ಸಂಪತ್ತಿನ ಅಧಿದೇವತೆ ಕೊಲ್ಲಾಪುರ ಮಹಾಲಕ್ಷ್ಮಿ; ಮೂರು ಖಜಾನೆಯಲ್ಲಿದೆ ರಾಶಿ ರಾಶಿ ಚಿನ್ನ..!
source and pic credit: holidify
ಭಕ್ತರ ಪಾಲಿಗೆ ನಂದಾದೀಪದಂತಿರೋ ಮಹಾಲಕ್ಷ್ಮಿ ಕೊಲ್ಲಾಪುರದಲ್ಲಿ ನೆಲೆಸಿದ್ದಾಳೆ. ಮಹಾತಾಯಿ ಯಾವ ರೀತಿಯಲ್ಲಿ ಕಂಗೊಳಿಸುತ್ತಾಳೆ, ಸಕಲವನ್ನು ಸಿದ್ಧಿಸೋ ಪ್ರಾವೀಣ್ಯಳು ಯಾವ ರೂಪದಲ್ಲಿ ನೆಲೆಯೂರಿದ್ದಾಳೆ. ಆಕೆ ನೆಲೆಸಿರೋ ದೇವಳದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಕೊಲ್ಲಾಪುರದ ಮಹಾಲಕ್ಷ್ಮಿದೇವಾಲಯಕ್ಕಿದೆ ಶತಮಾನಗಳ ಇತಿಹಾಸ
ಶತಮಾನಗಳ ಇತಿಹಾಸವಿರೋ ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ ಚಕಿತಗೊಳ್ಳುವಂಥ ಇತಿಹಾಸವನ್ನು ಒಳಗೊಂಡಿದೆ. ಇಡೀ ಭೂಲೋಕದಲ್ಲೇ ಮಹಾಲಕ್ಷ್ಮಿ ಮೊದಲಿಗೆ ನೆಲೆಸಿದ್ದು ಕೊಲ್ಲಾಪುರದಲ್ಲಿ. ಇಲ್ಲಿನ ದೇವಿ ನಿಜ ಸ್ವರೂಪದವಳು ಎಂಬುದಾಗಿಯೂ ಹೇಳಲಾಗುತ್ತೆ. ಹೀಗಾಗಿಯೇ ದೇಶಾದ್ಯಂತ ಈ ದೇವಸ್ಥಾನ ನೋಡಲೆಂದೇ ವರ್ಷಂಪ್ರತಿ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ದೇವಾಲಯದ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದೆ. ಈ ದೇವಾಲಯದಲ್ಲಿ ನೆಲೆಸಿರೋ ತಾಯಿಗೆ ಅತೀತ ಶಕ್ತಿಯಿದೆ.. ನವರಾತ್ರಿ ಹಬ್ಬದ ಸಮಯದಲ್ಲಂತೂ ಅಲ್ಲಿನ ಸೌಂದರ್ಯವನ್ನು ವರ್ಣಿಸಲಸಾಧ್ಯ. ಮಹಾಮಾಯಿಯ ಭಕ್ತರು ಆ ಸಂದರ್ಭದಲ್ಲಿ ಅಂಬಾಭವಾನಿ ದೇವಿಯ ದರ್ಶನಕ್ಕಾಗಿ ಮುಗಿ ಬೀಳೋ ದೃಶ್ಯ ನೋಡಿಯೇ ತಿಳಿಯಬೇಕು.
ಮಹಾಲಕ್ಷ್ಮಿಯ ದರ್ಶನಕ್ಕೆ ಬರ್ತಾನೆ ಸೂರ್ಯದೇವ
ಶಿವರಾತ್ರಿಯಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶಿವನ ಲಿಂಗದ ಮೇಲೆ ಕಿರಣಗಳು ನೇರವಾಗಿ ಬೀಳುತ್ತವೆ. ಅದೇ ರೀತಿ ಕೊಲ್ಲಾಪುರದಲ್ಲೂ ಒಂದು ವಿಸ್ಮಯ ನಡೆಯುತ್ತೆ. ಮಹಾಲಕ್ಷ್ಮಿಯ ದೇವಸ್ಥಾನದೊಳಗೂ ಸಹ ಸೂರ್ಯನ ಕಿರಣಗಳು ಬರುತ್ತವೆ. ಅವು ದೇವಳವನ್ನು ಸ್ಪರ್ಶಿಸಿದಾಗ ಇಡೀ ದೇವಾಲಯವೇ ಒಂದು ವಿಶಿಷ್ಠ ಅನುಭೂತಿಯನ್ನು ತೆರೆದಿಡುತ್ತೆ.
source and pic credit: online puja
ಇಲ್ಲಿ ಮತ್ತೊಂದು ವಿಚಾರವನ್ನು ಹೇಳಲೇಬೇಕು. ಅದೇನಂದ್ರೆ, ಕೊಲ್ಲಾಪುರದಲ್ಲಿ ನೆಲೆ ನಿಂತಿರೋ ಲಕ್ಷ್ಮಿಗೆ ತಿರುಪತಿಯಿಂದ ಬರೋ ಉಡುಗೊರೆ ವಿಚಾರ. ಹೌದು..ವಿಷ್ಣುವಿನ ಪತ್ನಿ ಮಹಾಲಕ್ಷ್ಮಿ. ಕೊಲ್ಲಾಪುರಕ್ಕೆ ಬಂದು ನೆಲೆಸಿರೋದ್ರಿಂದಲೇ ದೀಪಾವಳಿ ವೇಳೆ ತಿರುಪತಿಯಿಂದ ಲಕ್ಷ್ಮಿಗೆ ಸೀರೆ ಹಾಗು ಉಡುಗೊರೆಯನ್ನು ನೀಡಲಾಗುತ್ತದೆಯಂತೆ. ಆ ದಿನದಂದು ಅಲ್ಲಿನ ಉಡುಗೊರೆಯಿಂದ್ಲೇ ತಾಯಿಯನ್ನು ಅಲಂಕರಿಸಲಾಗುತ್ತದೆ.ಇನ್ನು ದೇವಿಗೆ ನಡೆಯೋ ಮಹಾ ಮಂಗಳಾರತಿ ವೇಳೆ ಮಹಾಲಕ್ಮೀ ತಾಯಿಯಲ್ಲಿ ಸ್ಥಿರ ಚಿತ್ತದಿಂದ ಬೇಡಿಕೊಂಡ್ರೆ ಮನಸಲ್ಲಿ ಅಂದುಕೊಂಡಿದ್ದೆಲ್ಲವೂ ಈಡೇರುತ್ತದೆ ಎಂಬ ನಂಬಿಕೆಯಿದೆ.
ದೇವಾಲಯದಲ್ಲಿನ ಪೂಜಾ ವಿಧಾನಗಳು, ಆಭರಣ ಸಮರ್ಪಣೆಯ ನಂತರ ವಿಶೇಷ ಪೂಜೆಗಳು ವಿಜೃಂಭಣೆಯಿಂದ ಪ್ರಾರಂಭಗೊಳ್ಳುತ್ತೆ. ಆ ಸಂದರ್ಭದಲ್ಲಿ ಮಹಾಲಕ್ಷ್ಮಿ ವಿರಾಜಮಾನಳಾಗಿರುತ್ತಾಳೆ. ಮನೋಹರವಾಗಿ ಭಕ್ತಿ ಪ್ರೇರಕಳಾಗಿರುತ್ತಾಳೆ. ತಾಯಿಯ ಗರ್ಭಗುಡಿ ವೈಭವೋಪೂರಿತ ಚಿನ್ನದ ತೋರಣಗಳಿಂದ ಕೂಡಿಕೊಂಡಿದೆ.
source and pic credit: google.com
ದೇವಳದ ಮಹಾಲಕ್ಷ್ಮಿಯ ಉತ್ಸವ ಮೂರ್ತಿಯನ್ನು ಅಲ್ಲಿರುವ ಟೇಮ್ಲಾಬಾಯಿ ದೇವಾಲಯದವರೆಗೂ ಮೆರವಣಿಗೆ ಮಾಡಲಾಗುವುದು. ಬಳಿಕ ಇಬ್ಬರೂ ದೇವತೆಗಳಿಗೆ ಒಟ್ಟಿಗೆ ಕೂರಿಸಿ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮೀಯ ಜೊತೆಗೆ ಟೇಮ್ಲಾಬಾಯಿಯನ್ನು ಒಟ್ಟಿಗೆ ಪೂಜಿಸಲು ಒಂದು ಕಾರಣವಿದೆ. ಅದೇನಂದ್ರೆ, ಒಂದೊಮ್ಮೆ ದೇವಿ ಮಹಾಲಕ್ಷ್ಮಿ ಕೊಲ್ಹಾಸುರನ ಸಂಹಾರ ಮಾಡುವ ಸಂದರ್ಭ ಬರುತ್ತೆ. ಆಗ ಮಹಾಲಕ್ಮೀಗೆ ಟೇಮ್ಲಾಬಾಯಿ ಸಹಾಯ ಮಾಡಿದಳೆಂಬ ಪ್ರತೀತಿ ಇದೆ. ಆದರೆ ಮಹಾಲಕ್ಷ್ಮಿ ಈ ಸಹಾಯವನ್ನು ನೆನೆಯದೆ ಹೋಗ್ತಾಳೆ. ಹೀಗಾಗಿ ಕೋಪಗೊಂಡು ಟೇಮ್ಲಾಬಾಯಿ ಗುಡ್ಡದ ಮೇಲೆ ಹೋಗಿ ನೆಲೆಸಿದಳೆಂಬ ಐತಿಹ್ಯವಿದೆ.
ಇಲ್ಲಿದೆ ಮಹಾಲಕ್ಷ್ಮಿಯ ಮಹಾನ್ ಮೂರ್ತಿ
ಮಹಾರಾಷ್ಟ್ರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಅಂಬಾಬಾಯಿ, ಪುರಾಣೋಕ್ತವಾದ 108 ಶಕ್ತಿದಾಯಕವಾದ ಸ್ಥಳಗಳಲ್ಲಿ ಒಂದು. ಇನ್ನು ಕ್ರಿಸ್ತಶಕ 7ನೇ ಶತಮಾನದಲ್ಲಿ ದೇವಾಲಯ ನಿರ್ಮಾಣವಾಗಿದೆ. ಆದ್ರೆ ಇದರ ಜೀರ್ಣೋದ್ಧಾರ ಕ್ರಿಸ್ತ ಶಕ 9ನೇ ಶತಮಾನದಲ್ಲಾಯ್ತು. ಶಿಲಾಹಾರ ಯಾದವ ರಾಜರು ದೇವಾಲಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರು. ಅವರ ಕಾಲದಲ್ಲಿಯೇ ಸುಮಾರು 40 ಕಿಲೋ ತೂಕವಿರುವ ಮಹಾಲಕ್ಷ್ಮಿಯ ಮೂರ್ತಿಯಾಗಿದ್ದು. ಇದನ್ನು ಯಾವ ಶಿಲ್ಪಕಲೆಗಳಂತೆಯೂ ಬದಲಿಸದೆ ಇಲ್ಲಿಯವರೆಗೂ ಹಾಗೆಯೇ ಉಳಿಸಿಕೊಂಡು ಬರಲಾಗಿದೆ.
source and pic credit: google.com
ಮಹಾಲಕ್ಷ್ಮಿ ದೇವಾಲಯದ ಚರಿತ್ರೆಯನ್ನು ಕೆದಕಿದ್ರೆ ಒಂದೊಂದೇ ಅಚ್ಚರಿಯ ಸಂಗತಿಗಳು ತೆರೆದುಕೊಳ್ಳುತ್ತವೆ. ಯಾಕಂದ್ರೆ ಈ ಮಹಾಲಕ್ಷ್ಮಿಯ ದೇವಾಲಯಕ್ಕೆ 1800 ವರ್ಷಗಳ ಇತಿಹಾಸವಿದೆ. ಈ ದೇವಾಲಯದ ಸುತ್ತಲೂ ಆಕರ್ಷಣೀಯವಾಗಿ 30 ರಿಂದ 35 ದೇವಾಲಯಗಳನ್ನ ನಿರ್ಮಾಣ ಮಾಡಲಾಗಿದೆ. ಆ ದೇವಸ್ಥಾನಗಳೆಲ್ಲವೂ ಈ ಮಹಾಲಕ್ಷ್ಮೀ ದೇವಸ್ಥಾನದಷ್ಟೇ ಮಹತ್ವ ಹೊಂದಿವೆ. ಇನ್ನು ಈ ಕಾರಣದಿಂದಲೇ ಈ ದೇವಾಲಯವನ್ನು ದಕ್ಷಿಣದ ಕಾಶಿ ಎನ್ನಲಾಗುತ್ತೆ.
ಕರ್ಣದೇವನಿಂದದೇಗುಲ ನಿರ್ಮಾಣ
ದೇವಾಲಯದ ಸುತ್ತಲೂ ಇರುವ ಶಿಲಾ ಶಾಸನಗಳ ಪ್ರಕಾರ ಈ ದೇವಾಲಯವನ್ನು ಶಾಲಿವಾಹನ ಶಕೆಯ ಕರ್ಣ ದೇವ ನಿರ್ಮಾಣ ಮಾಡಿದ್ದಾನೆ. ಅಲ್ಲಿನ ವಾಸ್ತುಶಿಲ್ಪ ಶೈಲಿಯಂತು ಅದ್ವಿತೀಯ, ದೇವಾಲಯದಲ್ಲಿ ಸಾಕಷ್ಟು ಕಲ್ಲಿನ ಕಂಬಗಳನ್ನ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಎಷ್ಟು ಕಂಬಗಳಿವೆ ಎಂಬುದನ್ನು ಈ ವರೆಗೂ ಯಾರಿಂದಲೂ ಲೆಕ್ಕಹಾಕಲು ಸಾದ್ಯವಾಗಿಲ್ಲ . ಇದು ವಿಚಿತ್ರವೋ ವಿಸ್ಮಯವೋ ಇಂದಿಗೂ ತಿಳಿಯಲಾಗಿಲ್ಲ. ಬಹುಶಃ ಇದು ಮಾತೆ ಮಹಾಲಕ್ಷ್ಮೀಯ ಅಪೂರ್ವ ಶಕ್ತಿಯೇ ಇರಬಹುದು.ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದ ಮತ್ತೊಂದು ವಿಶೇಷವೆಂದ್ರೆ ಅದರ ಖಜಾನೆ.
source and pic credit: google.com
1962ರಲ್ಲಿ ಮೊದಲ ಬಾರಿ ತೆರೆಯಲಾಗಿತ್ತು ಖಜಾನೆ
ಈ ಮಹಾಲಕ್ಷ್ಮಿ ದೇವಾಲಯದ ಖಜಾನೆಯ ಬಾಗಿಲನ್ನು 1962ರಲ್ಲಿ ಭಾರತ ಸರ್ಕಾರ ತೆರೆಸಿತ್ತು. ಅದಾದ ನಂತರ 40 ವರ್ಷವಾದ್ರೂ ದೇವಾಲಯದ ಖಜಾನೆಯನ್ನು ತೆರೆಯುವ ಕಾರ್ಯಕ್ಕೆ ಕೈ ಹಾಕಿರಲಿಲ್ಲ. ಖಜಾನೆ ಸುಭದ್ರವಾಗಿರುತ್ತೆ ಅನ್ನೋ ನಂಬಿಕೆ ಇತ್ತು.ಇದೇ ನಂಬಿಕೆಯಲ್ಲಿದ್ದ ಸರ್ಕಾರಕ್ಕೆ ದಿನದಿಂದ ದಿನಕ್ಕೆ ಮಹಾಲಕ್ಷ್ಮೀ ದೇವಳದ ಖಜಾನೆ ಬರಿದಾಗುತ್ತಿದೆ ಎನ್ನುವ ಅನುಮಾನ ಮೂಡಿತ್ತು. ಇದಕ್ಕೆ ಕಾರಣ, ಮಹಾರಾಷ್ಟ್ರದಲ್ಲಿ ಕಳ್ಳಕಾಕರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣದಿಂದಾಗಿ ಭಾರತ ಸರ್ಕಾರ ದೇವಾಲಯದ ಖಜಾನೆಯನ್ನು ತೆರೆಸಿ ಲೆಕ್ಕ ಹಾಕಿಸಿತ್ತು . ಈ ಸಂದರ್ಭದಲ್ಲಿ ಶ್ರೀಮಂತಿಕೆಗೆ ಒಡೆಯಳಾಗಿರೋ ಮಹಾಲಕ್ಷ್ಮಿಯ ದೇವಾಲಯಕ್ಕೆ ರಾತ್ರಿ ಹಗಲು ಶಸ್ತ್ರ ಸಜ್ಜಿತ ಪೊಲೀಸರೇ ಸ್ವತಃ ಕಾವಲಿದ್ರು. ಆಗ ಸಿಕ್ಕಿದ ಸಂಪತ್ತು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತು.
source and pic credit: google.com
ಇನ್ನು ಇಲ್ಲಿ ಕಾಣ ಸಿಗುವ ಆ ಅತೀತ ಸಂಪತ್ತು ಹಲವು ರಾಜರು ನೀಡಿರುಯ ಮೊಘಲ್ ಅರಸು, ಪೇಶ್ವೆ ಮಹಾರಾಜರು, ಶಿವಾಜಿ ಮಹಾರಾಜ್ ಹೀಗೆ ಮಹಾನ್ ರಾಜರುಗಳು ಕೊಟ್ಟಿರುವಂತದ್ದು. ಕೇರಳದ ಅನಂತ ಪದ್ಭನಾಭ ದೇವಾಲಯದ ಖಜಾನೆಯ ಸಂಪತ್ತನ್ನು ಬಿಟ್ಟರೆ ಮಹಾರಾಷ್ಟ್ರದ ಮಹಾಲಕ್ಷ್ಮಿ ದೇವಾಲಯದ ಸಂಪತ್ತು ಇಡೀ ದೇಶದಲ್ಲೇ ಕುತೂಹಲ ಕೆರಳಿಸಿತ್ತು.
ದೇವಾಲಯದ ಮೂರು ಖಜಾನೆಯಲ್ಲಿದೆ ರಾಶಿ ರಾಶಿ ಚಿನ್ನ..!
ಇನ್ನು ದೇವಾಲಯದಲ್ಲಿ ಒಟ್ಟು ಮೂರು ಖಜಾನೆಗಳಿವೆ. ಆ ಮೂರು ಖಜಾನೆಗಳಲ್ಲರೋ ಬಂಗಾರದ ಕಿರೀಟ, ಬಂಗಾರದ ಗದೆ, ಬೆಳ್ಳಿಯ ಖಡ್ಗ, ಚಿನ್ನದ ಕಾಸಿನ ಸರ, ಕೆ.ಜಿತೂಕದ ಚಿನ್ನದ ಸರ, ಬಂಗಾರದ ಗುಬ್ಬಚ್ಚಿಗಳು ಎಲ್ಲಿನೋಡಿದ್ರೂ ಚಿನ್ನದ ರಾಶಿ ಹಾಗೂ ರಾಶಿ ರಾಶಿ ನೋಟಿನ ಕಂತೆಗಳುಕಾಣ ಸಿಕ್ಕಿತ್ತು. ಅಂದಾಜಿನ ಪ್ರಕಾರ ಈ ಸಂಪತ್ತಿನ ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ.
source and pic credit:asianage.com
ಕೆಜಿಗಟ್ಟಲೆ ಚಿನ್ನಕ್ಕೆ ಕಾವಲು ನಾಗದೇವ, ಆಜ್ಞೆ ಮೀರಿದ್ರೆ ಸಂಭವಿಸುತ್ತೆ ಆಪತ್ತು
ಮಹಾಲಕ್ಷ್ಮಿಯ ಬಳಿಯಿದೆ ಕೆಜಿಗಟ್ಟಲೆ ಚಿನ್ನ, ಅದಕ್ಕೆ ಕಾವಲಂತೆ ನಾಗದೇವ. ಮಹಾಲಕ್ಷ್ಮಿಯ ಸನ್ನಿದಿಯಲ್ಲಿರುವ ಮಹಾಲಕ್ಷ್ಮಿಯ ಖಜಾನೆಯನ್ನು ಸಾಕ್ಷಾತ್ ನಟರಾಜನೇ ನಾಗದೇವನ ರೂಪದಲ್ಲಿ ಕಾಯುತಿದ್ದಾನೆ. ಕೊಲ್ಲಾಪುದ ಕಾಂಡೇಕರ್ ಕುಟುಂಬದವರು ದೇವರ ಕಳೆದ ನೂರಾರು ವರ್ಷಗಳಿಂದ ದೇವಳದ ಪೂಜಾ ವಿದಿ ವಿಧಾನಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಆ ಕುಟುಂಬದವರನ್ನು ಬಿಟ್ಟು ಬೇರೆ ಯಾರು ದೇವಾಲಯದ ಒಳಕ್ಕೆ ನೇರವಾಗಿ ಪ್ರವೇಶಿಸುವಂತಿಲ್ಲ. ಅದನ್ನೂ ಮೀರಿ ಯಾರಾದರೂ ಪ್ರಯತ್ನಿಸಿದರೆ, ಅವರು ನಾಗದೇವನ ಶಾಪಕ್ಕೆ ಕಾರಣವಾಗ್ತಾರೆ,. ಅದರಿಂದಾಗಿಯೇ ಯಾರು ಕೂಡ ಇಂತಹ ಸಾಹಸಕ್ಕೆ ಯತ್ನಿಸಿಲ್ಲ.
ದೇವಾಲಯಕ್ಕೆ ಮಹಾಲಕ್ಷ್ಮಿಯ ಭಕ್ತರು ಏನೆ ಉಡುಗೊರೆಯನ್ನು ಅರ್ಪಿಸಿದ್ರು ಅದನ್ನು ನೇರವಾಗಿ ಅವರು ಖಜಾನೆಯಲ್ಲಿ ಇಡುವಂತಿಲ್ಲ, ಭಕ್ತರಿಂದ ಕಾಂಡೇಕರ್ ಕುಟುಂಬದವರು ಅದನ್ನು ಪಡೆದುಕೊಂಡು ಖಜಾನೆಯೊಳಗೆ ಇಡಬೇಕಾಗುತ್ತದೆ. ಆ ಕುಟುಂಬವರಿಗೆ ಮಾತ್ರವೇ ದೇವಾಲಯದ ಪ್ರತಿಯೊಂದು ಕಾರ್ಯಗಳು ಹಾಗೂ ಅಲ್ಲಿನ ಖಜಾನೆಯನ್ನು ರಕ್ಷಿಸುವ ಸಂಪೂರ್ಣ ಅಧಿಕಾರವಿದೆ. ಯಾಕಂದ್ರೆ ಮಹಾಮಾತೆಯ ಪ್ರತಿಕಾರ್ಯವನ್ನು ಮಾಡಲೆಂದೇ ಇರುವವರು ಕಾಂಡೇಕರ್ ಕುಟುಂಬದವರು. ಅವರು ಮಹಾಲಕ್ಷ್ಮಿಗೆ ಆತ್ಮೀಯರು ಎಂದು ನಂಬಲಾಗಿದೆ.
source and pic credit: epuja.co.in
ಶಕ್ತಿದೇವತೆಯ ದೇವಾಲಯ ದೇಶದಲ್ಲಿರೋ ಅಷ್ಟದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ, ಮಹಾಲಕ್ಷ್ಮಿಗೆ ನಡೆಯೋ ಆ ಪೂಜೆಯನ್ನು ನೋಡಲೆಂದೇ ದೇಶ ವಿದೇಶಗಳಿಂದ ಭಕ್ತಾದಿಗಳು ಬಂದು ಹೋಗ್ತಾರೆ. ಜಗತ್ಪ್ರಸಿದ್ಧಿ ಪಡೆದಿರೋ ಆ ಮಾತೆಯ ಶಕ್ತಿ ನಿಜಕ್ಕೂ ಅದ್ಭುತ. ಆ ದೇವಿಯ ಅಪಾರ ಶಕ್ತಿಯಿಂದಲೋ ಅಥವಾ ಸತ್ಯದಿಂದಲೋ ಏನೋ ಅಲ್ಲನ ದೇವಳಕ್ಕೆ ಯಾರಿಂದಲೂ ತೊಂದರಯುಂಟಾಗಿಲ್ಲ, ಹಾಗೆಯೇ ಅಲ್ಲಿನ ಶ್ರೀಮಂತಿಕೆಗೇನು ಕುಂದುಂಟಾಗಿಲ್ಲ.ಒಟ್ಟಿನಲ್ಲಿ ಕೊಲ್ಲಾಪುರ ಮಹಾಲಕ್ಷ್ಮೀಯ ದಿವ್ಯ ಸನ್ನಿಧಿ ಮಾತ್ರ ಅದೆಷ್ಟೋ ಕುತೂಹಲ ಸಂಗತಿಗಳಿಗೆ, ಊಹೆಗೂ ನಿಲುಕದ ಐಶ್ವರ್ಯಕ್ಕೆ ಪ್ರತೀಕವಾಗಿದ್ದಾಳೆ. ಅಂತಹ ಮಹಾತಾಯಿಯ ದಿವ್ಯ ಸನ್ನಿಧಿಗೆ ಬರುವ ಭಕ್ತರಿಗೆ ಮಾತ್ರ ಮಹಾಲಕ್ಷ್ಮೀಯ ಕೃಪೆ ಸಿಗೋದಾಂತೂ ಸತ್ಯ..
from ಸುದ್ದಿ - Planet Tv https://ift.tt/34lOgPZ
May 27, 2021 at 10:57AM