ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್’ವುಡ್ ಕಲಾವಿದರು
ಸಾವು ಯಾರಿಗೆ ಯಾವಾಗ, ಹೇಗೆ ಬರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಯಾರೇ ಆದರೂ ಒಂದಲ್ಲ ಒಂದು ದಿನ ಸಾವಿಗೆ ಸೋಲಲೇಬೇಕು. ಇನ್ನೂ ಬಾಳಿ ಬದುಕಬೇಕಾದ ಕನ್ನಡ ಚಿತ್ರರಂಗದ ಹಲವು ದೊಡ್ಡ ನಟ ನಟಿಯರು ಅಕಾಲಿಕ ಮರಣ ಹೊಂದಿದ್ದಾರೆ. ಉದಯೋನ್ಮುಖ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಸಾವು ಕನ್ನಡ ಚಿತ್ರರಂಗವನ್ನೇ ದಂಗುಪಡಿಸಿದೆ. ಅದ್ಭುತ ನಟನೆ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ವಿಜಯ್ ಕೇವಲ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟನೆ ಹಾಗೂ ಸಮಾಜಮುಖಿ ಕೆಲಸ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ಅವರ ಅಕಾಲಿಕ ವಿದಾಯ ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿದೆ. ಹೀಗೆ ಅಪಘಾತದಲ್ಲಿ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಮೃತಪಟ್ಟಿದ್ದಾರೆ.
ಕನ್ನಡ ಚಿತ್ರರಂಗದ ದುರಂತ ಸಾವುಗಳು
ಚಂದನವನದಲ್ಲಿ ಅದ್ಭುತ ಅಭಿನಯದಿಂದಲೇ ಜನಮನಸೂರೆಗೊಳಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿದ ಅದೆಷ್ಟೋ ನಟ-ನಟಿಯರಿದ್ದಾರೆ. ಇಂಥವರಲ್ಲಿ ಅಪಘಾತದಲ್ಲಿ, ಆಕಸ್ಮಿಕವಾಗಿ ಮರಣ ಹೊಂದಿದವರೂ ಹಲವರಿದ್ದಾರೆ. ಆದರೆ, ಕನ್ನಡ ಚಿತ್ರರಂಗಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಮಂದಿಯನ್ನು ಇಲ್ಲಿನ ಮಂದಿ ಯಾವತ್ತೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಹಾಗೇ ಮಿಂಚಿ ಮರೆಯಾದ ನಟರು ಹಲವರು.
ಶಂಕರ್ ನಾಗ್
ಶಂಕರನಾಗ್ ಕನ್ನಡ ಚಿತ್ರರಂಗದ ಅತ್ಯದ್ಭುತ ನಟ. ಕನ್ನಡ ಚಿತ್ರಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಆಟೋ ಶಂಕರ್. ಚಂದನವನದಲ್ಲಿ 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ಜನಮೆಚ್ಚುವ ಹಲವು ಪಾತ್ರಗಳನ್ನು ಮಾಡಿ ನೂರಾರು ವರುಷ ನೆನಪಿಸಿಕೊಳ್ಳುವಂಥಹಾ ಚಿತ್ರಗಳನ್ನು ನೀಡಿದ್ದಾರೆ. ಅದ್ಭುತ ನಟ. ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಶಂಕರ್ ನಾಗ್ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. 80ರ ದಶಕದಲ್ಲಿ ಮಿಂಚಿನ ಓಟ ಆರಂಭಿಸಿದ ನಾಗ್ ಸಹೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು.
ಕರಾಟೆ ಕಿಂಗ್ ಶಂಕರ್ ನಾಗ್ ಅವರು ಸೆಪ್ಟೆಂಬರ್ 30, 1990ರಂದು ತಮ್ಮ 36ನೇ ವಯಸ್ಸಿನಲ್ಲಿ ನಿಧನರಾದರು. ದಾವಣಗೆರೆಯ ಆನಗೋಡು ಹಳ್ಳಿಯಲ್ಲಿ ಕಾರು ಅಪಘಾತದಿಂದ ಕೊನೆಯುಸಿರೆಳೆದರು. 'ಜೋಕುರಸ್ವಾಮಿ' ಚಿತ್ರದ ಚಿತ್ರೀಕರಣಕ್ಕೆ ಧಾರವಾಡದಿಂದ ಬರುತ್ತಿದ್ದ ವೇಳೆ ಶಂಕರ್ ನಾಗ್ ದುರ್ಮರಣಕ್ಕೀಡಾಗಿದ್ದರು.ಅವರ ಸಾವಿನ ಸುದ್ದಿ ಇಡೀ ಕನ್ನಡ ಚಿತ್ರರಂಗವನ್ನು ದಂಗುಬಡಿಸಿತ್ತು. 1990ರಂದು ಸೆ.30ರಂದು ಶಂಕರ್ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಅದ್ಭುತ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದ ಶಂಕರ್ ನಾಗ್ ಯಾವ ಪಾತ್ರವನ್ನು ಕೊಟ್ಟರೂ ಸಲೀಸಾಗಿ ಅಭಿನಯಿಸುತ್ತಿದ್ದರು. ಮೊತ್ತ ಮೊದಲ ಬಾರಿಗೆ 1978ರಲ್ಲಿ ತೆರೆಕಂಡ ಕನ್ನಡದಲ್ಲಿ ಮೊತ್ತ ಮೊದಲಾಗಿ ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡರು. 1978ರಿಂದ ಮುಂದಿನ ಹನ್ನೆರೆಡು ವರ್ಷದಲ್ಲಿ 90 ಚಿತ್ರಗಳಲ್ಲಿ ನಟಿಸಿದ ಶಂಕರ್ ಕೆಲವು ಚಿತ್ರಗಳನ್ನು ಅಣ್ಣ ಅನಂತರ ಜೊತೆ ಸೇರಿ ನಿರ್ಮಿಸಿದ್ದಾರೆ. ಶಂಕರ್ ನಾಗ್ ನಿಜ ಜೀವನದಲ್ಲಿ ಕರಾಟೆ ಕಲಿಯದಿದ್ದರೂ ಚಿತ್ರವೊಂದರ ಸಾಹಸ ದೃಶ್ಯಗಳಲ್ಲಿ ಕರಾಟೆ ಪಟ್ಟುಗಳನ್ನು ಪ್ರದರ್ಶಿಸಿದರಿಂದ ಇವರಿಗೆ `ಕರಾಟೆ ಕಿಂಗ್' ಎಂಬ ಬಿರುದು ಬಂತು.
ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ಗೆದ್ದ ಮಗ. ಆ ಬಳಿಕ ಹೊಸ ತೀರ್ಪು, ನೋಡಿ ಸ್ವಾಮಿ ನಾವಿರೋದೆ ಹೀಗೆ ನಿರ್ದೇಶಿಸಿದ ಶಂಕರ್ ನಂತರ ಆಕ್ಸಿಡೆಂಟ್ ಚಿತ್ರ ನಿರ್ದೇಶಿಸಿದರು. ಈ ಚಿತ್ರಕ್ಕೆ 1984ರಲ್ಲಿ ರಾಷ್ಟ್ರಪ್ರಶಸ್ತಿಯೂ ಲಭಿಸಿತು.. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ನ್ನು ಶಂಕರ್ ನಾಗ್ ನಿರ್ದೇಶಿಸಿದ್ದಾರೆ.
ಸುನಿಲ್
ಕನ್ನಡದ ಯುವ ನಟ ಸುನಿಲ್ ರಸ್ತೆ ಅಪಘಾತದಲ್ಲಿ ನಿಧನರಾದರು. ಕಾಲೇಜು ದಿನಗಳಲ್ಲಿಯೇ ಹೇಗಾದರೂ ಸರಿ ನಟನಾಗಬೇಕು ಅನ್ನೋ ಕನಸು ಹೊತ್ತಿದ್ದ ಸುನಿಲ್ ಅದಕ್ಕಾಗಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದರು. ಮಂಗಳೂರು ಮೂಲದವರಾಗಿದ್ದ ಇವರನ್ನು ನಟ, ನಿರ್ಮಾಪಕ ದ್ವಾರಕೀಶ್ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು. ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣದ ‘ಶೃತಿ’ ಚಿತ್ರದಲ್ಲಿ ಸುನಿಲ್ ಮೊದಲ ಬಾರಿಗೆ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸುನಿಲ್ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ನಂತರ ನಟಿ ಮಾಲಾಶ್ರೀ ಜೊತೆ ಸುನಿಲ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
ಸುನಿಲ್-ಮಾಲಾಶ್ರೀ ಜೋಡಿಯ ‘ಬೆಳ್ಳಿ ಕಾಲುಂಗರ’, ‘ಮೆಚ್ಚಿದ ಮದುಮಗ’, ‘ನಗರದಲ್ಲಿ ನಾಯಕರು’, ‘ಸಿಂಧೂರ ತಿಲಕ’ ‘ಸಾಹಸಿ’, ‘ತವರುಮನೆ ಉಡುಗೊರೆ’, ‘ಮನ ಮೆಚ್ಚಿದ ಸೊಸೆ’, ‘ಸ್ನೇಹದ ಕಡಲಲ್ಲಿ’, ‘ಮಾಲಾಶ್ರೀ ಮಾಮಾಶ್ರೀ’ ಚಿತ್ರವನ್ನು ಪ್ರೇಕ್ಷಕರು ಬಹಳ ಮೆಚ್ಚಿಕೊಂಡರು. ಥಿಯೇಟರ್ ಗಳಲ್ಲಿ ಈ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿದ್ದವು.ಶಿವರಾಜಕುಮಾರ್, ವಿ.ರವಿಚಂದ್ರನ್, ಶಶಿಕುಮಾರ್ ಅವರಂತೆಯೇ ಸುನಿಲ್ ಚಿತ್ರರಂಗದಲ್ಲಿ ಮಿಂಚುತ್ತಾರೆ ಎಂದು ಅಭಿಮಾನಿಗಳು ಖುಷಿಪಟ್ಟರು. ಆದರೆ ಎಲ್ಲವೂ ಚೆನ್ನಾಗಿದೆ ಅಂದುಕೊಳ್ಳುತ್ತಿರುವಾಗಲೇ ಆ ಒಂದು ಘಟನೆ ನಡೆದು ಹೋಯಿತು.
ಭೀಕರ ರಸ್ತೆ ಅಪಘಾತದಲ್ಲಿ 1994ರ ಜು.24ರಂದು ಸುನೀಲ್ ಮೃತಪಟ್ಟರು. ಸಾಯುವುದಕ್ಕೂ ಮೊದಲು ನಿರಂತರವಾಗಿ ಅವರು ಜರ್ನಿ ಮಾಡುತ್ತಿದ್ದರು. ಇವರ ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್ ಬಂದು ಸುನೀಲ್ ಅವರನ್ನು ಕರೆದುಕೊಂಡು ಬಂದಿದ್ದರು. ಬೆಂಗಳೂರಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿಯೇ ಇನ್ನೊಂದು ಜಾಗಕ್ಕೆ ಅವರು ಹೊರಟರು. ಡ್ರೈವರ್ಗೆ ಸರಿಯಾಗಿ ನಿದ್ರೆ ಆಗಿರಲಿಲ್ಲ. ಪರಿಣಾಮ ಕಾರು ಅಪಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.
ಸೌಂದರ್ಯ
Image Credits : Astro Ulagam
ಕನ್ನಡ ಸೇರಿದಂತೆ ದಕ್ಷಿಣ ಬಾರತೀಯ ಭಾಷೆಗಳ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ. ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗಬೇಕೆಂದಿದ್ದವರು ಆಕಸ್ಮಿಕವಾಗಿ ಚಲನಚಿತ್ರರಂಗ ಪ್ರವೇಶಿಸಿದ್ದರು. ‘ಸೌಮ್ಯ'ಈಕೆಯ ಮೂಲ ಹೆಸರಾಗಿದ್ದು ತಮ್ಮ ಮೊದಲ ಕೆಲವು ಚಿತ್ರಗಳಲ್ಲಿ ಸಹ ಇದೇ ಹೆಸರನ್ನು ಬಳಸಿಕೊಂಡಿದ್ದರು.
ಅದು 2004ರ ಏಪ್ರಿಲ್ 17. ನಟಿ ಸೌಂದರ್ಯಾ ಬೆಂಗಳೂರಿನಿಂದ ಕರೀಮ್ ನಗರಕ್ಕೆ ತೆರಳಿ, ಬಿಜೆಪಿ ಪರ ಪ್ರಚಾರ ಮಾಡುವವರಿದ್ದರು. ಅಗ್ನಿ ಏರೋಸ್ಪೋರ್ಟ್ಸ್ ಒಡೆತನದ ನಾಲ್ಕು ಆಸನಗಳ ಮಿನಿ ವಿಮಾನ ಸೆಸ್ಸಾನಾ 180ಯನ್ನು ಬೆಳಗ್ಗೆ 11:05ಕ್ಕೆ ಏರಿದ್ದರು. ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಇದ್ದ ಕಿರುವಿಮಾನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪತನವಾಗಿತ್ತು. ಈ ದುರಂತದಲ್ಲಿ ಅವರು ಮೃತಪಟ್ಟಿದ್ದರು..
ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ತೆಲುಗು, ತಮಿಳು, ಮಲಯಾಳಗಳಲ್ಲಿ ಸಹ ಬಹು ಬೇಡಿಕೆಯ ನಟಿಯಾಗಿದ್ದರು. ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮುಖೇನ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು ಸೌಂದರ್ಯ. ಅವರ ಮೊದಲ ನಿರ್ಮಾಣದ ಚಿತ್ರಕ್ಕೇ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಲಭಿಸಿತ್ತು. ಆಪ್ತಮಿತ್ರ ಚಿತ್ರ ಸೌಂದರ್ಯ ಅವರ ಕಡೆಯ ಚಿತ್ರವಾಗಿದ್ದು ಅದರಲ್ಲಿನ "ನಾಗವಲ್ಲಿ" ಪಾತ್ರ ಎಂದೆಂದಿಗೂ ಮರೆಯಲಾಗದ್ದು
ಆಕಸ್ಮಿಕವಾಗಿ ಮೃತಪಟ್ಟ ನಟ-ನಟಿಯರು
ಇದಲ್ಲದೆ ಕನ್ನಡ ಹಲವು ನಟ-ನಟಿಯರು ಅಪಘಾತದಲ್ಲಿ ಮಾತ್ರವಲ್ಲದೆ ಆಕಸ್ಮಿಕವಾಗಿ, ಆತ್ಮಹತ್ಯೆಯಲ್ಲಿ ಮರಣಹೊಂದಿದ್ದಾರೆ. ಕನ್ನಡದ ಮಿನುಗು ತಾರೆ ಕಲ್ಪನಾ 1979ರಲ್ಲಿ ತಮ್ಮ 36ನೇ ವಯುಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಮಂಜುಳಾ ಬೆಂಕಿ ಆಕಸ್ಮಿಕದಲ್ಲಿ ಮರಣ ಹೊಂದಿದರು. ನಟಿ ನಿವೇದಿತಾ ಜೈನ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ನಟಿ. . ಮೇ 17, 1998 ರಂದು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ನಿವೇದಿತಾ ಜೈನ್ ರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ 24 ದಿನಗಳ ಕಾಲ ಕೋಮಾದಲ್ಲಿದ್ದ ನಟಿ ನಿವೇದಿತಾ ಜೈನ್ ಅನ್ನು ಜೂನ್ 10ರಂದು ನಿಧನರಾದರು.
ಹೆಸರಾಂತ ನಟಿ ಸಿಲ್ಕ್ ಸ್ಮಿತಾ ವಿಜಯಲಕ್ಷ್ಮಿ ತಮ್ಮ 35ನೇ ವಯಸ್ಸಿನಲ್ಲಿ ಸಾವನಪ್ಪಿದರು. ಚೆನ್ನೈನ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಢವಾಗಿ ಸಿಲ್ಕ್ ಸ್ಮಿತಾ ಶವವಾಗಿ ದೊರೆತರು. 'ಮಾಸ್ತಿಗುಡಿ' ಸಿನಿಮಾದಕ್ಲೈಮ್ಯಾಕ್ಸ್ ಚಿತ್ರೀಕರಣದ ಶೂಟಿಂಗ್ ನಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಖಳನಟರಾದ ಅನಿಲ್ ಕುಮಾರ್ ಮತ್ತು ರಾಘವ ಉದಯ್ ಸಾವಿಗೀಡಾದರು. ಹೀಗೆ ಅಪಘಾತ, ಆತ್ಮಹತ್ಯೆ, ಆಕಸ್ಮಿಕ ಸಾವಿನಿಂದ ಕನ್ನಡ ಚಿತ್ರರಂಗ ಹಲವು ಪ್ರತಿಭಾವಂತ ನಟ-ನಟಿಯರನ್ನು ಕಳೆದುಕೊಂಡಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 15, 2021 at 05:49PM