ವಿಘ್ನ ವಿನಾಶಕನ ಕತ್ತರಿಸಿದ ರುಂಡ ಎಲ್ಲಿದೆ ಗೊತ್ತಾ..?
Image credits: the statesman.com
ಗಣೇಶನನ್ನು ಮಹಾಕಾಯ, ವಿನಾಯಕ, ವಿಘ್ನೇಶ, ಏಕದಂತ, ವಕ್ರತುಂಡ, ಗಜಾನನ, ಮೂಷಿಕವಾಹನ ಹೀಗೆ ಗಣಪತಿ ನಾನಾ ಹೆಸರುಗಳಿಂದ ಕರೆಯುತ್ತಾರೆ. ಎಲ್ಲಾ ಕಾರ್ಯದಲ್ಲೂ ವಿಘ್ನ ವಿನಾಯಕ ಗಣಪನಿಗೆ ಪ್ರಪ್ರಥಮ ಪೂಜೆ ಸಲ್ಲುತ್ತದೆ. ಗಣೇಶನನ್ನು ಮೊದಲು ಪೂಜಿಸಿ ಯಾವುದೇ ಕೆಲಸವನ್ನು ಆರಂಭಿಸಿದರೂ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ ಅನ್ನೋ ನಂಬಿಕೆಯಿದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ.
Image credits: the statesman.com
ಗಣಪತಿ ಎಲ್ಲಾ ದೇವರಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವರು. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಹೀಗೆ ಜನಜೀವನದ ಎಲ್ಲಾ ಶುಭಕಾರ್ಯಗಳಲ್ಲೂ ಗಣೇಶನಿಗೆ ಮೊದಲ ಪ್ರಾಧ್ಯಾನತೆಯಿದೆ. ಯಾವ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೇ ಮೀಸಲಿಡಲಾಗುತ್ತದೆ. ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಮಾತಿದ್ದು, ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ.
ಗಣಪತಿ ಹುಟ್ಟಿದ ಕಥೆ
Image credits: google.com
ಶಿವ ಹಾಗೂ ಪಾರ್ವತಿಯ ಮಗ ಗಣಪತಿ ಹುಟ್ಟಿನ ಹಿಂದೆ ರೋಚಕ ಕತೆಯೂ ಇದೆ. ಒಂದು ಸಾರಿ ಪಾರ್ವತಿ ತನ್ನ ಮೈಯ ಬೆವರಿನಿಂದ ಮೂರ್ತಿಯೊಂದನ್ನು ನಿರ್ಮಿಸಿದಳು, ಅದಕ್ಕೆ ಜೀವ ಕೊಟ್ಟು, ತಾನು ಸ್ನಾನಕ್ಕೆ ಹೋಗುತ್ತೇನೆಂದು ಯಾರನ್ನೂ ಒಳಗೆ ಬಿಡಬೇಡವೆಂದು ಹೇಳಿ ಕಾವಲಿಗೆ ನಿಲ್ಲಿಸಿಟ್ಟು ಹೋದಳು. ಅದಾಗಿ ಸ್ಪಲ್ಪ ಹೊತ್ತಿಗೆ ಎಲ್ಲೋ ಹೋಗಿದ್ದ ಶಿವ ಮರಳಿ ಹೋಗುತ್ತಾನೆ. ಶಿವ ಯಾರೆಂದು ತಿಳಿಯದ ಕಾರಣ ಗಣಪತಿ ಒಳಗೆ ಹೋಗಲು ಅನುಮತಿ ಕೊಡದೆ ತಡೆಯುತ್ತಾನೆ. ಇದರಿಂದ ಸಿಟ್ಟುಗೊಂಡ ಪರಶಿವ ತ್ರಿಶೂಲದಿಂದ ಗಣೇಶನ ತಲೆಯನ್ನು ಧ್ವಂಸ ಮಾಡುತ್ತಾನೆ.
ಹೊರಗೆ ಬಂದ ಪಾರ್ವತಿ ಇದನ್ನು ತಿಳಿದು ಗೋಳಾಡಿದಾಗ ಆಕೆಯನ್ನು ಸಮಾಧಾನಪಡಿಸಲು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದ ಆನೆಯ ತಲೆಯನ್ನು ತರಿಸಿ ಜೋಡಿಸಿ ಜೀವ ನೀಡುತ್ತಾನೆ. ಪಾರ್ವತಿದೇವಿಗೆ ಇನ್ನಷ್ಟು ಸಂತೋಷವಾಗಲೆಂದು ಗಣಗಳ ಅಧಿಪತ್ಯವನ್ನು ನೀಡಿದ.
Image credits: google.com
ಬ್ರಹ್ಮವೈವರ್ತ ಪುರಾಣದಲ್ಲಿ, ಗಣಪತಿಯ ಬಗ್ಗೆ ಇನ್ನೊಂದು ಕತೆಯಿದೆ. ಶಿವನ ಸೂಚನೆಯಂತೆ ಪಾರ್ವತಿ ಒಂದು ವರ್ಷಗಳ ಕಾಲ ವಿಷ್ಣುವಿನ ಕುರಿತು ತಪಸ್ಸು ಮಾಡಿದಳು. ಪ್ರಸನ್ನನಾದ ವಿಷ್ಣು ಪ್ರತ್ಯಕ್ಷನಾಗಿ, ಮುಂದೆ ಪ್ರತಿ ಕಲ್ಪದಲ್ಲೂ ತಾನು ಆಕೆಗೆ ಮಗುವಾಗಿ ಜನಿಸುವುದಾಗಿ ವರ ನೀಡುತ್ತಾನೆ. ಹಾಗೇ ಜನಿಸಿದ ಮಗುವೇ ಗಣಪತಿ. ಎಲ್ಲಾ ದೇವತೆಯರೂ ಬಂದು ಗಣಪತಿಯನ್ನು ನೋಡಿ ಖುಷಿಪಡುತ್ತಾರೆ. ಆದರೆ, ತನ್ನ ದೃಷ್ಟಿ ಅಷ್ಟೊಂದು ಒಳ್ಳೆಯದಿಲ್ಲವೆಂದು ಹೇಳಿ ಶನಿ ಬರಲು ಹಿಂಜರಿಯುತ್ತಾನೆ. ಪಾರ್ವತಿ ಒತ್ತಾಯಿಸಿ ಶನಿದೇವನನ್ನು ಮಗುವನ್ನು ನೋಡುವಂತೆ ಮಾಡುತ್ತಾಳೆ. ಗತ್ಯಂತರವಿಲ್ಲದೆ ಶನಿ ಗಣಪನತ್ತ ನೋಡಿದಾಗ, ಆತನ ತಲೆ ಭಸ್ಮವಾಗಿ ಹೋಗುತ್ತದೆ. ಕೂಡಲೇ ಶಿವ- ವಿಷ್ಣು ಸೇರಿ ಗಂಧಮಾದನ ಪರ್ವತದಲ್ಲಿ ಉತ್ತರ ದಿಕ್ಕಿಗೆ ತಲೆಯಿಟ್ಟು ನಿದ್ರಿಸಿದ್ದ ಆನೆಯ ತಲೆಯನ್ನು ಕತ್ತರಿಸಿ ತಂದು ಜೋಡಿಸಿದರು ಎಂಬ ಕಥೆಯಿದೆ.
ಗಣೇಶನ ಕತ್ತರಿಸಿದ ರುಂಡ ಎಲ್ಲಿದೆ ಗೊತ್ತಾ..?
Image credits: patrika.com
ಪುರಾಣದಲ್ಲಿ ಕತ್ತರಿಸಲ್ಪಟ್ಟ ಗಣೇಶನ ತಲೆ ಏನಾಯಿತು..ಎಲ್ಲಿಗೆ ಹೋಯಿತು ಅನ್ನೋ ಕುತೂಹಲ ಎಲ್ಲರಿಗೂ ಇದೆ. ಆದರೆ ಶಿವನು ಶಿರಚ್ಛೇದ ಮಾಡಿದ ಗಣೇಶನ ನಿಜವಾದ ಆ ಕತ್ತರಿಸಲಪಟ್ಟ ತಲೆ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಶಿವನು ಸಿಟ್ಟಿನಿಂದ ಕತ್ತರಿಸಲ್ಪಟ್ಟ ಗಣೇಶನ ಈ ಶಿರ ಉತ್ತರಾಖಂಡದ ಪಿಥ್ರೋಗಢದಲ್ಲಿರುವ ಪಾತಾಳ ಭುವನೇಶ್ವರ ಗುಹೆಯಲ್ಲಿದೆ ಎಂದು ಹೇಳಲಾಗುತ್ತದೆ. ಉತ್ತರಾಖಂಡದ ಗಡಿಯಲ್ಲಿರುವ ಗಂಗೋಲಿಹಾಟ್ ನಲ್ಲಿರುವ ಈ ಗುಹೆ ಸುಮಾರು 160 ಕಿಮೀ ಉದ್ದ, 90 ಅಡಿ ಆಳವಿದೆ. ಇಲ್ಲಿ ಶಿವ ಕತ್ತರಿಸಿದ ಗಣೇಶನ ತಲೆ ಇದೆಯೆಂದು ಹೇಳಲಾಗುತ್ತದೆ. ಶಿವ ಕೋಪದಲ್ಲಿ ಕತ್ತರಿಸಿದ ಗಣೇಶನ ರುಂಡವನ್ನು ನೋಡಲು ಇಲ್ಲಿ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಲೇ ಇರುತ್ತಾರೆ. ಇಲ್ಲಿ ಶಿವನ ಜಟೆಯನ್ನು ಬಿಂಬಿಸುವಂತ ಕಲ್ಲುಗಳೂ ಇವೆ.
ಭೂವನೇಶ್ವರದಲ್ಲಿರುವ ಈ ಗುಹೆಯಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಅನ್ನೋದು ಭಕ್ತರ ನಂಬಿಕೆ. ಗುಹೆಗೆ ತೆರಳುವ ಮಾರ್ಗದುದ್ದಕ್ಕು ಸ್ಟಾರ್ ಗಾಟ್ಮಾ ಕಲ್ಲಿನಿಂದ ನಿರ್ಮಾಣ ಮಾಡಲಾಗಿರುವ ವಿವಿಧ ದೇವತೆಗಳ ಮೂರ್ತಿಗಳನ್ನು ನೋಡಬಹುದು. ಪಾಂಡವರು ಮಹಾಭಾರತದ ಯುದ್ಧದ ನಂತರ ಕೆಲವು ದಿನಗಳ ಕಾಲ ತಪಸ್ಸು ಮಾಡಿ ಅಲ್ಲಿರುವ ಗುಪ್ತ ಮಾರ್ಗದಿಂದ ಕೈಲಾಸಕ್ಕೆ ಹೋದರು ಎಂದು ಹೇಳಲಾಗುತ್ತದೆ.
Image credits: patrika.com
ಗುಹೆಯಲ್ಲಿ ಗಣೇಶನ ರುಂಡದ ಶಿಲಾಮೂರ್ತಿ ಇದೆ. ಗಣೇಶನ ರುಂಡದ ಮೂರ್ತಿಯ ಮೇಲೆ 108 ದಳದ ಬ್ರಹ್ಮ ಕಮಲವಿದೆ. ಈ ಬ್ರಹ್ಮಕಮಲದಿಂದ ಗಣೇಶನ ಶಿಲ್ಪಕಲೆಯ ತಲೆಯ ಮೇಲೆ ದೈವಿಕ ಹನಿ ಬೀಳುತ್ತದೆ. ಈ ಬ್ರಹ್ಮಕಮಲವನ್ನು ಶಿವನು ಇಲ್ಲಿ ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಇಲ್ಲಿನ ಗುಹೆಯಲ್ಲಿರುವ ಗಣೇಶನ ತಲೆಯನ್ನು ಶಿವನೇ ರಕ್ಷಿಸುತ್ತಿದ್ದಾನೆ ಎಂದು ನಂಬಲಾಗಿದೆ. ಈ ಗುಹೆಯು ಎಷ್ಟು ಸಣ್ಣದಾಗಿದೆಯೆಂದರೆ ಕೇವಲ ಒಬ್ಬ ಮನುಷ್ಯನಿಗಷ್ಟೇ ಹೋಗಬಹುದು. ಗುಹೆಯ ದ್ವಾರವು ಶಿವನ ಈ ಗುಹೆಯಲ್ಲಿ ವಿನಾಯಕನ ತಲೆ ಇದೆ ಎನ್ನಲಾಗುತ್ತದೆ. ಇಲ್ಲಿಂದ ಕೈಲಾಶಕ್ಕೆ ಹೋಗುವ ದಾರಿಯೂ ಇದೆ ಎಂದು ಹೇಳುತ್ತಾರೆ.
ಸುಣ್ಣದಿಂದ ನಿರ್ಮಿತವಾದಂತೆ ಕಾಣುವ ಗುಹೆಗಳು ಪ್ರಕೃತಿ ಸಹಜವಾಗಿಯೇ ಬೆಳೆದಿದೆ. ಈ ಗುಹೆಯೊಳಗೆ ಒಂದು ಶಿವಲಿಂಗವಿದೆ. ಇದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎನ್ನಲಾಗುತ್ತದೆ. ಒಂದು ವೇಳೆ ಈ ಶಿವಲಿಂಗವು ಇನ್ನಷ್ಟು ಬೆಳೆದು ಗುಹೆಯ ಹೊರಗೆ ಬಂದರೆ ಅಂದೇ ಕಲಿಯುಗದ ಅಂತ್ಯವಾಗಲಿದೆ ಎನ್ನಲಾಗುತ್ತದೆ.
from Planet Tv https://ift.tt/3c7C7lX
May 31, 2021 at 05:46PM