ಚಂದನವನದ ‘ಮಿಂಚಿನ ಓಟ’ ಆಟೋ ಶಂಕರ್ ಮೂಲ ಹೆಸರು ಏನು ಗೊತ್ತಾ..? ಇಲ್ಲಿದೆ ಅಚ್ಚರಿಗೊಳಿಸುವ ವಿಚಾರ
Image credits: https://ift.tt/38kI6Py
ಶಂಕರನಾಗ್ ಕನ್ನಡ ಚಿತ್ರರಂಗದ ಅತ್ಯದ್ಭುತ ನಟ. ಕನ್ನಡ ಚಿತ್ರಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಆಟೋ ಶಂಕರ್. ಚಂದನವನದಲ್ಲಿ 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ಜನಮೆಚ್ಚುವ ಹಲವು ಪಾತ್ರಗಳನ್ನು ಮಾಡಿ ನೂರಾರು ವರುಷ ನೆನಪಿಸಿಕೊಳ್ಳುವಂಥಹಾ ಚಿತ್ರಗಳನ್ನು ನೀಡಿದ್ದಾರೆ. ಅದ್ಭುತ ನಟ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಶಂಕರ್ ನಾಗ್ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ನಾಗ್ ಸಹೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು.
ಶಂಕರ ನಾಗರಕಟ್ಟೆಯಿಂದ ಶಂಕರ್ ನಾಗ್ ವರೆಗೆ
Image credit: google.com
ಶಂಕರ್ ನಾಗ್ ಅವರ ಮೂಲ ಹೆಸರು, ಶಂಕರ ನಾಗರಕಟ್ಟೆ. 1954ರಲ್ಲಿ ಹೊನ್ನಾವರ ಹತ್ತಿರದ ಮಲ್ಲಾಪುರದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಾತೃಭಾಷೆ ಕೊಂಕಣಿಯಾಗಿತ್ತು. ಆದರೆ ಮನೆಯಲ್ಲಿ ಎಲ್ಲರೂ ಕನ್ನಡ ಮತ್ತು ಮರಾಠಿ ಭಾಷೆಯನ್ನು ಮಾತನಾಡುತ್ತಿದ್ದರು. ಶಿರಾಲಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಶಂಕರ ಅಣ್ಣ ಅನಂತನಾಗ್ ಓದುತ್ತಿದ್ದ ಮುಂಬೈನ ಶಾಲೆಗೆ ಸೇರಿದರು. ಅನಂತನಾಗ್ರು ನಾಟಕರಂಗದಲ್ಲಿ ಸಕ್ರಿಯವಾಗಿದ್ದರಿಂದ ಶಂಕರ ಕೂಡ ಮರಾಠಿ ನಾಟಕರಂಗದತ್ತ ಹೆಚ್ಚು ಆಕರ್ಷಿತರಾದರು. ಇಲ್ಲಿಯೇ ಒಂದು ನಾಟಕ ರಿಹರ್ಸಲ್ನಲ್ಲಿ ತಮ್ಮ ಭಾವೀ ಪತ್ನಿ ಅರುಂಧತಿನಾಗ್ ರನ್ನು ಭೇಟಿಯಾದರು. ಬ್ಯಾಂಕ್ನಲ್ಲಿ ಕ್ಲರ್ಕ್ ಉದ್ಯೋಗ ಮಾಡುತ್ತಲೇ ನಾಟಕರಂಗದಲ್ಲಿ ಸಕ್ರಿಯವಾಗಿದ್ದರು. ನಂತರ ಶಂಕರ್ ಚಿತ್ರಗಳಲ್ಲಿ ನಟಿಸಲು ತೊಡಗಿದರು.
ಚಂದನವನದಲ್ಲಿ ಮಿಂಚಿದ ಶಂಕರ್ ನಾಗ್
Image credit: https://scroll.in/ree
ಶಂಕರ್ ನಾಗ್ ಮೊತ್ತ ಮೊದಲ ಬಾರಿಗೆ 1978ರಲ್ಲಿ ತೆರೆಕಂಡ ಸರ್ವಕಾಶಿ ಎಂಬ ಮರಾಠಿ ಚಿತ್ರದಲ್ಲಿ ಅಭಿನಯಿಸಿದರು. ಅದೇ ಸಮಯದಲ್ಲಿ ಅವರು ಬೆಂಗಳೂರಿಗೆ ಸ್ಥಳಾಂತರವಾದರು. ಕನ್ನಡದಲ್ಲಿ ಮೊತ್ತ ಮೊದಲಾಗಿ ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡರು.1978ರಿಂದ ಮುಂದಿನ ಹನ್ನೆರೆಡು ವರ್ಷದಲ್ಲಿ 90 ಚಿತ್ರಗಳಲ್ಲಿ ನಟಿಸಿದ ಶಂಕರ್ ಕೆಲವು ಚಿತ್ರಗಳನ್ನು ಅಣ್ಣ ಅನಂತರ ಜೊತೆ ಸೇರಿ ನಿರ್ಮಿಸಿದ್ದಾರೆ.
ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಅದ್ಭುತ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದ ಶಂಕರ್ ಹಲವಾರು ನಿರ್ಮಾಪಕರ ಹಾಟ್ ಫೇವರೇಟ್ ನಟನಾಗಿದ್ದರು. ಶಂಕರ್ ನಾಗ್ ಯಾವ ಪಾತ್ರವನ್ನು ಕೊಟ್ಟರೂ ಸಲೀಸಾಗಿ ಅಭಿನಯಿಸುತ್ತಿದ್ದರು. ಅದ್ಭುತ ನಟನೆಯಿಂದಲೇ ಶಂಕರ್ ನಾಗ್ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಗಳಿಸಿದ್ದರು.
Image credit: filimibeat
ಶಂಕರ್ ನಾಗ್ ನಿಜ ಜೀವನದಲ್ಲಿ ಕರಾಟೆ ಕಲಿಯದಿದ್ದರೂ ಚಿತ್ರವೊಂದರ ಸಾಹಸ ದೃಶ್ಯಗಳಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿದರಿಂದ ಇವರಿಗೆ `ಕರಾಟೆ ಕಿಂಗ್' ಎಂಬ ಬಿರುದು ಬಂತು. ಆ ಕಾಲದ ಪ್ರಮುಖ ನಟರಾಗಿದ್ದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಜೊತೆ ತೆರೆಹಂಚಿಕೊಂಡ ಕೀರ್ತಿ ಇವರಿಗೆ ಸಲ್ಲಬೇಕು. ನಿಗೂಢ ರಹಸ್ಯ ಶಂಕರ್ನಾಗ್ ಅಭಿನಯದ ಕೊನೆಯ ಚಿತ್ರ
ನಿರ್ದೇಶಕ ಶಂಕರ್ ನಾಗ್
ಮೊತ್ತ ಮೊದಲಾಗಿ ಶಂಕರ್ ನಾಗ್,ಅಣ್ಣನ ಜತೆ ಅಭಿನಯಿಸಿದ ಮಿಂಚಿನ ಓಟ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮಾತ್ರವಲ್ಲದೆ, ಹಲವಾರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತು. ಆ ನಂತರ ಶಂಕರ್ ನಾಗ್, ಜನುಮ ಜನುಮದ ಅನುಬಂಧ, ಗೀತಾ ಚಿತ್ರಗಳನ್ನು ನಿರ್ದೇಶಿಸಿದರು. ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಗೆದ್ದ ಮಗ. ಆ ಬಳಿಕ ಹೊಸ ತೀರ್ಪು, ನೋಡಿ ಸ್ವಾಮಿ ನಾವಿರೋದೆ ಹೀಗೆ ನಿರ್ದೇಶಿಸಿದ ಶಂಕರ್ ನಂತರ ಆಕ್ಸಿಡೆಂಟ್ ಚಿತ್ರ ನಿರ್ದೇಶಿಸಿದರು. ಈ ಚಿತ್ರಕ್ಕೆ 1984ರಲ್ಲಿ ರಾಷ್ಟ್ರಪ್ರಶಸ್ತಿಯೂ ಲಭಿಸಿತು. ಇವಿಷ್ಟೇ ಅಲ್ಲದೆ, ಹಿಂದಿಯಲ್ಲಿ ವಿನೋದ್ ಮೆಹ್ರಾ ಅಭಿನಯದ ಲಾಲಚ್ ಚಿತ್ರವನ್ನು ನಿರ್ದೇಶಿಸಿದರು.
Image credits: https://ift.tt/3fX8RQ1
ಶಂಕರ್ ನಾಗ್ ನಿರ್ದೇಶನದ ಪ್ರಯೋಗಶೀಲತೆಯನ್ನು ಸಾರಿ ಹೇಳಿದ ಚಿತ್ರ, ಒಂದು ಮುತ್ತಿನ ಕಥೆ. ಡಾ.ರಾಜ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಸಮುದ್ರದ ಆಳದಲ್ಲಿ ಚಿತ್ರೀಕರಿಸಬೇಕಿತ್ತು. ಆಗ ಭಾರತದಲ್ಲಿ ನೀರಿನಾಳದಲ್ಲಿನ ದೃಶ್ಯ ಸೆರೆಹಿಡಿವ ಕ್ಯಾಮೆರಾ ಇರದಿದ್ದರಿಂದ ಕೆನೆಡಾಗೆ ಹೋಗಿ ಕ್ಯಾಮೆರಾ ತಂದರು. ನಂತರ ಲಂಡನ್ಗೆ ಹೋಗಿ ಚಿತ್ರದಲ್ಲಿನ ಆಕ್ಟೋಪಸ್ ಆಕೃತಿಯನ್ನು ತಂದರು. ಚಿತ್ರದಲ್ಲಿ ರಾಜ್ ಆಕ್ಸಿಜನ್ ಮಾಸ್ಕ್ ಇಲ್ಲದೇ ಆಕ್ಟೋಪಸ್ ಜೊತೆ ಹೋರಾಡುವ ಸನ್ನಿವೇಶವನ್ನು ಸೆರೆಹಿಡಿದಿದ್ದು ಮಾಲ್ಡೀವ್ಸ್ ನ ಸಮುದ್ರ ತೀರದಲ್ಲಾಗಿತ್ತು.
Image credit: https://ift.tt/3bQA7ye
ಮಾಲ್ಗುಡಿ ಡೇಸ್
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು ಮತ್ತು ಸ್ವಾಮಿ ಧಾರಾವಾಹಿಯನ್ನು ಶಂಕರ್ ನಾಗ್ ನಿರ್ದೇಶಿಸಿದ್ದಾರೆ.90ರ ದಶಕದಲ್ಲಿ ದೂರದರ್ಶನವೇ ಕಿರುತೆರೆ ಧಾರಾವಾಹಿಗಳನ್ನು ನಿರ್ಮಿಸಲು ನಿರ್ಮಾಪಕರನ್ನು ಆಹ್ವಾನ ಮಾಡುತ್ತಿತ್ತು. ಈ ಆಹ್ವಾನವನ್ನು ಒಪ್ಪಿಕೊಂಡ ಶಂಕರ ನಾಗ್ ಆರ್.ಕೆ.ನಾರಾಯಣ್'ರ ಮಾಲ್ಗುಡಿ ಡೇಸ್ ಪುಸ್ತಕವನ್ನು ಕಿರುತೆರೆ ಧಾರಾವಾಹಿ ಮಾಡಲು ನಿರ್ಧರಿಸಿದರು. ಹಿಂದಿ ಭಾಷೆಯಲ್ಲಿ ಸುಮಾರು 39 ಎಪಿಸೋಡ್ಗಳಲ್ಲಿ 1987 ರಲ್ಲಿ ಪ್ರಸಾರವಾದ ಈ ಸೀರಿಯಲ್ ರಾಷ್ಟ್ರವ್ಯಾಪ್ತಿ ಮನ್ನಣೆ ಪಡೆಯಿತು.
Image credit: swarajya
ಪ್ರಶಸ್ತಿಗಳು
ಅದ್ಭುತ ಅಭಿನಯದ ಆಟೋ ಶಂಕರ್ ಗೆ ಹಲವಾರು ಪ್ರಶಸ್ತಿಗಳು ಸಹ ಲಭಿಸಿವೆ. ಮಿಂಚಿನ ಓಟ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಗಳಿಗೆ ಕ್ರಮವಾಗಿ ದ್ವಿತೀಯ ಅತ್ಯುತ್ತಮ ಚಿತ್ರ (1979-80ರಲ್ಲಿ) ಹಾಗೂ ತೃತೀಯ ಅತ್ಯುತ್ತಮ ಚಿತ್ರ (1983-84ರಲ್ಲಿ) ಪ್ರಶಸ್ತಿಗಳನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು. ಆಕ್ಸಿಡೆಂಟ್ ಚಿತ್ರಕ್ಕೆ 1984-85ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರ ಪುರಸ್ಕರಿಸಿತ್ತು.
ಸೆಪ್ಟೆಂಬರ್ 30, 1990 ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್ನಾಗ್ ಅವರು ಕಾರು ಅಪಘಾತದಿಂದ ಕೊನೆಯುಸಿರೆಳೆದರು
from Planet Tv https://ift.tt/3p62luo
May 31, 2021 at 07:29PM