ಪೂಜೆಯ ಸಂದರ್ಭ ಅಗರಬತ್ತಿಯನ್ನು ಹಚ್ಚಿಡುವುದು ಯಾಕೆ..? ಇದರ ಹಿಂದಿರುವ ಕಾರಣವೇನು..?
Featured Image Credits : Pinterest
ಭಾರತದ ಅತ್ಯಂತ ಪ್ರಾಚೀನ ಹಾಗೂ ಪುರಾತನ ಧರ್ಮ ಹಿಂದೂ ಧರ್ಮ. ಹೀಗಾಗಿಯೇ ಹಳೇಕಾಲದ ಹಲವು ಆಚಾರ-ವಿಚಾರಗಳು, ಪದ್ಧತಿಗಳು, ಆಚರಣೆಗಳು ಇಂದಿಗೂ ಹಿಂದೂ ಧರ್ಮದಲ್ಲಿ ಅಳವಡಿಕೆಯಾಗಿದೆ. ಹಿಂದೂ ಧರ್ಮದಲ್ಲಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಜತೆಗೆ ಹಿಂದೂ ಧರ್ಮದಲ್ಲಿ ಸ್ವಲ್ಪ ಆರ್ಯರ ಪ್ರಭಾವವು ಇರುವ ಕಾರಣ ಮರ ಹಾಗೂ ಇತರ ಕೆಲವೊಂದು ವಸ್ತುಗಳನ್ನು ಕೂಡ ಪವಿತ್ರವೆಂದು ನಂಬಿ ಅದನ್ನು ಪೂಜಿಸಲಾಗುತ್ತದೆ. ಅಗ್ನಿ, ಸೂರ್ಯ, ನದಿಗಳು, ತುಳಸಿ ಗಿಡ, ಮಣ್ಣು, ಅಶ್ವತ್ಥ ಮರ ಹೀಗೆ ಹಲವಾರು ವಸ್ತುಗಳು ಹಿಂದೂಗಳಿಗೆ ತುಂಬಾ ಪವಿತ್ರವೆನಿಸಿದೆ.
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ. ಅದರ ಜತೆಗೇ ಪೂಜೆಯಲ್ಲಿ ಬಳಸುವ ಕೆಲವೊಂದು ವಸ್ತುಗಳಿಗೆ ಹೆಚ್ಚು ಮಹತ್ವವಿದೆ. ತುಳಸಿ, ಅಡಕೆ, ಬಾಳೇಗಿಡ, ಗರಿಕೆ, ಮಾವಿನ ಎಲೆ, ಅರಿಶಿನ, ಕುಂಕುಮ, ಅಗರಬತ್ತಿ, ಮೊದಲಾದವುಗಳಿಗೆ ಪೂಜೆಯಲ್ಲಿ ಪ್ರಥಮ ಸ್ಥಾನ ನೀಡಲಾಗುತ್ತದೆ. ಇಲ್ಲಿ ಆಯಾ ವಸ್ತು ಬಳಸುವುದಕ್ಕೂ ಅದರದ್ದೇ ಆದ ಪ್ರಾಮುಖ್ಯತೆಯೂ ಇದೆ. ಹಲವು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣಗಳಿಂದ ಕೆಲವೊಂದು ವಸ್ತುಗಳನ್ನು ಪೂಜೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಒಂದು ವೇಳೆ ಶಾಸೋಕ್ತವಾಗಿ ಪೂಜೆ ಮಾಡಲು ಸಾಧ್ಯವಾಗದೆ ಇದ್ದರೆ ಬೆಳಗ್ಗೆ, ಸಂಜೆ ದೇವರ ಫೋಟೋಕ್ಕೆ ಕೈ ಮುಗಿಯುವಾಗಲಾದರೂ ಅಗರಬತ್ತಿಯನ್ನು ಹಚ್ಚುತ್ತಾರೆ. ಷೋಡಶೋಪಚಾರ ಪೂಜೆ ಎಂದು ಕರೆಯಲಾಗುವ 16 ವಿಧದ ಪೂಜೆಯಲ್ಲಿ ಧೂಪದಾರತಿಯೂ ಒಂದು. ಅಗರಬತ್ತಿ ಬೀರುವ ಹೊಗೆಯ ಮೂಲಕ ನಮ್ಮ ಪ್ರಾರ್ಥನೆ ದೇವರನ್ನು ತಲುಪುತ್ತದೆ ಎಂಬ ನಂಬಿಕೆಯಿದೆ. ಅದರ ಪರಿಮಳವು ದೇವರನ್ನು ನಾವಿರುವ ಜಾಗಕ್ಕೆ ಸೆಳೆಯುತ್ತದೆ ಎಂದು ಕೂಡಾ ಹೇಳುತ್ತಾರೆ.
ಪೂಜೆ ಪುನಸ್ಕಾರಗಳ ಸಮಯದಲ್ಲಿ ದೇವರಿಗೆ ಅಲಂಕಾರ ಮಾಡುವುದರ ಜೊತೆಗೆ ಧೂಪ, ದೀಪ, ಆರತಿ ಅಂತೆಯೇ ಅಗರಬತ್ತಿಯನ್ನು ಹಚ್ಚಿ ದೇವರಿಗೆ ಇಡಲಾಗುತ್ತದೆ. ನೀವು ನೋಡಿರಬಹುದು, ಯಾವುದೇ ಪೂಜೆ ಇರಲಿ, ಅಲ್ಲಿ ಮೊದಲಿಗೆ ದೇವರಿಗೆ ಅಲಂಕಾರ ಮಾಡಿ, ದೀಪ ಹಚ್ಚಿ, ಜತೆಗೆ ಅಗರಬತ್ತಿಯನ್ನೂ ಹಚ್ಚಿಡುತ್ತಾರೆ. ಆದರೆ ಪೂಜೆಯ ಸಂದರ್ಭ ಅಗರಬತ್ತಿಯನ್ನು ಯಾಕೆ ಹೀಗೆ ಹಚ್ಚಿಡುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಆ ಬಗ್ಗೆ ತಿಳಿಯೋಣ.
ಇದನ್ನು ಓದಿ : ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು..?
ಅಗರಬತ್ತಿ ಹಚ್ಚಿಡುವುದುರ ಹಿಂದಿನ ಆಧ್ಯಾತ್ಮಿಕ ಕಾರಣ
Image Credits : kohinoorfoods.co.uk
ಊದುಬತ್ತಿ ಅಥವಾ ಅಗರಬತ್ತಿಯನ್ನು ದೇವರ ಮುಂದೆ ಉರಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣವಿದೆ. ಗಾಳಿಯಲ್ಲಿ ಪ್ರಸಾರವಾಗುವ ಊದುಬತ್ತಿಯ ಪರಿಮಳವು ದೇವರನ್ನು ಹೋಗಿ ಸೇರುತ್ತದೆ ಎಂಬ ನಂಬಿಕೆಯಿದೆ. ಜತೆಗೆ ಪವಿತ್ರವಾಗಿ ತಯಾರಿಸಿದ ಅಗರಬತ್ತಿಯ ಸುವಾಸನೆಯ ನಂಬ ಆಲೋಚನೆಗಳನ್ನು ಪರಿಶುದ್ಧ ಮಾಡುತ್ತದೆ, ಕೆಟ್ಟ ಆಲೋಚನೆಗಳನ್ನು ಮಾಡದಂತೆ ತಡೆಯುತ್ತದೆ ಎಂದು ಹೇಳುತ್ತಾರೆ. ಒಳ್ಳೆಯ ಗುಣಮಟ್ಟದ ಅಗರಬತ್ತಿಯ ಹೊಗೆ ನಮ್ಮ ಮನಸ್ಸಿಗೂ, ಆರೋಗ್ಯಕ್ಕೂ, ಪೂಜಾಸ್ಥಳದಲ್ಲಿರುವ ಕ್ರಿಮಿ-ಕೀಟಗಳನ್ನು ದೂರ ಓಡಿಸುವುದಕ್ಕೂ ಒಳ್ಳೆಯದು. ಧ್ಯಾನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ, ನಾವು ಕುಳಿತುಕೊಳ್ಳುವ ಸ್ಥಳದಲ್ಲಿ ಪೂಜೆಯ ವಾತಾವರಣವನ್ನು ನಿರ್ಮಿಸುವ ಹಾಗೂ ಮನಸ್ಸನ್ನು ಏಕಾಗ್ರತೆಗೊಳಿಸುವ ಶಕ್ತಿ ಅಗರಬತ್ತಿಯ ಪರಿಮಳಕ್ಕಿದೆ ಎನ್ನುತ್ತಾರೆ.
ಅಲ್ಲದೆ, ಅಗರಬತ್ತಿ, ಗಾಳಿಯೊಂದಿಗೆ ಸುವಾಸಿತ ಪರಿಮಳವನ್ನು ಬೆರೆಸಿ ತನ್ನನ್ನು ತಾನು ಸಂಪೂರ್ಣವಾಗಿ ಉರಿಸಿಕೊಳ್ಳುತ್ತದೆ, ಕೊನೆಯಲ್ಲಿ ಬೂದಿ ಮಾತ್ರ ಉಳಿಯುತ್ತದೆ. ಈ ಮೂಲಕ ಅಗರಬತ್ತಿ ಮಾನವನ ಜೀವನಕ್ಕೆ ಮುಖ್ಯವಾದ ಸಂದೇಶವನ್ನೂ ಸಾರುತ್ತದೆ. ಇನ್ನೊಬ್ಬರ ಖುಷಿಗಾಗಿ, ತನ್ನಲ್ಲಿರುವ ದುರಾಸೆಯನ್ನು ತ್ಯಜಿಸಿ ಫಲಾಫಲಗಳನ್ನು ಅಪೇಕ್ಷಿಸದೇ ಬಾಳುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಮಾನವತ್ವದ ಮಹತ್ವವನ್ನು ಸಾರುತ್ತದೆ. ಆದ್ದರಿಂದಾಗಿಯೇ ಪೂಜೆ ಮತ್ತು ಇತರ ದೈವತಾ ಕಾರ್ಯಗಳಲ್ಲಿ ಅಗರಬತ್ತಿಯನ್ನು ಉರಿಸಲಾಗುತ್ತದೆ.
ಇದನ್ನು ಓದಿ : ಭಾರತದಲ್ಲಿರುವ ಪ್ರಸಿದ್ಧ 12 ಶ್ರೀರಾಮನ ದೇವಾಲಯಗಳು
ಅಗರಬತ್ತಿ ಹಚ್ಚಿಡುವುದುರ ಹಿಂದಿನ ವೈಜ್ಞಾನಿಕ ಕಾರಣ
Image Credits : The Sentinal Assam
ಊದುಬತ್ತಿಯ ಸುವಾಸನೆಯು ವಾತಾವರಣದಲ್ಲಿನ ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ. ಇದರಿಂದ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಬಳಸಿಕೊಂಡು ದೇವರನ್ನು ಪ್ರಾರ್ಥಿಸಲು ಇದು ಸಹಕಾರಿಯಾಗಿದೆ. ಮನಸ್ಸಿನೊಳಗಿರುವ ಒತ್ತಡ ಮತ್ತು ಖಿನ್ನತೆಯನ್ನು ದೂರಮಾಡುವ ಮಾಧ್ಯಮ ಕ್ರಿಯೆಯಾಗಿ ಇದು ಕೆಲಸ ಮಾಡುತ್ತದೆ. ಮಾನಸಿಕವಾಗಿ ಶಾಂತಿ, ನೆಮ್ಮದಿ ಲಭಿಸಿ ಮನಸ್ಸು ತನ್ಮಯವಾಗಿ ಪೂಜೆಯಲ್ಲಿ ತೊಡಗಿಕೊಳ್ಳುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸಂಬಂಧವನ್ನು ಪಡೆದುಕೊಂಡಿರುವ ಅಗರಬತ್ತಿಯು ನೈಸರ್ಗಿಕ ಕ್ರಿಮಿ ನಾಶಕವಾಗಿ ಕೂಡಾ ಕೆಲಸ ಮಾಡುತ್ತದೆ. ಹಲವಾರು ಕಾಯಿಲೆಗಳಿಗೆ ಔಷಧವಾಗಿ ಊದುಬತ್ತಿಯನ್ನು ಬಳಸಲಾಗುತ್ತದೆ.
ವಾಸ್ತುದೋಷದಿಂದ ತೊಂದರೆಗೀಡಾಗಿದ್ದರೆ, ವಾರದಲ್ಲಿ ಒಂದು ಅಥವಾ ಎರಡು ಬಾರಿ ಮನೆಯಲ್ಲಿ ಬೇವಿನ ಎಲೆಗಳಿಂದ ಧೂಪವನ್ನು ಸುಟ್ಟುಹಾಕಿ ಎನ್ನುತ್ತಾರೆ. ಹಾಗೆಯೇ ಅಗರಬತ್ತಿ ಹಚ್ಚಿಡುವುದರಿಂದ ಮನೆಯಲ್ಲಿರುವ ದುಷ್ಟಶಕ್ತಿ ನಿವಾರಣೆಯಾಗುತ್ತದೆ ಎನ್ನುತ್ತಾರೆ. ಪ್ರತಿ ಶನಿವಾರ ಸಂಜೆ ಧೂಪದ್ರವ್ಯ ಮತ್ತು ಲಘು ಧೂಪ ಮತ್ತು ದೀಪಗಳನ್ನು ಬೆಳಗಿ, ದೇವರನ್ನು ಪೂಜಿಸಿ. ಈ ಪರಿಹಾರದಿಂದ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮಾರ್ಗಗಳನ್ನು ತೆರೆಯಲಾಗುತ್ತದೆ ಮತ್ತು ಶನಿದೋಷ ಕೂಡ ನಾಶವಾಗುತ್ತದೆ ಎಂದು ಆಧ್ಯಾತ್ಮಿಕ ಗುರುಗಳು ಹೇಳುತ್ತಾರೆ.
ಆಧುನಿಕ ವೈದ್ಯ ಪದ್ಧತಿಯಲ್ಲಿ ಅರೋಮಾಥೆರಪಿ ಎಂಬೊಂದು ವಿಧಾನವಿದೆ. ಒಳ್ಳೆಯ ಪರಿಮಳದ ಮೂಲಕ ಕೆಲ ಅನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ನೀಡುವ ಪದ್ಧತಿಯದು. ಅಲ್ಲಿ ಗಂಧದಕಡ್ಡಿ ಹಾಗೂ ಧೂಪವನ್ನೂ ಬಳಸಲಾಗುತ್ತದೆ. ಪೂಜೆಯ ಸಂದರ್ಭದಲ್ಲಿ ಅಗರಬತ್ತಿಯನ್ನು ಹಚ್ಚಿಡುವ ಸಂಪ್ರದಾಯ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಇತರ ಹಲವು ರಾಷ್ಟ್ರಗಳಲ್ಲಿದೆ. ಹಿಂದೂ ಧರ್ಮದ ಆಚರಣೆಗಳ ಒಂದು ಭಾಗವಾಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಹಲವು ಧರ್ಮಗಳ ಪೂಜೆಗಳಲ್ಲಿಯೂ ಅಗರಬತ್ತಿಯನ್ನು ಹಚ್ಚಿಡುವ ಪದ್ಧತಿಯಿದೆ. ಈಜಿಪ್ಟ್, ಚೀನಾ, ಟಿಬೇಟಿಯನ್ ಸಂಸ್ಕೃತಿಗಳಲ್ಲಿ ಹಲವಾರು ಶತಮಾನಗಳಿಂದ ಇದನ್ನು ಬಳಸಿಕೊಳ್ಳಲಾಗುತ್ತಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3cQqBvH
June 17, 2021 at 05:37PM