರುವ ಕೆಲವೇ ಕೆಲವು ಗುಹೆಗಳಲ್ಲಿ ಸೋನ್ ಭಂಡಾರ್ ಗುಹೆ ಸಹ ಒಂದಾಗಿದೆ. ಇಲ್ಲಿನ ಮಾನವ ನಿರ್ಮಿತ ಅಥವಾ ನೈಸರ್ಗಿಕವಾದ ಅದ್ಭುತ ರಚನೆಯ ಬಗ್ಗೆ ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸುತ್ತಾರೆ .
ಪ್ರವೇಶದ್ವಾರದ ಬಂಡೆಯ ಮೇಲೆ ಗುಪ್ತ ಭಾಷೆಯಲ್ಲಿ ಬರೆದ ಶಾಸನದ ಪ್ರಕಾರ, ಈ ಗುಹೆಗಳನ್ನು ಜೈನ ಮುನಿಯವರು ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ವೈರದೇವ ಎಂಬ ಹೆಸರಿನ ವ್ಯಕ್ತಿ ಇದು ಕ್ರಿ.ಪೂ 4 ನೇ ಶತಮಾನಕ್ಕೆ ಸೇರಿದ್ದು ಎಂದು ಉಲ್ಲೇಖಿಸಿದ್ದಾರೆ. ಇಲ್ಲಿ ಕಂಡುಬರುವ ವಿಷ್ಣುವಿನ ವಿಗ್ರಹದ ಕುರುಹುಗಳಿಂದ ಈ ಗುಹೆ ಜೈನ ಧರ್ಮದೊಂದಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಭಾರತದ ಬ್ರಿಟಿಷ್ ಪುರಾತತ್ವ ಸರ್ವೇಯರ್, ಕನ್ನಿಂಗ್ ಹ್ಯಾಮ್ ಸುದೀರ್ಘವಾದ ಸಂಶೋಧನೆ ನಡೆಸಿ, ಐತಿಹಾಸಿಕವಾಗಿ ಈ ಗುಹೆಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿವೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸೋನ್ ಭಂಡಾರ್ ಗುಹೆಯಲ್ಲಿ ನಿಧಿ ಇರೋದು ನಿಜಾನ..?
Image Source : Jagran.com
ಸೋನ್ ಭಂಡಾರ್ ಗುಹೆಯಲ್ಲಿ ಚಿನ್ನದ ರಾಶಿಯಿದೆ ಅನ್ನೋದು ಈ ಪ್ರದೇಶದಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿರುವ ಮಾತು,. ಆದರೆ ಇದು ಎಷ್ಟರಮಟ್ಟಿಗೆ ನಿಜ ಅನ್ನೋದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ನಿಜವಾಗಿಯೂ ಈ ಗುಹೆಯೊಳಗೆ ಚಿನ್ನವಿದೆಯಾ..ಇಲ್ಲ ಗುಹೆಯಲ್ಲಿ ನಿಧಿಯಿದೆ ಅನ್ನೋದು ಬರೀ ವದಂತೀನಾ ಅನ್ನೋದಕ್ಕೆ ಉತ್ತರ ದೊರಕಿಲ್ಲ.
ಸೋನ್ ಭಂಡಾರ್ ಗುಹೆಗಳು ನಿಗೂಢವಾಗಿ ಎಲ್ಲರ ಅಚ್ಚರಿಗೆ ಕಾರಣವಾಗುತ್ತಿದೆ. ಸೋನ್ ಭಂಡಾರ್ ಎಂದರೆ ಹೆಸರೇ ಸೂಚಿಸುವಂತೆ ಚಿನ್ನದ ಗಣಿ ಎಂದರ್ಥ. ಹೀಗಾಗಿಯೇ ಈ ಗುಹೆಯಲ್ಲಿ ನಿಧಿಯಿದೆ. ರಾಶಿ ರಾಶಿ ಚಿನ್ನವಿದೆ ಎಂದೇ ನಂಬಲಾಗುತ್ತದೆ. ಸೋನ್ ಭಂಡಾರ್ನ ಪ್ರಾಚೀನ ಗುಹೆಗಳು ಗುಪ್ತ ಚಿನ್ನದ ನಿಧಿಯ ನೆಲೆಯಾಗಿದೆ ಎಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ ಗುಹೆಗಳ ಗೋಡೆಗಳ ಒಳಗೆ ರಾಶಿ ರಾಶಿ ಚಿನ್ನವನ್ನು ಹುದುಗಿಡಲಾಗಿದೆಯಂತೆ. ಗುಹೆಯೊಳಗೆ ನಿಧಿಯತ್ತ ಸಾಗುವ ಮಾರ್ಗವಿದೆ ಎಂದು ಹೇಳಲಾಗುತ್ತದೆ, ಆದರೆ ಅದು ಎಷ್ಟರಮಟ್ಟಿಗೆ ನಿಜ ಅನ್ನೋದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಮತ್ತು ಯಾರೂ ಅದನ್ನು ಇಲ್ಲಿಯವರೆಗೂ ಕಂಡುಹಿಡಿದಿಲ್ಲ.
ಸೋನ್ ಭಂಡಾರ್ ಗುಹೆಯ ಒಂದು ಗೋಡೆಯ ಮೇಲೆ, ದ್ವಾರದಂತಹ ರಚನೆಯನ್ನು ಗಮನಿಸಬಹುದು. ಅದರ ಪಕ್ಕದಲ್ಲಿ ಕೆಲವು ಅಸ್ಪಷ್ಟವಾದ, ಓದಲಾಗದ ಶಾಸನವಿದೆ. ಇದು ಒಂದು ರೀತಿಯ ರಹಸ್ಯ ಪದ ಎಂದು ಜನರು ಹೇಳುತ್ತಾರೆ, ಮತ್ತು ಅದನ್ನು ಓದಲು ಯಾರು ನಿರ್ವಹಿಸುತ್ತಾರೋ ಅವರು ನಿಧಿಯ ದ್ವಾರವನ್ನು ತೆರೆಯಬಲ್ಲರು ಎಂಬ ಮಾತು ಇಲ್ಲಿ ಪ್ರಚಲಿತದಲ್ಲಿ. ದೇಶ-ವಿದೇಶದಿಂದ ಸಾವಿರಾರು ಮಂದಿ ಈ ಗುಹೆಗೆ ಭೇಟಿ ನೀಡಿದ್ದರೂ, ಇಲ್ಲಿಯವರೆಗೆ, ಶಾಸನವನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ.
ಆದರೆ, ಈ ಸೋನ್ ಭಂಡಾರ್ ನಿಧಿಯನ್ನು ಹುಡುಕಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಲೇ ಇವೆ ಎನ್ನುವುದು ಸ್ಪಷ್ಟವಾಗುತ್ತದೆ. ಅನಾದಿ ಕಾಲದಿಂದಲೂ ಇಲ್ಲಿನ ಗುಹೆಯನ್ನು ಬಗೆದು ಚಿನ್ನದ ಮೂಲವನ್ನು ಹುಡುಕಲು ಹಲವು ತಂಡಗಳು ಯತ್ನಿಸಿ ವಿಫಲವಾಗಿವೆ. ಒಮ್ಮೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳು ಗುಹೆಯ ಗೋಡೆಗಳನ್ನು ಬಲವಾದ ಸ್ಫೋಟಕಗಳಿಂದ ಸ್ಫೋಟಿಸಲು ಪ್ರಯತ್ನಿಸಿ ನಿಧಿಯನ್ನು ಹೊರತೆಗೆಯಲು ಯತ್ನಿಸಿದರು. ಆದರೆ ಗೋಡೆಗಳು ಸ್ಫೋಟಗೊಳ್ಳದ ಕಾರಣ ಇದು ಸಾಧ್ಯವಾಗಲಿಲ್ಲ. ಈ ಘಟನೆಯ ನಂತರ ಸೋನ್ ಭಂಡಾರ್ ಗುಹೆಯ ಕುರಿತಾದ ಕುತೂಹಲ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.
ದಂತಕಥೆಗಳ ಪ್ರಕಾರ, ಗುಹೆಯಲ್ಲಿ ಒಂದು ಮಾರ್ಗವಿದೆ ಎಂದು ಹೇಳಲಾಗುತ್ತದೆ. ಈ ಮಾರ್ಗ ಚಿನ್ನದ ಖಜಾನೆಯ ದಾರಿ ಎಂದು ಹೇಳುತ್ತಾರೆ. ಈ ಮಾರ್ಗವು ವೈಭಾಗಿರಿ ಪರ್ವತದ ಮೂಲಕ ಹೋಗುತ್ತದೆ ಮತ್ತು ಪರ್ವತ ಶ್ರೇಣಿಗಳ ಎದುರು ಭಾಗದಲ್ಲಿರುವ ಸಪ್ತಪಾಮಿ ಗುಹೆಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಈ ನಿಧಿ ರಾಜ ಬಿಂಬಿಸಾರನಿಗೆ ಸೇರಿದೆ ಎಂಬ ಕಥೆಯೂ ಇದೆ. ಈ ಕಥೆಯ ಪ್ರಕಾರ ಬಿಂಬಿಸಾರನ ಮಗ ಸಂಪತ್ತಿನ ಆಸೆಗೆ ತನ್ನ ತಂದೆಯನ್ನೇ ಸಿಂಹಾಸನದಿಂದ ಕೆಳಗಿಳಿಸುತ್ತಾನೆ, ಇದರಿಂದ ಸಿಟ್ಟಿಗೆದ್ದ ತಾಯಿ ಸಂಪತ್ತನ್ನು ರಹಸ್ಯವಾಗಿ ಮರೆಮಾಚಿದ್ದರು ಎಂದು ಹೇಳಲಾಗುತ್ತದೆ. ನಂತರ ಅದನ್ನು ತೀರ್ಥಂಕರನಿಗೆ ದಾನ ಮಾಡಲಾಯಿತು. ಅವರು ಇದನ್ನು ಗುಹೆಯಲ್ಲಿ ತಂದು ಇರಿಸಿದರು ಎಂದು ಹೇಳುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2ZzmccP
September 26, 2021 at 11:34AM