ಪಾಪಗಳನ್ನು ಕಳೆಯುವ ಲೋಹಾರ್ಗಲ್ ಕೊಳ..! ಮಹಾಭಾರತಕ್ಕೂ, ಪಾಂಡವರಿಗೂ ಈ ಕೊಳಕ್ಕೂ ನಂಟಿದೆ..!
Image Credits : Jhunjhunu
ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಭಕ್ತಿ, ಆಚರಣೆ, ನಂಬಿಕೆ, ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಧರ್ಮ, ದೇವರು, ಪೂಜೆಗಳಿಗೆ ಹೆಚ್ಚಿನ ಮಹತ್ವವಿದೆ. ಅಲ್ಲದೆ, ನದಿಗಳನ್ನು ಸಹ ಬಹಳ ಪುಣ್ಯಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಪವಿತ್ರ ನದಿ, ಕೊಳಗಳಿಗೆ ಮಹತ್ವದ ಸ್ಥಾನವಿದೆ. ಪಾಪ ವಿಮೋಚನೆಗೆ ಪವಿತ್ರ ಕೊಳದಲ್ಲಿ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಇಂಥಹಾ ಪುಣ್ಯನದಿಗಳಲ್ಲಿ ಮಿಂದೆದ್ದರೆ ಎಲ್ಲಾ ಪಾಪಗಳು ಕಳೆಯುತ್ತವೆ ಎಂದು ಆಸ್ತಿಕರು ನಂಬುತ್ತಾರೆ.
ಭಾರತದಲ್ಲಿ ಗಂಗಾ, ಯಮುನಾ, ಬ್ರಹ್ಮಪುತ್ರ, ಗೋದಾವರಿ, ಕಾವೇರಿ, ಅಲಕನಂದಾ ಹೀಗೆ ಹಲವಾರು ನದಿಗಳನ್ನು ಪವಿತ್ರ ನದಿಗಳೆಂದು ಪರಿಗಣಿಸಲಾಗಿದೆ. ಇನ್ನು ಕೆಲವು ನದಿಗಳೂ ಪೌರಾಣಿಕವಾದ ಹಿನ್ನಲೆಯನ್ನು ಒಳಗೊಂಡಿದ್ದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ರಾಜಸ್ಥಾನದಲ್ಲಿನ ಶೋಖಾವಾಟಿ ಪ್ರದೇಶದ ಜುಂಜುನು ಜಿಲ್ಲೆಯಿಂದ 70 ಕಿಲೋಮೀಟರ್ ದೂರದಲ್ಲಿ ಲೋಹಾರ್ಗಲ್ ಎನ್ನುವ ಕೊಳವಿದೆ.
ಈ ಕೊಳದಲ್ಲಿ ಸತ್ತವರ ಅಸ್ತಿಯನ್ನು ಬಿಡಲಾಗುತ್ತದೆ. ಸತ್ತ ವ್ಯಕ್ತಿಗಳ ಅಸ್ಥಿಯು ಈ ಕೊಳದಲ್ಲಿ ಕರಗಿದರೆ ಆತನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರ್ಥ. ಒಂದು ವೇಳೆ ಅಸ್ಥಿಯು ಕರಗದೇ ಹಾಗೇ ಉಳಿದರೆ ಆತನ ಆತ್ಮಕ್ಕೆ ಶಾಂತಿ ಸಿಗಲಿಲ್ಲವೆನ್ನುವ ನಂಬಿಕೆಯಿದೆ. ಈ ಕೊಳದ ಕುರಿತು ಇನ್ನು ಸಾಕಷ್ಟು ವಿಚಾರಗಳು ತಿಳಿದುಬಂದಿವೆ. ಲೋಹಾರ್ಗಲ್ ಕುರಿತು ಆಸಕ್ತಿದಾಯಕ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ.
ಲೋಹಾರ್ಗಲ್ ಪ್ರದೇಶವು ಆಡಾವಲ್ ಪರ್ವತದ ಕಣಿವೆಯಲ್ಲಿದೆ. ಲೋಹಾರ್ಗಲ್ ಎಂದರೆ ಲೋಹಗಳು ಕರಗುವ ಸ್ಥಳ ಎಂದರ್ಥ. ಈ ಸ್ಥಳವನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ನವಲಗಢದಲ್ಲಿರುವ ಲೋಹಾರ್ಗಲ್ಜಿ ತೀರ್ಥವನ್ನು ಅಲ್ಲಿನ ಸ್ಥಳೀಯ ಅಪಭ್ರಂಶ ಭಾಷೆಯಲ್ಲಿ ಲುಹಾಗರ್ಜಿ ಎಂದು ಕರೆಯಲಾಗುತ್ತದೆ. ಇವಿಷ್ಟೇ ಅಲ್ಲದೆ ಈ ಕೊಳಕ್ಕೆ ಅದರದ್ದೇ ಆದ ಪೌರಾಣಿಕ ಹಿನ್ನಲೆಯಿದೆ. ಈ ಕೊಳಕ್ಕೂ ಮಹಾಭಾರತಕ್ಕೂ, ಪಾಂಡವರಿಗೂ ನಂಟಿದೆ ಎಂದು ಹೇಳಲಾಗುತ್ತದೆ.
ಪಾಂಡವರ ಆಯುಧಗಳು ಕರಗಿದ್ದ ಕೊಳ
Image Credits : sudhagee.com
ಮಹಾಭಾರತ ಯುದ್ಧ ನಡೆದ ಬಳಿಕ ಪಾಂಡವರು ಯುದ್ಧದಲ್ಲಿ ತಮ್ಮ ಸಹೋದರ, ಬಂಧುಗಳನ್ನು ಕೊಂದಿದ್ದ ಕಾರಣ ಬಹಳ ದುಃಖಿತರಾಗಿದ್ದರು. ಈ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣನು ಪಾಪಗಳನ್ನು ತೊಳೆದುಕೊಳ್ಳಲು ವಿವಿಧ ಯಾತ್ರಾ ಸ್ಥಳಗಳನ್ನು ಭೇಟಿ ನೀಡುವಂತೆ ಸಲಹೆ ನೀಡುತ್ತಾನೆ. ಈ ರೀತಿ ಯಾತ್ರೆಗೆ ತೆರಳುವಾಗ ಯಾವ ತೀರ್ಥಸ್ಥಳದ ನೀರಿನಲ್ಲಿ ನಿಮ್ಮ ಶಸ್ತ್ರಾಸ್ತ್ರಗಳು ಕರಗುತ್ತದೆಯೋ ಅಲ್ಲಿ ನಿಮ್ಮ ಪಾಪಗಳು ತೊಳೆಯುತ್ತದೆ ಎಂದು ಶ್ರೀಕೃಷ್ಣನು ಪಾಂಡವರಿಗೆ ಹೇಳುತ್ತಾನೆ.
ಪಾಂಡವರು ಹಲವು ತೀರ್ಥಸ್ಥಳಗಳಿಗೆ ಭೇಟಿ ನೀಡುತ್ತಾ ಲೋಹಾರ್ಗಲ್ನ್ನು ತಲುಪುತ್ತಾರೆ. ಅಲ್ಲಿರುವ ಸೂರ್ಯಕುಂಡದಲ್ಲಿ ಸ್ನಾನ ಮಾಡಿದ ತಕ್ಷಣ ಅವರ ಎಲ್ಲಾ ಆಯುಧಗಳು ಕೃಷ್ಣನ ಮಾತಿನಂತೆ ನೀರಿನಲ್ಲಿ ಕರಗುತ್ತದೆ. ಅಂದರೆ ಪಾಂಡವರು ಮಾಡಿದ ಪಾಪವು ಕಳೆದಂತಾಗುತ್ತದೆ. ಪಾಂಡವರು ಆ ಸ್ಥಳದ ಪವಾಡವನ್ನು ಕಂಡು ಅದನ್ನು ತೀರ್ಥರಾಜ ಎಂಬ ಹೆಸರಿನಿಂದ ಕರೆಯುತ್ತಾರೆ.
ಭಗವಾನ್ ಪರಶುರಾಮನು ಕೂಡ ಲೋಹಾರ್ಗಲ್ನೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ.. ಈ ಸ್ಥಳದಲ್ಲಿ ಪರಶುರಾಮನು ಪಾಪದಿಂದ ಮುಕ್ತಿಯನ್ನು ಹೊಂದಲು ಈ ಸ್ಥಳದಲ್ಲಿ ಯಜ್ಞವನ್ನು ಮಾಡಿದ್ದಾನೆಂದು ಹೇಳಲಾಗಿದೆ. ಪರಶುರಾಮನು ಕೋಪದಿಂದ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಕೋಪದಿಂದ ಹೊರಬಂದ ನಂತರ ಪರಶುರಾಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆಗ ಅವನು ಪಾಪವನ್ನು ತೊಳೆದುಕೊಳ್ಳಲು ಇಲ್ಲಿ ಯಜ್ಞವನ್ನು ಮಾಡಿದನು. ಈ ಕೊಳದ ಹತ್ತಿರವಿರುವ ಬೆಟ್ಟದ ಮೇಲೆ ಪುರಾತನ ಸೂರ್ಯ ದೇವಾಲಯವಿದೆ. ಇದರೊಂದಿಗೆ ಈ ಸ್ಥಳದಲ್ಲಿ ವನಖಂಡಿ ದೇವಾಲಯ, ಪ್ರಾಚೀನ ಶಿವ ದೇವಾಲಯ, ಹನುಮಾನ್ ಮಂದಿರ ಮತ್ತು ಪಾಂಡವ ಗುಹೆ ಕುಂಡ ಕೂಡ ಇದೆ.
ಆಕರ್ಷಣೀಯ ಸೂರ್ಯ ದೇವಾಲಯ
Image Credits : Khas Khabar
ಪ್ರಾಚೀನ ಕಾಲದಲ್ಲಿ ನಿರ್ಮಿಸಲಾದ ಸೂರ್ಯ ದೇವಾಲಯವು ಅತ್ಯಂತ ಆಕರ್ಷಣೀಯವಾಗಿದೆ. ಚೀನ ಕಾಲದಲ್ಲಿ ಸೂರ್ಯಭಾನ ಎನ್ನುವ ರಾಜನಿದ್ದನು. ವೃದ್ಧಾಪ್ಯದಲ್ಲಿ ಅವನು ಅಂಗವಿಕಲ ಹೆಣ್ಣು ಮಗುವನ್ನು ಮಗಳಾಗಿ ಪಡೆದನು. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಲು ರಾಜನು ವಿದ್ವಾಂಸರ ಬಳಿ ಕೇಳುತ್ತಾನೆ. ಆಗ ವಿದ್ವಾಂಸರು ನಿಮ್ಮ ಮಗಳು ಹಿಂದಿನ ಜನ್ಮದಲ್ಲಿ ಮಂಗನಾಗಿದ್ದಳು. ಬೇಟೆಗಾರನಿಂದ ಆಕೆಯು ಮರಣ ಹೊಂದಬೇಕಾಯಿತು. ಬೇಟೆಯಾಡಿದ ಮಂಗನನ್ನು ಬೇಟೆಗಾರ ಮರಕ್ಕೆ ನೇತುಹಾಕುತ್ತಾನೆ. ಆಗ ಮಂಗನ ಕೈ ಮರದ ಮೇಲೆ ಉಳಿದುಕೊಳ್ಳುತ್ತದೆ ಹಾಗೂ ಆಕೆಯ ದೇಹ ಪವಿತ್ರ ಲೋಹಾರ್ಗಲ್ ನೀರಿಗೆ ಬಿದ್ದಿತು. ಆದ್ದರಿಂದ ಈ ಜನ್ಮದಲ್ಲಿ ಆಕೆ ಅಂಗವಿಕಲಳಾಗಿ ಜನಿಸುವಂತಾಯಿತು.
ರಾಜ ವಿದ್ವಾಂಸರ ಬಳಿ ಆಕೆಯ ಈ ದೋಷಕ್ಕೆ ಪರಿಹಾರವಿಲ್ಲವೇ ಎಂದು ಕೇಳುತ್ತಾನೆ. ಆಗ ವಿದ್ವಾಂಸರು ನೀವು ಅಲ್ಲಿಗೆ ಹೋಗಿ ಆ ಕೈಯನ್ನು ಪವಿತ್ರ ನೀರಿಗೆ ಹಾಕಿದರೆ ಹುಡುಗಿಯ ಕೈ ಸರಿಯಾಗುತ್ತದೆ ಎಂದು ಹೇಳಿದನು. ರಾಜನು ತಕ್ಷಣವೇ ಲಾಹಾರ್ಗಲ್ಗೆ ಹೋಗಿ ಆ ಮರದಲ್ಲಿ ಸಿಲುಕಿಕೊಂಡಿದ್ದ ಮಂಗನ ಕೈಯನ್ನು ಕೊಳಕ್ಕೆ ಬಿಡುತ್ತಾನೆ. ನಂತರ ಆತನ ಮಗಳ ಕೈ ವಾಸಿಯಾಗುತ್ತದೆ. ರಾಜನು ಈ ಪವಾಡದಿಂದ ಸಂತೋಷಗೊಂಡನು. ವಿದ್ವಾಂಸರ ಸಲಹೆಯ ಮೇರೆಗೆ ರಾಜನು ಈ ಸ್ಥಳದಲ್ಲಿ ಸೂರ್ಯ ದೇವಾಲಯವನ್ನು ಮತ್ತು ಸೂರ್ಯಕುಂಡವನ್ನು ನಿರ್ಮಿಸುತ್ತಾನೆ.
ಅತ್ಯಂತ ಪ್ರಾಚೀನ, ಧಾರ್ಮಿಕ, ಐತಿಹಾಸಿಕ ತಾಣವಾದ ಈ ಸ್ಥಳವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಸ್ಥಳ ಪುರಾಣ, ವಿಶೇಷತೆಯನ್ನು ತಿಳಿದು ಅಚ್ಚರಿಗೊಳ್ಳುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3gLS5ox
June 22, 2021 at 10:07AM