ದೇವಾಲಯದ ಗರ್ಭಗುಡಿಯ ತಲದಿಂದ ಹರಿಯುತ್ತೆ ಸ್ಪಟಿಕಶುಭ್ರ ನೀರಿನ ಒರತೆ..!
Featured Image Credits : Pinterest
ಭಾರತದಲ್ಲಿ ಸಾವಿರಾರು ವರ್ಷಗಳಷ್ಟು ಪುರಾತನವಾದ ಹಲವಾರು ದೇವಾಲಯಗಳಿವೆ. ಅದರಲ್ಲೂ ತಮಿಳುನಾಡು ಮುಖ್ಯವಾಗಿ ಸಾಕಷ್ಟು ಪ್ರಾಚೀನ ದೇವಾಲಯಗಳಿರುವ ರಾಜ್ಯವಾಗಿದೆ. ಇಲ್ಲಿನ ದೇವಾಲಯಗಳು ಬೃಹತ್ ಗೋಪುರಗಳು, ಕಂಬಗಳು, ಶಿಲ್ಪಕಲೆ. ಕೆತ್ತನೆಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ. ಹಿಂದೂ ಪುರಾಣಗಳ ಪ್ರಕಾರ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಪ್ರತೀಕವಾಗಿ ಪರಶಿವನು ಭೂಮಂಡಲದಲ್ಲಿ ಐದು ಕ್ಷೇತ್ರಗಳಲ್ಲಿ ನೆಲೆಸಿದ್ದಾನೆ. ಈ ಐದು ಕ್ಷೇತ್ರಗಳನ್ನು ಒಟ್ಟಾಗಿ ಪಂಚಭೂತಗಳು ಎನ್ನುತ್ತಾರೆ. ಆ ಐದು ಕ್ಷೇತ್ರಗಳು ಯಾವುವು ಅನ್ನೋದು ನಿಮಗೆ ಗೊತ್ತಾ?
ಭೂಮಿಯ ಪ್ರತೀಕವಾಗಿ ಏಕಂಬರೇಶ್ವರ ದೇವಾಲಯ, ನೀರಿನ ಪ್ರತೀಕವಾಗಿ ಜಂಬುಕೇಶ್ವರ ದೇವಾಲಯ, ಗಾಳಿ ಪ್ರತೀಕವಾದ ಕಾಳಹಸ್ತಿ ದೇವಾಲಯ, ಆಕಾಶಕ್ಕೆ ಪ್ರತೀಕವಾಗಿ ನಟರಾಜ ಸ್ವಾಮಿ ದೇವಾಲಯ, ಬೆಂಕಿಗೆ ಪ್ರತೀಕವಾಗಿ ಅರುಣಾಚಲೇಶ್ವರ ದೇವಾಲಯ. ಇದರಲ್ಲಿ ಒಂದು ವಾಯುಲಿಂಗ ಕಾಳಹಸ್ತಿ ದೇವಾಲಯ ಆಂಧ್ರಪ್ರದೇಶದಲ್ಲಿದ್ದರೆ ಉಳಿದ ನಾಲ್ಕು ದೇವಾಲಯಗಳು ಟೆಂಪಲ್ ಸ್ಟೇಟ್ ಎಂದೇ ಕರೆಯಲಾಗುವ ತಮಿಳುನಾಡಿನಲ್ಲಿಯೇ ನಿರ್ಮಾಣಗೊಂಡಿವೆ. ಅದರಲ್ಲಿ ನಾವೀಗ ಹೇಳಲು ಹೊರಟಿರುವುದು ಜಂಬುಕೇಶ್ವರ ದೇವಾಲಯದ ಬಗ್ಗೆ.
ಇದನ್ನು ಓದಿ : ಶ್ರೀರಂಗಂ ದೇವಾಲಯದ ಆವರಣದಲ್ಲಿದೆ ವೈಷ್ಣವ ತತ್ವಜ್ಞಾನಿಯ 1000 ವರ್ಷದ ಹಳೆಯ ದೇಹ..!
ಪಂಚಭೂತ ಕ್ಷೇತ್ರಗಳಲ್ಲಿ ಎರಡನೇಯದಾಗಿರುವ ಜಂಬುಕೇಶ್ವರ ದೇವಾಲಯವು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿದೆ. ಶಾಸನದಲ್ಲಿ ಈ ದೇವಾಲಯವನ್ನು ಚೋಳರು ನಿರ್ಮಿಸಿದರು ಎಂದು ಹೇಳಲಾಗಿದೆ. ಅಲ್ಲದೆ. ಪಲ್ಲವರು, ಪಾಂಡ್ಯರು, ವಿಜಯನಗರದ ರಾಜರು ಈ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದರು ಎನ್ನುವುದನ್ನು ಶಾಸನಗಳು ತಿಳಿಸುತ್ತವೆ. ದೇವಾಲಯವು ಶ್ರೀರಂಗನಾಥ ಸ್ವಾಮಿ ಮಂದಿರವಿರುವ ಶ್ರೀರಂಗ ದ್ವೀಪದಲ್ಲಿದೆ
ತಿರುಚಿನಾಪಳ್ಳಿಯಲ್ಲಿದೆ ಜಂಬುಕೇಶ್ವರ ದೇವಾಲಯ
Image Credits : Shirditemple.com
ತಿರುಚಿನಾಪಳ್ಳಿಯಲ್ಲಿರುವ ಜಂಬುಕೇಶ್ವರ ದೇವಾಲಯವು ತಮಿಳುನಾಡಿನಲ್ಲಿರುವ ಅತ್ಯಂತ ಪ್ರಸಿದ್ಧ ಶಿವ ದೇವಾಲಯವಾಗಿದೆ. ಈ ಮಂದಿರವು ಸುಮಾರು 1800 ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಈ ಮೊದಲೇ ಹೇಳಿದಂತೆ ಜಂಬುಕೇಶ್ವರ ದೇವಾಲಯವು ತಮಿಳುನಾಡಿನ ಐದು ಶಿವ ದೇವಾಲಯಗಳಲ್ಲಿ ಒಂದಾಗಿದೆ. ಈ ಐದು ಶಿವ ದೇವಾಲಯಗಳು ಐದು ತತ್ವವನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಜಂಬುಕೇಶ್ವರ ನೀರನ್ನು ಪ್ರತಿನಿಧಿಸುತ್ತದೆ. ಇಲ್ಲಿ ಅಂತರ್ಗತವಾಗಿ ಹರಿವ ನೀರಿನ ಝರಿ ಇದೆ. ಹಾಗಾಗಿ ವರ್ಷದ ಯಾವ ಕಾಲದಲ್ಲೂ ಇಲ್ಲಿ ನೀರಿನ ಕೊರತೆ ಇರೋದಿಲ್ಲ.
ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಹಿಂದೂ ಮತ್ತು ಜೈನ ಧರ್ಮದದ್ದಾಗಿದೆ ಎಂದು ಹೇಳಲಾಗುತ್ತದೆ. ನಗರಾ ಶೈಲಿಯ ಈ ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟವಾಗಿದ್ದು ತೆಳುವಾದ, ಪೀನ ಗೋಪುರಗಳು ಮತ್ತು ಬೃಹತ್ ಒಳ ಗರ್ಭಗೃಹವನ್ನು ಹೊಂದಿದೆ. ದೇವಾಲಯದ ಒಂದು ದೊಡ್ಡ ಗೋಡೆಯು ಒಂದು ಮೈಲಿಗಿಂತಲೂ ಹೆಚ್ಚು ವಿಸ್ತಾರವಾಗಿದೆ ಮತ್ತು ಒಳಗಿನ ಜಾಗದಲ್ಲಿ 700ಕ್ಕೂ ಹೆಚ್ಚು ಸಂಕೀರ್ಣವಾದ ಕೆತ್ತಿದ ಕಂಬಗಳಿವೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ.
ಇದನ್ನು ಓದಿ : ಸಂಗೀತದ ಸ್ವರಗಳನ್ನು ಹಾಡುವ ಕನ್ಯಾಕುಮಾರಿಯ ತನುಮಲಯನ್ ದೇವಾಲಯ
ಜಂಬುಕೇಶ್ವರ ಮಂದಿರದ ವಾಸ್ತುಕಲೆಯು ಶ್ರೀರಂಗನಾಥ ಸ್ವಾಮಿ ಮಂದಿರದ ವಾಸ್ತುಕಲೆಗಿಂತಲೂ ಸುಂದರವಾಗಿದೆ. ಈ ಎರಡೂ ದೇವಸ್ಥಾನವನ್ನು ಒಂದೇ ಸಮಯದಲ್ಲಿ ಮಾಡಲಾಗಿತ್ತು. ಇಲ್ಲಿ ಐದು ಪರಿಸರಗಳಿವೆ. ಐದನೇ ಪರಿಸರದಲ್ಲಿ ದೊಡ್ಡ ಗೋಡೆ ಇದೆ. ಕಥೆಗಳ ಪ್ರಕಾರ ಇಲ್ಲಿನ ಗೋಡೆಯನ್ನು ಶಿವನು ಕೆಲಸಗಾರರ ಜೊತೆ ಸೇರಿ ನಿರ್ಮಿಸಿದ್ದನು. 4ನೇ ಪರಿಸರದಲ್ಲಿ 769 ಸ್ಥಂಭಗಳು ಇವೆ. ಜೊತೆಗೆ ಜಲಕುಂಡವೂ ಇದೆ. ಮೂರನೇ ಪರಿಸರದಲ್ಲಿ ಗೋಪುರವಿದೆ. ಅದು 73 ಹಾಗೂ 100 ಫೀಟ್ ಉದ್ದವಿದೆ. ಈ ದೇವಾಲಯಗಳ ಗುಂಪನ್ನು ಬಂಗಾಳಕೊಲ್ಲಿಯನ್ನು ಎದುರಿಸುತ್ತಿರುವ ಕಾರಣ ಗ್ರಾನೈಟ್ ಕ್ಲಸ್ಟರ್ ಎಂದು ಹೆಸರಿಸಲಾಯಿತು.
ಗರ್ಭಗುಡಿಯಲ್ಲಿ ಶುಭ್ರ ನೀರಿನ ಒರತೆ..!
ಈ ದೇವಾಲಯದ ವಿಸ್ಮಯವೆಂದರೆ ಗರ್ಭಗುಡಿಯ ತಲದಿಂದ ಸ್ಪಟಿಕಶುಭ್ರ ನೀರಿನ ಒರತೆ ಹರಿದು ಬರುತ್ತದೆ. ಈ ನೀರನ್ನು ಎಷ್ಟು ಖಾಲಿ ಮಾಡಿದರೂ ಮತ್ತೆ ಮತ್ತೆ ತುಂಬಿಕೊಳ್ಳುತ್ತದೆ. ಹೀಗಾಗಿ ದೇವಾಲಯಕ್ಕೆ ವರ್ಷಪೂರ್ತಿ ಯಾವುದೇ ಕೊರತೆ ಉಂಟಾಗುವುದುಇಲ್ಲ. ಆದರೆ ಅದೆಷ್ಟೇ ವರ್ಷಗಳು ಕಳೆದರು ಗರ್ಭಗುಡಿಗೆ ಹರಿದು ಬರುತ್ತಿರುವ ಈ ನೀರಿನ ಸೆಲೆ ಎಲ್ಲಿದೆಯೆಂದೇ ಗೊತ್ತಾಗದಿರುವುದೇ ವಿಶೇಷ.
ಪೌರಾಣಿಕ ಹಿನ್ನಲೆಯೇನು..?
Image Credits : Daily Temple
ಜಂಬುಕೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಒಂದು ದಿನ ಪಾರ್ವತಿಯು ಸಮಾಜದ ಸುಧಾರಣೆಗಾಗಿ ಶಿವ ನಡೆಸುತ್ತಿದ್ದ ತಪಸ್ಸನ್ನು ಹೀಯಾಳಿಸಿದಳು. ಇದರಿಂದ ಶಿವ, ಪಾರ್ವತಿಗೆ ಬುದ್ಧಿ ಕಲಿಸುವ ಸಲುವಾಗಿ ಪಾರ್ವತಿಗೆ ಕೈಲಾಸದಿಂದ ಭೂಲೋಕಕ್ಕೆ ತೆರಳಿ ಅಲ್ಲಿ ತಪಸ್ಸು ಮಾಡುವಂತೆ ತಿಳಿಸುತ್ತಾನೆ. ಶಿವನ ಆಜ್ಞೆಯಂತೆ ಪಾರ್ವತಿಯು ಭೂಲೋಕಕ್ಕೆ ಅಖಿಲಾಂಡೇಶ್ವರಿ ರೂಪದಲ್ಲಿ ತೆರಳಿ ಕಾವೇರಿ ನದಿ ತೀರದಲ್ಲಿ ಶಿವಲಿಂಗವನ್ನು ಮಾಡಿ ತಪಸ್ಸು ಪ್ರಾರಂಭಿಸಿದಳು. ಪಾರ್ವತಿ ತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗಿ ಅಖಿಲಾಂಡೇಶ್ವರಿಗೆ ಶಿವ ಜ್ಞಾನ ನೀಡಿದನು ಎಂದು ಹೇಳಲಾಗುತ್ತದೆ.
ಶಿವ ಮತ್ತು ಪಾರ್ವತಿಯ ಮಧ್ಯೆ ಮೂಡಿದ್ದ ವೈಮನಸ್ಸಿನ ಕಾರಣವಾಗಿ ಈ ಮಂದಿರದಲ್ಲಿ ಮೂರ್ತಿಗಳನ್ನು ಒಂದಕ್ಕೊಂದು ವಿರುದ್ಧವಾಗಿ ಪ್ರತಿಷ್ಠಾಪಿಸಲಾಗಿದೆ. ಈ ರೀತಿಯ ಮಂದಿರಗಳನ್ನು ಉಪದೇಶ ಸ್ಥಳ ಎನ್ನಲಾಗುತ್ತದೆ. ಈ ಮಂದಿರದಲ್ಲಿ ಪಾರ್ವತಿ ದೇವಿಯನ್ನು ಶಿಷ್ಯೆಯಾಗಿ ಹಾಗೂ ಜಂಬುಕೇಶ್ವರನನ್ನು ಗುರುವಿನ ರೂಪದಲ್ಲಿ ಪೂಜಿಸಲಾಗುತ್ತಿದೆ. ಇಲ್ಲಿ ತಿರು ಕಲ್ಯಾಣ ಅಂದರೆ ವಿವಾಹ ಕಾರ್ಯ ನಡೆಯೋದಿಲ್ಲ.
ಇದನ್ನು ಓದಿ : ತಮಿಳುನಾಡಿನಲ್ಲಿದೆ ಮಾನವ ದೇಹದ ಆಕಾರದ ಚಿದಂಬರಂ ನಟರಾಜ ದೇವಾಲಯ
ಇನ್ನೊಂದು ಪುರಾಣದ ಪ್ರಕಾರ, ಮಲಯಾನ ಹಾಗೂ ಪುಷ್ಪದಂತ ಎನ್ನುವ ಇಬ್ಬರು ಶಿವಭಕ್ತರಿದ್ದರು. ಅವರು ಒಬ್ಬರಿಗೊಬ್ಬರು ಜಗಳವಾಡಿಕೊಂಡು ಮಲಯಾನ ಪುಷ್ಪದಂತನಿಗೆ ಭೂಮಿಯ ಮೇಲೆ ಆನೆಯಾಗುವ ಶಾಪ ನೀಡಿದ,. ಹಾಗೆಯೇ ಮಲಯಾನ ಜೇಡನಾಗುವ ಶಾಪ ಸಿಕ್ಕಿತು. ಆನೆ ಹಾಗೂ ಜೇಡ ಎರಡೂ ಜಂಬುಕೇಶ್ವರಕ್ಕೆ ತಲುಪಿ ಅಲ್ಲಿ ಶಿವನ ಪೂಜೆ ಮಾಡಲಾರಂಭಿಸಿದರು. ಆನೆ ಕಾವೇರಿನ ನದಿಯಿಂದ ನೀರು ತೆಗೆದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ್ರೆ . ಜೇಡ ತನ್ನ ಶಿವ ಭಕ್ತಿ ತೋರಿಸಲು ಶಿವಲಿಂಗದ ಮೇಲೆ ಸೂರ್ಯನ ಕಿರಣ ಬೀಳದಂತೆ ಹಾಗೂ ಮರದ ಒಣಗಿದ ಎಲೆ ಬೀಳದಂತೆ ಬಲೆಯನ್ನು ಹೆಣೆಯಿತು.
ಶಿವಲಿಂಗದ ಮೇಲೆ ಜೇಡರ ಬಲೆಯನನ್ನು ನೋಡಿದ ಆನೆ ಅದು ಏನೋ ಕಸವೆಂದು ತಿಳಿದುಅದರ ಮೇಲೆ ಜಲಾಭಿಷೇಕ ಮಾಡಿ ಶಿವಲಿಂಗವನ್ನು ಶುಚಿಗೊಳಿಸಿತು. ಇದರಿಂದ ಕೋಪಗೊಂಡ ಜೇಡ ಆನೆಯ ಸೊಂಡಿಲಿನ ಒಳಕ್ಕೆ ಹೊಕ್ಕು ಆನೆಯನ್ನು ಸಾಯಿಸಿತು. ಜೊತೆಗೆ ಜೇಡವೂ ಸತ್ತಿತು. ಜಂಬುಕೇಶ್ವರ ಈ ಇಬ್ಬರ ಭಕ್ತಿಗೆ ಮೆಚ್ಚಿ ಅವರಿಬ್ಬರನ್ನೂ ಶಾಪಮುಕ್ತ ಮಾಡುತ್ತಾನೆ. ಆನೆಯ ಮೂಲಕ ಶಿವನ ಪೂಜೆ ಮಾಡುತ್ತಿದ್ದ ಕಾರಣ ತಿರುವನೈ ಕೋವಿಲ್ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3zVDjTM
June 27, 2021 at 09:40AM