ಶಕ್ತಿ ಪೀಠಗಳು ಸೃಷ್ಟಿಯಾಗಿದ್ದು ಹೇಗೆ?
ಶಕ್ತಿ ಪೀಠಗಳ ಹಿಂದಿರುವ ಕಥೆ ಏನು?
Image credits : Vedicfeed
ಶಕ್ತಿ ಪೀಠಗಳು ಅಂದರೆ ಏನು? ಅವುಗಳು ಯಾಕೆ ಸೃಷ್ಟಿಯಾದವು? ಇದರಲ್ಲಿ ಶಿವನ ಪಾತ್ರವೇನು? ಮಹಾವಿಷ್ಣುವು ಮಾಡಿದ್ದೇನು? ಬ್ರಹ್ಮನಿಗೂ ಶಕ್ತಿಪೀಠಗಳಿಗೆ ಇರುವ ಸಂಬಂಧವೇನು? ಈ ಎಲ್ಲಾ ವಿವರಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಿ.
ದಂತಕಥೆಯ ಪ್ರಕಾರ, ಬ್ರಹ್ಮ ದೇವನು ಬ್ರಹ್ಮಾಂಡದ ಸೃಷ್ಟಿಗೆ ಸಹಾಯ ಮಾಡಲು ಶಕ್ತಿ ಮತ್ತು ಶಿವನನ್ನು ಮೆಚ್ಚಿಸಲು ಯಜ್ಞವನ್ನು ಮಾಡುತ್ತಾನೆ. ಅದರ ಪರಿಣಾಮವಾಗಿ, ಶಕ್ತಿ ದೇವಿಯು ಶಿವನಿಂದ ಬೇರ್ಪಟ್ಟು ಬ್ರಹ್ಮನಿಗೆ ಸಹಾಯ ಮಾಡಲು ಹೊರಹೊಮ್ಮಿದಳು. ಬ್ರಹ್ಮನ ಉದ್ದೇಶ ಈಡೇರಿದ ನಂತರ, ಶಕ್ತಿಯನ್ನು ಶಿವನಿಗೆ ಹಿಂತಿರುಗಿಸಬೇಕಾಗಿತ್ತು.
ಆದರೆ ಬ್ರಹ್ಮನ ಮಗ ದಕ್ಷನು ತನ್ನ ಮಗಳಾಗಿ ಶಕ್ತಿಯನ್ನು ಸತಿ ರೂಪದಲ್ಲಿ ಪಡೆಯಲು ಹಲವಾರು ಯಜ್ಞಗಳನ್ನು ಮಾಡಿದನು, ಅವಳನ್ನು ಶಿವನೊಂದಿಗೆ ಮದುವೆಯಾಗಬೇಕೆಂಬ ಉದ್ದೇಶ ಅವನದ್ದಾಗಿತ್ತು.
ಆದರೆ, ಶಿವನ ಮುಂದೆ ಸುಳ್ಳಿ ಹೇಳಿದ್ದಕ್ಕಾಗಿ ಶಿವ, ಬ್ರಹ್ಮನ 5ನೇ ತಲೆಯನ್ನು ಕತ್ತರಿಸಿದ್ದನು. ಈ ವಿಷಯ ತಿಳಿದ ದಕ್ಷ, ಶಿವನನ್ನು ದ್ವೇಷಿಸಲು ಆರಂಭಿಸಿದನು. ಜೊತೆಗೆ ಸತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡದಿರಲು ನಿರ್ಧರಿಸಿದನು. ಆದರೆ ಶಿವನನ್ನು ಕಂಡು ಆಕರ್ಷಿತಳಾದ ಸತಿಯು, ಶಿವವನ್ನು ವಿವಾಹವಾದಳು.
ಶಿವ ಹಾಗೂ ಸತಿಯ ವಿವಾಹದ ವಿಷಯ ಕೇಳಿ ದಕ್ಷನಿಗೆ ಶಿವನ ಮೇಲಿದ್ದ ದ್ವೇಷವು ಹೆಚ್ಚಾಯಿತು. ದಕ್ಷನು ಶಿವನ ಮೇಲೆ ಸೇಡು ತೀರಿಸಿಕೊಳ್ಳಲು ಎಲ್ಲಾ ದೇವಾನು ದೇವತೆಗಳನ್ನು ಆಹ್ವಾನಿಸುತ್ತಾ ಯಜ್ಞಗಳನ್ನು ಕೈಗೊಂಡನು. ಆದರೆ ಯಜ್ಞಕ್ಕೆ ಶಿವ ಹಾಗೂ ಸತಿಯನ್ನು ಆಹ್ವಾನಿಸಿರಲಿಲ್ಲ.
Image credits : Bhagavata.org
ಶಿವ ಬೇಡ ಎಂದರೂ ಯಜ್ಞಕ್ಕೆ ಹೋದ ಸತಿ!
ತನ್ನ ತಂದೆ ದಕ್ಷನು ಮಾಡುತ್ತಿದ್ದ ಯಜ್ಞಕ್ಕೆ ಆಹ್ವಾನವಿಲ್ಲದಿದ್ದರೂ ಸತಿಯು ಯಜ್ಞಕ್ಕೆ ಹೋಗಲು ನಿರ್ಧರಿಸಿದಳು. ಶಿವ ಎಷ್ಟೇ ಹೇಳಿದರು ಆಕೆ ಕೇಳಲಿಲ್ಲ. ಯಜ್ಞದ ಸ್ಥಳಕ್ಕೆ ಬಂದಾಗ ಶಿವನನ್ನು ದೂಷಿಸುತ್ತಾ ದಕ್ಷನು, ಸತಿಯನ್ನೂ ಅವಮಾನಿಸಿದನು. ಇದರಿಂದ ಕುಪಿತಳಾದ ಸತಿಯು, ಆತ್ಮಹತ್ಯೆ ಮಾಡಿಕೊಂಡಳು.
ಸತಿಯನ್ನು ಕಳೆದುಕೊಂಡ ಶಿವ ವೀರಭದ್ರನಾದ!
Image credits : Bonobology.com
ತನ್ನ ಪತ್ನಿಯನ್ನು ಕಳೆದುಕೊಂಡ ಶಿವನ ಕೋಪ ನೆತ್ತಿಗೇರಿತು. ಆತ ವೀರಭದ್ರನ ರೂಪ ತಾಳಿ, ದಕ್ಷನ ಯಜ್ಞವನ್ನು ಧ್ವಂಸ ಮಾಡಿ, ಆತನ ತಲೆ ಕಡಿದನು. ಅತೀವ ಶೋಕದಲ್ಲಿದ್ದ ಶಿವನು ಸತಿಯ ದೇಹವನ್ನು ಹೊತ್ತು ತಾಂಡವವಾಡಲು ಶುರು ಮಾಡಿದ. ತಾಂಡವ ನೃತ್ಯದಿಂದ ಮೂರು ಲೋಕಗಳು ಅಲ್ಲೋಲ ಕಲ್ಲೋಲವಾಗುವ ಆತಂಕದಿಂದ ದೇವತೆಗಳೆಲ್ಲರೂ ವಿಷ್ಣುವಿನ ಬಳಿ ಓಡೋಡಿ ಬಂದರು.
ಶಿವನ ತಾಂಡವವನ್ನು ನಿಲ್ಲಿಸಲು ವಿಷ್ಣುವಿನಲ್ಲಿ ದೇವತೆಗಳು ಬೇಡಿಕೊಂಡಾಗ, ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ, ಸತಿಯ ಪಾರ್ಥೀವ ಶರೀರವನ್ನು ತುಂಡು ತುಂಡಾಗಿಸಿದ. ಇದರಿಂದಾಗಿಯೇ ಸತಿಯ ದೇಹದ ಒಂದೊಂದು ಭಾಗವು, ಭೂ ಲೋಕದ ಒಂದೊಂದು ಭಾಗಗಳಲ್ಲಿ ಬಿದ್ದವು.
Image credits : Pinterest
ದಕ್ಷ ಯಜ್ಞ, ಸತಿಯ ಆತ್ಮಹತ್ಯೆ, ಶಿವನ ತಾಂಡವ, ವಿಷ್ಣುವಿನ ಸುದರ್ಶನ ಚಕ್ರ ಪ್ರಯೋಗ ಇವೆಲ್ಲವೂ ಭಾರತೀಯ ಇತಿಹಾಸದಲ್ಲಿ ಬಹಳ ದೊಡ್ಡ ಮಹತ್ವ ಪಡೆದುಕೊಂಡಿವೆ. ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳನ್ನು ಶಕ್ತಿ ಪೀಠಗಳನ್ನಾಗಿ ಪರಿಗಣಿಸಿ, ಇಂದಿಗೂ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ. 51 ಶಕ್ತಿ ಪೀಠಗಳಲ್ಲಿ 18 ಸ್ಥಳಗಳನ್ನು ಮಹಾ ಶಕ್ತಿ ಪೀಠ ಎಂದು ಕರೆದು, ಹೆಚ್ಚಿನ ಮಹತ್ವ ನೀಡಲಾಗಿದೆ.
ದಕ್ಷ ಯಜ್ಞವು ಸತಿಯ ಜಾಗವನ್ನು ಪಾರ್ವತಿ ತುಂಬಲು, ಜೊತೆಗೆ ತಪಸ್ವಿಯಾಗಿದ್ದ ಶಿವನು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಕಾರಣವಾಯಿತು. ಪ್ರತಿ ಶಕ್ತಿ ಪೀಠದ ದೇಗುಲದಲ್ಲೂ ಶಕ್ತಿ ದೇವತೆಯ ಜೊತೆಗೆ ಕಾಲಭೈರವನಿಗೂ ಗುಡಿಗಳಿದ್ದು, ಇಬ್ಬರನ್ನೂ ಪೂಜಿಸಲಾಗುತ್ತದೆ.
from ಸುದ್ದಿ - Planet Tv https://ift.tt/3opeXN0
May 18, 2021 at 07:31PM