ಅಮೃತಬಳ್ಳಿಯ (Tinosporsa Cordifolia) ಆರೋಗ್ಯಕಾರಿ ಪ್ರಯೋಜನಗಳು:
ಸಸ್ಯಶಾಸ್ತ್ರೀಯ ಹೆಸರು(Botanical Name) ಟಿನೋಸ್ಪೋರ್ಸಾ ಕಾರ್ಡಿಫೋಲಿಯಾ(Tinosporsa Cordifolia) ಅಮೃತ ಬಳ್ಳಿ ಇದನ್ನು "ಇಂಡಿಯನ್ ಕ್ವಿನೈನ್" ಎಂದು ಕರೆಯುತ್ತಾರೆ.ಇದು ಮೆನಿಸ್ಪೆರ್ಮೇಸಿಯಾ ಕುಟುಂಬಕ್ಕೆ(Family: Minispermaceae)ಸೇರಿದ ಒಂದು ಹಸುರು ಬಳ್ಳಿ,ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ.ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ.ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಅಮೃತ ಬಳ್ಳಿಯನ್ನು"ಅಮರತ್ವದ ಮಕರಂದ" ಮತ್ತು "ಸ್ವರ್ಗದ ಅಮೃತ" ಎಂದೂ ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸಾಮಾನ್ಯ ಹೆಸರುಗಳಲ್ಲಿ ಇವು ಸೇರಿವೆ: ಸಂಸ್ಕೃತ(Sanskrit): ಗುಡುಚಿ,ಅಮೃತ (Guduchi, amrita), ಹಿಂದಿ (Hindi): ಗಿಲೋಯ, ಅಮೃತ(giloya, amrita),ಬಂಗಾಳಿ (Bengali): ಗಿಲೋ, ಗುಲಾಂಚ(giloe, gulancha), ಗುಜರಾತಿ(Gujarati): ಗಾಡೊ, ಗಲೋ (gado, galo), ತೆಲುಗು (Telugu): ಡುಯುಟಿಗೆ, ತೆಪ್ಪತಿಗೆ(duyutige, teppatige),ಇಂಗ್ಲಿಷ್(English): ಹಾರ್ಟ್ಲೀಫ್(heartleaf) ಮೂನ್ಸೀಡ್ (moonseed), ಟಿನೋಸ್ಪೊರಾ(Tinospora ),ಕನ್ನಡ: ಅಮೃತ ಬಳ್ಳಿ,ಇದನ್ನು ಸಾಮಾನ್ಯವಾಗಿ ಗಿಲೋಯ್ (giloya), ಎಂದು ಕರೆಯಲಾಗುತ್ತದೆ. ಇದರ ಬೆಳೆಯುವ ಸ್ಥಳ ಉಷ್ಣವಲಯದ ಪ್ರದೇಶಗಳು. ರಾಸಾಯನಿಕ ಸಂಯೋಜನೆ Chemical composition: ಬೆರ್ಬೆರಿನ್(berberine), ಫಿನೈಲ್ಪ್ರೊಪೇನ್(phenylpropane), ಡೈಸ್ಯಾಕರೈಡ್ಗಳು(disaccharides), ಕೋಲೀನ್(choline), ಟಿನೋಸ್ಪೊರಿನ್(tinosporin), ಟಿನೋಸ್ಪೊರಾನ್(tinosporon). ಅಮೃತಬಳ್ಳಿ: ಭಾರತ, ಮ್ಯಾನ್ಮಾರ್ ಮತ್ತು ಶ್ರೀಲಂಕಾದ ಪ್ರದೇಶಗಳಿಗೆಉಷ್ಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಸ್ಥಳೀಯವಾಗಿ ಕಂಡು ಬರುತ್ತದೆ, ಗುಡುಚಿ ವಿಶಿಷ್ಟವಾಗಿ ಪತನಶೀಲ ಮತ್ತು ಒಣ ಕಾಡುಗಳಲ್ಲಿ 1000 ಅಡಿ ಎತ್ತರದಲ್ಲಿ ಬೆಳೆಯುತ್ತದೆ. ಇದರ ಹೂವುಗಳು ಬೇಸಿಗೆಯಲ್ಲಿ ಅರಳುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ.ಇದರ ಕಾಂಡ,ಎಲೆ,ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ,ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ-ಮೃತ’ ಎಂಬ ಹೆಸರು.ಅಮೃತ ಬಳ್ಳಿ ಹೆಸರಲ್ಲೇ ಇರುವ ಹಾಗೆ ಇದು ನಿಜಕ್ಕೂ ಅಮೃತವೇ,ಮೃತದ ವಿರುದ್ಧ ಪದ ಅಮೃತ.ಸಂಸ್ಕೃತದಲ್ಲಿ ಅಮೃತವೆಂದರೆ ಸಾವು ಬರದೇ ಇರುವಂತಹದು ಎಂದರ್ಥ.ಇದಕ್ಕೆ ವಿಶೇಷವಾದ ಆರೈಕೆ ಏನು ಬೇಡ. ಇದಕ್ಕೆ ಯಾವ ಗೊಬ್ಬರವೂ ಹಾಕುವ ಹಾಗಿಲ್ಲ.ಒಂದು ಬಿಂದಿಗೆ ನೀರು ಹಾಕಿದರೆ ಸಾಕು ಎಲ್ಲಾ ಕಾಲದಲ್ಲಿಯೂ ಚಿಗುರುತ್ತದೆ. ಹಿಂದಿನ ಕಾಲದಲ್ಲಿ ತುಳಸಿಗಿಡ ಹಾಕುವ ಹಾಗೆ ಎಲ್ಲರೂ ತಮ್ಮ ಹಿತ್ತಲಿನಲ್ಲಿ ಅಮೃತ ಬಳ್ಳಿಯನ್ನು ಹಾಕುತ್ತಿದ್ದರು.ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ.ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ.ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ.ಇದರ ಎಲೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ.ಪ್ರತಿಭಾಗವೂ ಕಹಿಯಾಗಿರುತ್ತದೆ.
ರುಚಿ :ಅಮೃತ ಬಳ್ಳಿಯು ಕಹಿ,ಒಗರು ರಸಗಳನ್ನು ಒಳಗೊಂಡಿದೆ.
ಅಮೃತಬಳ್ಳಿಯನ್ನು ನಿಮಗೆ ಬಂದಿರುವಂತಹ ಕಾಯಿಲೆಗೆ ಮನೆಮದ್ದಿನ ರೂಪದಲ್ಲಿ ಬಳಕೆ ಮಾಡಬಹುದು.
ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ,ಮಜ್ಜಿಗೆ ಸೊಪ್ಪು, ತುಳಸಿ,ಲವಂಗ,ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ).ಕಷಾಯ ಮಾಡಿ ಕುಡಿಯಬಹುದು.ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು.ಎಲ್ಲಾ ಬಗೆಯ ಜ್ವರಗಳಲ್ಲಿಯೂ ಅಮೃತಬಳ್ಳಿಯು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ.
* ಮಧುಮೇಹ ರೋಗಕ್ಕೆ: ಔಷಧಿಯಾಗಿ ಬಳಸುತ್ತಾರೆ. ಅದರ ತಜಾ ಕಾಂಡವನ್ನು ಜಜ್ಜಿ. ಹಿಸುಕಿ ರಸ ತೆಗೆದು ೨ ಚಮಚ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ 2 ಬಾರಿ ಆಹಾರ ಸೇವನೆಯ ಮುಂಚೆ ಕುಡಿಯ ಬೇಕು, ಅಮೃತಬಳ್ಳಿಯ ಚೂರ್ಣ ಅರ್ಧ ಟೀ ಚಮಚದಷ್ಟೇ ಒಂದೆರಡು ಒಳ್ಳೆಮೆಣಸು(BLACK PEPPAR) ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.
* ತ್ರಿದೋಷಗಳಿಂದ (ಅಂದರೆ ವಾತ,ಪಿತ್ತ,ಕಫ): ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ.ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ.ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ ಆಹಾರ ಸೇವನೆಗೆ ಮುಂಚೆ ಸೇವಿಸಬೇಕು. ವಾತ ಹಾಗು ಕಫ ದೋಷಗಳನ್ನು ಶಮನ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ.
* ಸ್ಮರಣ ಶಕ್ತಿಗೆ : ಶತಾವರಿ ಶುಂಠಿ ವಾಯುವಿಳಂಗ ಬಜೆ, ಬ್ರಾಹ್ಮಿ ಅಳಲೆಕಾಯಿ ಉತ್ತರಾಣೆ ಮತ್ತು ಸಮಭಾಗ ಅಮೃತಬಳ್ಳಿ ಸೇರಿಸಿ ನಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು.ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕುವುದು.ಮೇಲೆ ಕೆಂಪು ಕಲ್ಲುಸಕ್ಕರೆ ಹಾಕಿರುವ ಬಿಸಿ ಹಾಲನ್ನು ಕುಡಿಯುವುದು. ದೂರವಾಣಿ ಸಂಖ್ಯೆಗಳನ್ನಾಗಲಿ ಅಥವಾ 15ರಿಂದ 19ರ ತನಕ ಮಗ್ಗಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದು ಕೆಲವೇ ತಿಂಗಳಲ್ಲಿ ಫಲ ದೊರೆಯುವುದು.
* ಬಾಯಾರಿಕೆ, ವಾಂತಿ, ವಾಕರಿಕೆ : ಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು.ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು.
* ಮೂತ್ರನಾಳದಲ್ಲಿ ಕಲ್ಲು : ಅಮೃತಬಳ್ಳಿ,ನೆಗ್ಗಿಲು,ಅಶ್ವಗಂಧ.ನೆಲ್ಲಿ,ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳುವುದು. 10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.
* ಮೈಮೇಲೇಳುವ ಪಿತ್ತದ ಗಂಧೆಗಳು : ಅಮೃತಬಳ್ಳಿಯ ಎಲೆ ಸಾಸಿವೆ ಶ್ರೀಗಂಧದ ಚಕ್ಕೆ ಇವುಗಳ ಸಮತೂಕವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದು. ಪಿತ್ತ ವಿಕಾರ ಕಡಿಮೆ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುವುದು.
* ಹೊಟ್ಟೆ ಉರಿ : ಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.
* ವಾತ ಜ್ವರದಲ್ಲಿ :ಅಮೃತಬಳ್ಳಿ ತ್ರಫಲ ಚೂರ್ಣ,ತುಂಗೇಗುಡ್ಡೆ ಕೊತ್ತಂಬರಿ,ಶತಾವರಿ,ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯವನ್ನು ಮಾಡಿ ಆರಿಸಿ ಕುಡಿಯುವುದು.
* ಅಮೃತಬಳ್ಳಿ ಜ್ವರಕ್ಕೆಬಳಕೆ :ಅಮೃತಬಳ್ಳಿ ಇದು ಆಂಟಿಬ್ಯಾಕ್ಟೀರಿಯಲ್ ,ಆಂಟಿವೈರಲ್ ,(antibacterial, antiviral )ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಜ್ವರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುವ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 1-2 ಗ್ರಾಂ ಹಿಪ್ಪಲಿ, ಜೇನುತುಪ್ಪ ಮತ್ತು 20 ಮಿಲಿ ಅಮೃತಬಳ್ಳಿ ರಸವನ್ನು ತೆಗೆದುಕೊಂಡು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ. ತೀವ್ರ ಜ್ವರದ ಸಂದರ್ಭದಲ್ಲಿ, 40 ಗ್ರಾಂ ಅಮೃತಬಳ್ಳಿ ಅನ್ನು ಅರ್ಧ ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಸಿಡಿ. ಬೆಳಿಗ್ಗೆ ದ್ರಾವಣವನ್ನು ತಗ್ಗಿಸಿ ಮತ್ತು ಈ ದ್ರಾವಣದ 20 ಮಿಲಿಗಳನ್ನು ಸೇವಿಸಿ.
* ಅಮೃತಬಳ್ಳಿ ಕಣ್ಣಿನ ಕಾಯಿಲೆಗಳಿಗೆ,ದೃಷ್ಟಿಮಾಂದ್ಯಕ್ಕೆ: ಫೈಟೊಕೆಮಿಕಲ್ಸ್(phytochemicals) ಕಣ್ಣಿನ ಅಸ್ವಸ್ಥತೆಗಳನ್ನು ಸರಿಪಡಿಸಲು ಮತ್ತು ಕನ್ನಡಕವಿಲ್ಲದೆ ನಿಮ್ಮನ್ನು ನೋಡಲು ಸಹಾಯ ಮಾಡುತ್ತದೆ.ಭಾರತದ ಕೆಲವು ಭಾಗಗಳಲ್ಲಿ, ಜನರು ಕಣ್ಣುಗಳಿಗೆ ಅಮೃತಬಳ್ಳಿ ಅನ್ನು ಅನ್ವಯಿಸುತ್ತಾರೆ. ಇದಕ್ಕಾಗಿ, 10 ಮಿಲಿ ಅಮೃತಬಳ್ಳಿ ರಸವನ್ನು ತೆಗೆದುಕೊಂಡು ಅದರಲ್ಲಿ ಕಲ್ಲು ಉಪ್ಪು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ.ಇದನ್ನು ನಿಮ್ಮ ಕಣ್ಣುಗಳ ಮೇಲೆ ಹಚ್ಚಿಕೊಳ್ಳಿ.ಈ ಪರಿಹಾರವು ಸ್ಕ್ಲೆರಲ್ ತುರಿಕೆ,( scleral itching) ಕಣ್ಣಿನ ಪೊರೆ ಮತ್ತು ಕಾರ್ನಿಯಲ್ ಅಸ್ವಸ್ಥತೆಗಳ(corneal disorders.) ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.ದೃಷ್ಟಿಮಾಂದ್ಯದಲ್ಲಿ ಅಮೃತಬಳ್ಳಿ ತ್ರಿಫಲ ಚೂರ್ಣ,ಹಿಪ್ಪಲಿ ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡುವುದು. ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದು.ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಈ ಟಾನಿಕ್ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ..
* ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು,ಆಯಸ್ಸು ಹೆಚ್ಚಲು:ಇದು ಪರಿಣಾಮಕಾರಿ ಔಷಧಿ. ಮೇಲಿನ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿವಸ ಅರಳ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳುವುದು.
* ಸ್ತ್ರೀಯರ ರಕ್ತ ಪ್ರದರಕ್ಕೆ:20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಕಲ್ಲುಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು. ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ (ಎದೆಹಾಲು) ಶುದ್ಧಿಯಾಗುವುದು.
* ಉರಿ ಮೂತ್ರದಲ್ಲಿ : ಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದು,ಪ್ರಮಾಣ ಒಂದು ಗ್ರಾಂ ವೇಳೆಗೆ.ಮೂತ್ರದ ಅಸ್ವಸ್ಥತೆಗಳಲ್ಲಿ ಇದು ಮೂತ್ರವರ್ಧಕ, ಆಂಟಿ-ಆವರ್ತಕ,(diuretic, anti-periodic) ಪರ್ಯಾಯ ಮತ್ತು ಫೆಬ್ರಿಫ್ಯೂಜ್(febrifuge) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಗುಣಲಕ್ಷಣಗಳು ಮೂತ್ರದ ಸೋಂಕಿಗೆ (urinary infections.)ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.30 ಮಿಲಿ ಅಮೃತಬಳ್ಳಿ ಮತ್ತು ಲೀಡ್ವರ್ಟ್ ಸಸ್ಯದ ಬೇರು(leadwort plant root) ಕಷಾಯವನ್ನು ತೆಗೆದುಕೊಂಡು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ. 15-20 ಮಿಲಿ ಅಮೃತಬಳ್ಳಿ ರಸವನ್ನು ದಿನಕ್ಕೆ ಮೂರು ಬಾರಿ ಸೇವಿಸಿ.
* ಅಜೀರ್ಣಕ್ಕೆ ಅಮೃತಬಳ್ಳಿ:ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಉತ್ತಮ ಟಾನಿಕ್ ಆಗಿದೆ. ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ನೀರಿನಲ್ಲಿ ಅರ್ಧದಷ್ಟು ಪರಿಮಾಣದವರೆಗೆ ಕುದಿಸಿ, ಅದರಲ್ಲಿ 3 ಚಿಟಿಕೆ ಹಿಪ್ಪಲಿಯನ್ನು ಸೇರಿಸಿ. ದಿನಕ್ಕೆ ಎರಡು ಬಾರಿ 10-15 ಮಿಲಿ ಸೇವಿಸಿ. ಆಹಾರದ ಮೊದಲು ಮತ್ತು ಜೇನುತುಪ್ಪದೊಂದಿಗೆ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.ನಾವು ಆಮ್ಲ ಪುಡಿಯೊಂದಿಗೆ ಕಾಲು ಟೀಚಮಚ ಅಮೃತಬಳ್ಳಿ ಅನ್ನು ಸಹ ತೆಗೆದುಕೊಳ್ಳಬಹುದು.ಅಮೃತಬಳ್ಳಿ ಪುಡಿಯೊಂದಿಗೆ ಒಂದು ಕಪ್ ಮಜ್ಜಿಗೆ ಕೂಡ ಪ್ರಯೋಜನಕಾರಿಯಾಗಿದೆ.
ಗೌಟ್ (gout) ಅನ್ನು ನಿರ್ವಹಿಸುವುದು: ಗೌಟ್ ಗೆ ಅಮೃತಬಳ್ಳಿ ಚಿಕಿತ್ಸೆ ಮತ್ತು ನಿರ್ವಹಣೆಗಾಗಿ ತೆಗೆದುಕೊಳ್ಳಬಹುದು. ಇದರ ಕಾಂಡವನ್ನು ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ.ಇದನ್ನು ದಿನಕ್ಕೆ ಎರಡು ಬಾರಿ 20-30 ಮಿಲಿ ಸೇವಿಸಿ.ಅಮೃತಬಳ್ಳಿ ಸಾರವನ್ನು ಕ್ಯಾಸ್ಟರ್ ಆಯಿಲ್ನೊಂದಿಗೆ(castor oil ) ಬೆರೆಸಿ ಮತ್ತು ಸೇವಿಸಿ, ಇದು ಗೌಟ್ಗೆ ಉತ್ತಮ ಪರಿಹಾರವಾಗಿದೆ.
.* ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಮೃತಬಳ್ಳಿ : ಫೈಟೊಕೆಮಿಕಲ್ಗಳು(phytochemicals) ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಅಮೃತಬಳ್ಳಿನಲ್ಲಿ ಬೆರ್ಬೆರಿನ್(berberine), ಪಾಲ್ಮರಿನ್(.palmarin) ಗಿಲೋಯಿನಿನ್( giloinin), ಗಿಲೋಯಿನ್(giloin ), ಟಿನೋಸ್ಪೊರೊಲ್(tinosporol), ಟಿನೋಸ್ಪೊರಿನ್(tinosporin ).ನಂತಹ ಘಟಕಾಂಶಗಳನ್ನು ಕಂಡುಕೊಂಡಿವೆ, ಆಯುರ್ವೇದದಲ್ಲಿ, ಅಮೃತಬಳ್ಳಿ, ಅಲೋವೆರಾ, ಮತ್ತು ಗೋಧಿ ಹುಲ್ಲು, ರಕ್ತದ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಉದ್ದನೆಯ ತುಂಡು ಅಮೃತಬಳ್ಳಿ, ಒಂದು ಕಪ್ ಗೋಧಿ ಹುಲ್ಲಿನ ರಸ ಮತ್ತು 4 ಇಂಚಿನ ಅಲೋವೆರಾ ಎಲೆಯನ್ನು ತೆಗೆದುಕೊಳ್ಳಿ. ಎಲ್ಲಾ ಗಿಡಮೂಲಿಕೆಗಳ ರಸವನ್ನು ಸೇರಿಸಿ ಮತ್ತು ಕ್ಯಾನ್ಸರ್ ಸ್ಥಿತಿಯನ್ನು ನಿರ್ವಹಿಸಲು ನಿಯಮಿತವಾಗಿ ಸೇವಿಸಿ.
* ಕ್ಷಯರೋಗದಲ್ಲಿ ಅಮೃತಬಳ್ಳಿ :ಕ್ಷಯರೋಗವನ್ನು ( tuberculosis)ನಿರ್ವಹಿಸಲು ಇದು ತುಂಬಾ ಸಹಾಯಕವಾಗಿದೆ. ಇದನ್ನು ಹೀಗೆ ತೆಗೆದುಕೊಳ್ಳಬಹುದು ಗಿಡಮೂಲಿಕೆಗಳಾದ ಅಮೃತಬಳ್ಳಿ,ಶತಾವರಿ(asparagus), ಮಲಬಾರ್ ಕಾಯಿ(Malabar nut), ಡ್ಯಾಶ್ಮೂಲ್(dashmool), ಬಾಲಮೂಲ್(balamool), ವಿಂಟರ್ ಚೆರ್ರಿ (winter cherry)ಮತ್ತು ಇಂಡಿಯನ್ ಆಟಿಸ್ಗಳ(Indian atis), ಕಷಾಯವನ್ನು ಮಾಡಿ ದಿನಕ್ಕೆ ಎರಡು ಬಾರಿ 60 ಮಿಲಿ ವರೆಗೆ ಸೇವಿಸಿ.
* ಚರ್ಮದ ಅಸ್ವಸ್ಥತೆಗಳು(Skin disorders): ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು(blood purifying properties) ಒಳಗೊಂಡಿದೆ, ಇದು ಚರ್ಮವನ್ನು ನಯವಾಗಿ, ಸುಕ್ಕು ಮುಕ್ತವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ನೆಲ್ಲಿಕಾಯಿ(Indian Gooseberry) ಮತ್ತು ಅರಿಶಿನದೊಂದಿಗೆ ಸ್ವಲ್ಪ ಅಮೃತಬಳ್ಳಿ ರಸವನ್ನು ಮಿಶ್ರಣ ಮಾಡಿ ತೆಗೆದುಕೊಳ್ಳಬಹುದು.
1.ಯಕೃತ್ ಸಮಸ್ಯೆ(Liver Problems): ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ಗುಣಪಡಿಸುವುದು. ಹೊಟ್ಟೆ ಕಿವುಚಿದಂತಾಗುವುದು,ಹೊಟ್ಟೆ ಉಬ್ಬರ, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಹಿಪ್ಪಲಿ.ಈ ಮೂರುನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ.ರಾತ್ರಿ ನೆನೆಯಲು ಬಿಡಿ. ಮುಂಜಾನೆ ಮೂರುನ್ನು ನೀರಿನಿಂದ ಚೆನ್ನಾಗಿ ಕಿವುಚಿ ತೆಗೆಯಿರಿ, ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬೇಕು.ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸ ಬೇಕು.14 ರಿಂದ 18 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿದೆ ಯಕೃತ್ತಿಗೆ(Liver Problems),ಸಂಬಂಧಿಸಿದ ಸಮಸ್ಯೆ ಹಾಗೂ ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳು ನಿವಾರಣೆಯಾಗುವವು.
* ಅಮೃತಬಳ್ಳಿಯ ಕಹಿಬಳ್ಳಿಯಿಂದ ಸಿಹಿ ಹಿಟ್ಟನ್ನು ಪಡೆಯುವ ವಿಧಾನವನ್ನು:ದಪ್ಪ ಬಳ್ಳಿಗಳನ್ನು ತಂದು ಸಣ್ಣ ಸಣ್ಣ ಕತ್ತರಿಸಿದ ತುಂಡು ಅರೆದು ನೀರಿನಲ್ಲಿ ಕಿವುಚಿದಾಗ ಮೈದಾಹಿಟ್ಟಿನಂತಹ ಸಾರವು ಪಾತ್ರೆಯ ತಳದ ಕೆಳಭಾಗದಲ್ಲಿ ಕೆಲಗೆ ಕುಳಿತುಕೊಳ್ಳುತ್ತದೆ. ಅದರ ಮೇಲೆ ನಿಂತ ನೀರನ್ನು ಬಸಿದು ಮತ್ತೆ ನೀರನ್ನು ತುಂಬಿ ಹಿಟ್ಟು ನಿಲ್ಲಲು ಬಿಟ್ಟು ಮತ್ತೆ ಬಸಿಯಬೇಕು. ಹೀಗೆ ನಾಲ್ಕಾರು ಬಾರಿ ಮಾಡಿ ತಳದ ಹಿಟ್ಟನ್ನು ಒಣಗಿಸಿಟ್ಟು ಕೊಳ್ಳುತ್ತಾರೆ. ಇದನ್ನು ನೀರಿನಲ್ಲಿ ಕದಡಿ ಪಾಯಸಮಾಡಿ ರೋಗಿಗಳು,ನಿರೋಗಿಗಳು ಸೇವಿಸುವುದು.
* ಕೂದಲು ಸೊಂಪಾಗಿ ಬೆಳೆಯುವುದು: ಅಮೃತ ಬಳ್ಳಿ ಈ ಮೊದಲೆ ಹೇಳಿದಂತೆ ದಿವ್ಯ ಔಷಧಿಯ ಗುಣವನ್ನು ಒಳಗೊಂಡಿದೆ. ಮನೆಯಲ್ಲಿ ಜಾಗವಿದ್ದರೆ ಅಲ್ಲಿ ಅಮೃತ ಬಳ್ಳಿಯನ್ನು ಬೆಳೆಸಿ. ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಇದನ್ನು ಬಳ್ಳಿಯಂತೆ ಹಬ್ಬಿಸಬಹುದು ಅಥವಾ ಚಪ್ಪರದಂತೆ ಮಾಡಿಕೊಳ್ಳಬಹುದು. ಇದರ ಗಾಳಿ ಸೇವನೆಯಿಂದಲೂ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆ : ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಬೆಳೆಯಲು,ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು. ಅಮೃತ ಬಳ್ಳಿ ಹೇರ್ ಆಯಿಲ್ ತಯಾರಿಸಲು: ಬೇಕಾದ ವಸ್ತುಗಳು! > ಅಮೃತ ಬಳ್ಳಿ 250 ಮೆಲಿ ಲೀಟರ್ ದಪ್ಪ ಜ್ಯೂಸು > ಎಳ್ಳೆಣ್ಣೆ 250 ಮೆಲಿ ಲೀಟರ್ > ಪಚ್ಚಕರ್ಪೂರ 25 ಗ್ರಾಂ ಮಾಡುವ ವಿಧಾನ! ಅಮೃತ ಬಳ್ಳಿಯನ್ನುಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸರ್ನಲ್ಲಿ ತೆಗೆದುಕೊಂಡು ಪುಡಿಮಾಡಿ 250 ಮೆಲಿ ಲೀಟರ್ (500ml) ಶುದ್ಧ ನೀರು ಸೇರಿಸಿ ದಪ್ಪ ಜ್ಯೂಸು ಮಾಡಿ.ಸ್ಟೀಲ್ ಪಾತ್ರೆಗೆ ಹಾಕಿ ಕಾಲುಲೀಟರ್(250ml) ಆಗುವ ವರೆಗೆ ಕುದಿಸಿ. ದಪ್ಪ ಕಷಾಯ ಮಾಡಿ ಪಕ್ಕಕ್ಕೆ ಇರಿಸಿ,ಈಗ ಸಣ್ಣ ಕಬ್ಬಿಣದ ಬಾಣಲೆಯಲ್ಲಿ ಮೆಲಿ ಲೀಟರ್(250ml) ಸಂಸ್ಕರಿಸದ ಎಳ್ಳಿನ ಎಣ್ಣೆಯನ್ನು ಬಿಸಿ ಮಾಡಿ, (ದಯವಿಟ್ಟು ನಾನ್ ಸ್ಟಿಕ್ ಪ್ಯಾನ್ಗಳನ್ನು ಬಳಸಬೇಡಿ), ಎಳ್ಳೆಣ್ಣೆ ಕುದಿಯಲು ಪ್ರಾರಂಭಿಸಿದ ಬಳಿಕ ಅಮೃತ ಬಳ್ಳಿಯ ದಪ್ಪ ಜ್ಯೂಸು,ಸೇರಿಸಿ ಪುನಃ ಕುದಿಯಲು ಇಡಿ.ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ 25 ಗ್ರಾಂ ಪಚ್ಚ ಕರ್ಪೂರವನ್ನು ಸೇರಿಸಿ ಮತ್ತು ನೀರಿನ ಅಂಶ ಆವಿಯಾಗುವವರೆಗೆ ಕುದಿಸಿ ಮತ್ತು ಸಿಜ್ಲಿಂಗ್ ಶಬ್ದ ಸಂಪೂರ್ಣನಿಲ್ಲುವವರೆಗೆ ಕುದಿಸಿ, ಸ್ವಿಚ್ ಆಫ್ ಮಾಡಿ,ಎಣ್ಣೆ ತಣ್ಣಗಾಗಲು ಬಿಡಿ,ಬಟ್ಟೆ ಇಂದ ಸೋಸಿ ಗ್ಲಾಸ್ ಬಾಟಲ್ ನಲ್ಲಿ ತುಂಬಿಸಿ, ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ ಅರ್ಧ ಘಂಟೆಯವರೆಗೆ ಕಾಯಿರಿ ಮಸಾಜ್ ಮಾಡಿ ಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು. ಕಣ್ಣಿಗೆ ತಂಪನ್ನು ನೀಡುವುದು ಹಾಗೂ ಮಿದುಳಿಗೆ ಉತ್ತಮ ಆರೈಕೆ ನೀಡುವುದು. ಸುಮಾರು 3-6 ಗ್ರಾಂ ಅಮೃತ ಬಳ್ಳಿಯ ಪುಡಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ.ಇದು ಸ್ರವಿಸುವ ಪೇಸ್ಟ್ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.ನಿಮ್ಮ ಕೂದಲನ್ನು ಬೇರ್ಪಡಿಸಿ ಮತ್ತು ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಯ ಮೇಲೆ ನಿಮ್ಮ ಕೂದಲಿನ ತುದಿಗಳಿಗೆ ಚೆನ್ನಾಗಿ ಅನ್ವಯಿಸಿ.ಇದನ್ನು 30 ನಿಮಿಷಗಳ ಕಾಲ ಬಿಡಿ,ಇದು ಉರಿಯೂತದ ಸ್ಥಾನದಿಂದಾಗಿ ತಲೆಹೊಟ್ಟು, ನೆತ್ತಿ ಮತ್ತು ಒಡೆದ ತುದಿಗಳಂತಹ ಕೂದಲಿನ ಪರಿಸ್ಥಿತಿಗಳ ವಿರುದ್ಧ ಹೋರಾಡುತ್ತದೆ. ಹೇರ್ ವಾಶ್ ಹೊಂದಲು ಸಾಂಪ್ರದಾಯಿಕವಾಗಿ( arappu powde)ಅರಪ್ಪು ಪುಡಿಯನ್ನು ಬಳಸಬೇಕು, ಆದರೆ ನೀವು ಸೌಮ್ಯವಾದ ಶಾಂಪೂ ಬಳಸಬಹುದು. ಈ ಎಣ್ಣೆಯು ಕೂಲಿಂಗ್ ಪರಿಣಾಮವನ್ನು ಸಹ ಹೊಂದಿದೆ ಮತ್ತು ಇದು ಕಣ್ಣುಗಳಿಗೆ ತುಂಬಾ ಒಳ್ಳೆಯದು.
* ಅದಲ್ಲದೆಯೇ ಅಮೃತ ಬಳ್ಳಿಯನ್ನು ಊಟದ ರೂಪದಲ್ಲಿ ಸಾಂಬಾರು,ಪಲ್ಯ,ಚಟ್ನಿಯನ್ನು ಕೂಡ ಮಾಡಿಕೊಂಡು ತಿನ್ನಬಹುದು. ಇತರಹದ ರೂಪದಲ್ಲಿಯೂ ಕೂಡ ಉಪಯೋಗ ಮಾಡಿದೆ ಆದಲ್ಲಿ ಮುಂದೆ ಬರುವಂತಹ ಕಾಯಿಲೆಗಳನ್ನ ತಡೆಗಟ್ಟಲಿಕೆ ಸಾಧ್ಯತೆ ಇದೆ.
‘ಸ್ವಾಸ್ಥಸ್ಯ ಸ್ವಾಸ್ಥ ರಕ್ಷಣಂ’ ಅಂದರೆ ಕಾಯಿಲೆ ಬಂದ ಮೇಲೆ ವಾಸಿ ಮಾಡಿಕೊಳ್ಳುವುದಕ್ಕೇ ಪ್ರಯತ್ನ ಪಡುವ ಬದಲು ಕಾಯಿಲೆನೆ ಬರದ ಹಾಗೆ ತಡೆಯಬೇಕು ಎಂದರ್ಥ.ಈ ಅಮೃತ ಬಳ್ಳಿಯನ್ನು ಬಳಸುವುದರಿಂದ ಬರುವಂತ ಕಾಯಿಲೆಗಳನ್ನು ಅಲ್ಲೇ ತಡೆಯುವಂತಹ ಅವಕಾಶಗಳಿವೆ.
ಅಮೃತ ಬಳ್ಳಿಯನ್ನು ಸೂಕ್ತ ಬಳಕೆ ಹಾಗೂ ಸೇವನೆಯಿಂದ ವಿವಿಧ ವ್ಯಾದಿಗಳನ್ನು ಗುಣಪಡಿಸಬಹುದು. ಯಾವುದೇ ಸಸ್ಯವನ್ನು ಔಷಧೀಯವಾಗಿ ಬಳಸುವ ಮೊದಲು ಯಾವಾಗಲೂ ವೃತ್ತಿಪರರಿಂದ,ಆಯುರ್ವೇದ ಪಂಡಿತರ,ಅನುಭವಿ ಹಿರಿಯರ,ಸಲಹೆ ಪಡೆಯಿರಿ.
ಸಂಗ್ರಹ ಮಾಹಿತಿ
from Planet Tv https://ift.tt/3p3hyg4
November 25, 2021 at 05:39AM