ನವಿಲುಗರಿಗಳಿಂದ ಉಪಯುಕ್ತ ಔಷಧಿಗಳು:
ಪ್ರಕೃತಿಯು ತನ್ನ ಎಲ್ಲ ಜೀವ ಜಂತುಗಳ ಆರೋಗ್ಯ ಕಾಪಾಡಲು ಹಲವಾರು ಸಸ್ಯೌಷಧಗಳನ್ನು ಕೊಟ್ಟಿದೆ. ಮನುಷ್ಯನು ತನ್ನ ಸುತ್ತ ಮುತ್ತಲಿನ ಪ್ರಕೃತಿಯನ್ನು ಕಾಪಾಡಿಕೊಂಡು ಬಂದರೆ ಅದು ಅವನನ್ನು ಕಾಪಾಡುವುದು. ಎಲ್ಲ ಪ್ರಾಣಿ ಪಕ್ಷಿಗಳು ಒಂದಲ್ಲ ಒಂದು ರೀತಿಯಲ್ಲಿ ಸಹಾಯಕಾರಿಯಾಗಿ ಇರುತ್ತದೆ. ನವಿಲುಗಳಿಂದ ಉದುರಿದ ಗರಿಗಳಿಂದ ಹಲವಾರು ಔಷಧಿಗಳನ್ನು ಮನುಷ್ಯ ಕಂಡುಕೊಂಡಿದ್ದಾನೆ.
ಮಯೂರ ಪುಚ್ಛ ಭಸ್ಮ:
ನವಿಲು ಗರಿಗಳನ್ನು ಚೆನ್ನಾಗಿ ತೊಳೆದುಕೊಂಡು ಅದು ಒಣಗಿದ ನಂತರ, ಹಸುವಿನ ತುಪ್ಪದಲ್ಲಿ ಅದ್ದಿ, ಮಣ್ಣಿನ ಹಣತೆಯಲ್ಲಿ ತುಪ್ಪದ ದೀಪದಲ್ಲಿ ಸುಡಬೇಕು. ಸುಟ್ಟ ನಂತರ ಬರುವ ಬೂದಿ(ಭಸ್ಮ)ಯನ್ನು ಶೇಖರಿಸಿಟ್ಟುಕೊಳ್ಳಬೇಕು.
ಈ ಭಸ್ಮವನ್ನು ಈ ಕೆಳಗೆ ತಿಳಿಸಿದ ರೋಗಗಳಿಗೆ ಉಪಯೋಗಿಸುವರು:
೧) ಬಿಕ್ಕಳಿಕೆ(Hiccough): ಎಡಬಿಡದೆ ಬರುವ ಬಿಕ್ಕಳಿಕೆ ನಿಲ್ಲಲು, ಈ ಭಸ್ಮದ ಒಂದೆರಡು ಚಿಟಿಕೆಯಷ್ಟನ್ನು ಜೇನು ತುಪ್ಪದಲ್ಲಿ ಕಲೆಸಿ ನೆಕ್ಕಬೇಕು.
೨) ಗರ್ಭಿಣಿಯರಿಗೆ ವಾಂತಿ ಬರುವಂತೆ ಆಗುವುದು, ಆದರೆ ವಾಂತಿಯಾಗುವುದಿಲ್ಲ. ಈ ರೀತಿ ಆದಾಗ ಮೇಲೆ ತಿಳಿಸಿದಂತೆ ಅಥವಾ ಸಕ್ಕರೆ ಅಥವಾ ಬೆಲ್ಲದೊಡನೆ ಸೇವಿಸಿದರೆ ವಾಂತಿಯಾದಂತೆ ಆಗುವುದು ನಿಲ್ಲುವುದು.
೩)ಪ್ರಯಾಣ ಕಾಲದಲ್ಲಿ ವಾಂತಿ ಬಾರದ ಹಾಗೆ ಮತ್ತು ವಾಂತಿಯ ನಂತರ ಬರುವ ತಲೆನೋವಿಗೆ:
ಕೆಲವರಿಗೆ ಪ್ರಯಾಣಮಾಡುವಾಗ ವಾಂತಿ ಬಂದಂತೆ ಆಗುವುದು. ಅಂತಹವರು ಪ್ರಯಾಣಕ್ಕೆ ಸ್ವಲ್ಪ ಮುಂಚೆ ಒಂದೆರಡು ಚಿಟಿಕೆ ಈ ಭಸ್ಮವನ್ನು ಬೆಲ್ಲದ ಜೊತೆ ಕಲೆಸಿ ತಿನ್ನಬೇಕು.
ಪ್ರಯಾಣದಲ್ಲಿ ವಾಂತಿಯ ನಂತರ ಬರುವ ತಲೆ ನೋವಿಗೆ, ಅರ್ಧಚಮಚದಷ್ಷು ಭಸ್ಮವನ್ನು ಸಿಹಿ ಮಜ್ಜಿಗೆ ಅಥವ ಎಳನೀರಲ್ಲಿ ಬೆರಸಿ ಕುಡಿಯುವುದರಿಂದ ಪಿತ್ತ ಶಮನವಾಗಿ ತಲೆನೋವು ನಿಲ್ಲುತ್ತದೆ.
೪) ಪಿತ್ತದಿಂದ ಮತ್ತು ಅಜೀರ್ಣದಿಂದಾಗುವ ವಾಂತಿಗೆ ಸಹ ಮೇಲೆ ಹೇಳಿದ ರೀತಿ ಉಪಯೋಗಿಸಬೇಕು.
ನವಿಲುಗರಿಗಳನ್ನು ಮನೆಯ ಹೊರಗೋಡೆ ಮತ್ತು ಒಳಗೋಡೆಗಳಲ್ಲಿ ಅಲ್ಲಲ್ಲೆ ಇಡುವುದರಿಂದ ಹಾವು, ಹಲ್ಲಿಯ ಕಾಟ ಕಡಿಮೆ ಎಂದು ಹೇಳುವರು.
ಗಮನಿಸಿ: ಈ ಮೇಲಿನ ಎಲ್ಲ ವಿಚಾರಗಳು ಸಂಗ್ರಹಿತವಾಗಿವೆ. ಇದರ ಬಗ್ಗೆ ಬಲ್ಲವರಿಂದ ತಿಳಿದು ಉಪಯೋಗಿಸ ಬೇಕೆಂದು ಕೋರಿಕೆ.
from Planet Tv https://ift.tt/3rtZWeS
January 16, 2022 at 09:09AM