Feature Image Source : Patrika
ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಪ್ರಾಚೀನ ಆಚಾರ-ವಿಚಾರಗಳಿಗೆ, ಆಚರಣೆಗಳಿಗೆ, ಪದ್ಧತಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಧಾನಗಳು ಹಾಗೆಯೇ. ಇಂದಿನ ಜಿಮ್, ಸೈಕ್ಲಿಂಗ್, ವಾಕಿಂಗ್ ಆರಂಭವಾಗುವ ಬಹಳ ವರ್ಷಗಳ ಮೊದಲೇ ಜನರು ಆರೋಗ್ಯಕ್ಕೆ ಬೇಕಾದ ವ್ಯಾಯಾಮ, ಯೋಗಗಳನ್ನು ಮಾಡುತ್ತಿದ್ದರು. ಉತ್ತಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಆರೋಗ್ಯ ಸೂತ್ರಗಳೂ ನಮ್ಮ ಹಿರಿಯರಿಗೆ ತಿಳಿದಿತ್ತು. ಅದರಲ್ಲೊಂದು ಮುಂಜಾನೆ ಎದ್ದು ಸೂರ್ಯನಿಗೆ ನೀರು ಅರ್ಪಿಸುವುದು.
ಮುಂಜಾನೆ ಎದ್ದು ಸೂರ್ಯನಿಗೆ ನೀರು ಅರ್ಪಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ. ನೀರನ್ನು ಅರ್ಪಿಸುವಾಗ ಯಾವುದೆಲ್ಲಾ ವಿಚಾರಗಳನ್ನು ಗಮನದಲ್ಲಿಡಬೇಕು ತಿಳಿಯೋಣ..
ಬೆಳಗ್ಗೆ ಬೆಳಕು ನೀಡುವ ಸೂರ್ಯನನ್ನು ಭಾರತೀಯರು ಶ್ರೇಷ್ಠವೆಂದು ಪರಿಗಣಿಸಿದ್ದಾರೆ. ದಿನಕರ, ಶುಭಕರ, ನೇಸರ, ಉದಯ ಎಂದೆಲ್ಲಾ ಕರೆಯಲ್ಪಡುವ ಸೂರ್ಯನನ್ನು ಸೂರ್ಯದೇವ ಎಂದೇ ಸಂಬೋಧಿಸುತ್ತಾರೆ. ಸೂರ್ಯನನ್ನು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ವೇದ ಮತ್ತು ಪುರಾಣಗಳಲ್ಲಿಯೂ ಸೂರ್ಯನಿಗೆ ಜಲ ಸಮರ್ಪಣೆಯ ಬಗ್ಗೆ ಮಾಹಿತಿಯಿದೆ.
ಈ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಮುಂಜಾನೆ ವಂದಿಸುವುದನ್ನು ಪವಿತ್ರ ಎಂದು ಭಾವಿಸಲಾಗುತ್ತದೆ. ಅನಾದಿ ಕಾಲದಿಂದಲೂ ಸೂರ್ಯನಿಗೆ ನೀರು ಅರ್ಪಿಸುವ ಪರಂಪರೆ ನಡೆದುಕೊಂಡು ಬಂದಿದೆ. ಸೂರ್ಯನ ಪ್ರಥಮ ಕಿರಣಗಳು ಭೂಮಿಗೆ ಆಗಮಿಸುವ ಸಯಮದಲ್ಲಿ ನೀರನ್ನು ಅರ್ಪಿಸಿದರೆ ದೇಹದಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಸೂರ್ಯ ನಮಸ್ಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.
ಆದರೆ ಸೂರ್ಯನಿಗೇ ನೀರನ್ನೇ ಯಾಕೆ ಅರ್ಪಿಸಬೇಕು. ಅದು ಕೂಡಾ ಮುಂಜಾನೆಯೇ ಯಾಕೆ..? ಇದರಿಂದ ಇರುವ ಪ್ರಯೋಜನಗಳಾದರೂ ಏನು..? ಹೀಗೆ ಹಲವು ಪ್ರಶ್ನೆಗಳು ಮೂಡಬಹುದು. ಆ ಬಗ್ಗೆ ತಿಳಿಯೋಣ..
ಸೂರ್ಯನಿಗೆ ನೀರನ್ನು ಅರ್ಪಿಸುವುದರ ಪ್ರಯೋಜನಗಳು
Image Credits : ifairer.com
ಪ್ರಮುಖವಾಗಿ ಸೂರ್ಯನಿಗೆ ನೀರನ್ನು ಅರ್ಪಿಸುವ ಈ ವಿಧಾನವನ್ನು ಅರ್ಘ್ಯ ಅರ್ಪಿಸುವುದು ಎನ್ನುತ್ತಾರೆ. ಮುಂಜಾನೆಯೇ ಸೂರ್ಯನ ಆರಾಧನೆಯನ್ನು ನಿತ್ಯದ ಅಭ್ಯಾಸವಾಗಿಸುವವರಿಗೆ ಧನಾತ್ಮಕ ಶಕ್ತಿ ಲಭಿಸುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಸೂರ್ಯದೇವನ ರಕ್ಷಣೆ ಇರುವ ಭಾವನೆಯೊಂದೇ ವ್ಯಕ್ತಿಗೆ ಅಪಾರವಾದ ಆತ್ಮವಿಶ್ವಾಸವನ್ನೂ ನಿರ್ಭಿಡತೆಯನ್ನೂ ನೀಡುತ್ತದೆ ಎಂದು ಹೇಳುತ್ತಾರೆ.
ಸೂರ್ಯನನ್ನು ಪಾಸಿಟಿವ್ ಎನರ್ಜಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸೂರ್ಯನ ಕಿರಣಗಳು ದೇಹದ ಮೇಲೆ ಬಿದ್ದರೆ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಸೂರ್ಯನಿಗೆ ಜಲ ಸಮರ್ಪಿಸುವುದರಿಂದ ಎಲ್ಲಾ ರೀತಿಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ. ನಿಯಮಿತವಾಗಿ ಸೂರ್ಯನಿಗೆ ನೀರನ್ನು ಅರ್ಪಿಸುವುದರಿಂದ ನಮ್ಮ ದೇಹದಲ್ಲಿ ಸೂರ್ಯನ ಪ್ರಭಾವ ಹೆಚ್ಚುತ್ತದೆ. ಪರಿಣಾಮ ನಮ್ಮ ಇಡಿ ದಿನ ಚೈತನ್ಯದಿಂದ ಕೂಡಿರುತ್ತದೆ. ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
ಕೆಲಸಕ್ಕೆ ಸಂಬಂಧಪಟ್ಟಂತೆ ಯಾವುದಾದರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪ್ರತಿ ದಿನ ಬೆಳಗ್ಗೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಕೆಲಸದಲ್ಲಿ ಯಶಸ್ಸು, ಗೌರವ ಎಲ್ಲವೂ ಪ್ರಾಪ್ತವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಯಾರ ಜಾತಕದಲ್ಲಿ ಸೂರ್ಯನ ಗ್ರಹವು ದುರ್ಬಲವಾಗಿರುತ್ತದೆಯೋ ಆ ವ್ಯಕ್ತಿನಿತ್ಯವೂ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಎದುರಾಗುವ ಸಮಸ್ಯೆ ಪರಿಹಾರವಾಗುತ್ತದೆ.
ಸೂರ್ಯನಿಗೆ ನೀರು ಅಥವಾ ಅರ್ಘ್ಯವನ್ನು ಅರ್ಪಿಸುವ ಮೂಲಕ ಮಾನಸಿಕ ಶಾಂತಿ, ದೈಹಿಕ ಶಕ್ತಿ ಹಾಗೂ ದಿನದ ಕೆಲಸಗಳಲ್ಲಿ ಎದುರಾಗುವ ಯಾವುದೇ ಕಷ್ಟವನ್ನು ಎದುರಿಸಲು ಪ್ರಾಯೋಗಿಕ ಸಹಿಷ್ಣುತೆ ಲಭಿಸುತ್ತದೆ. ಮನಸ್ಸಿನಿಂದ ಸ್ವಾರ್ಥ, ಕ್ರೋಧ, ಲಾಲಸೆ, ದುರಾಸೆ ಮೊದಲಾದ ಋಣಾತ್ಮಕ ಚಿಂತನೆಗಳು ಇಲ್ಲವಾಗುತ್ತವೆ ಹಾಗೂ ಈ ಸ್ಥಾನದಲ್ಲಿ ಮಾನಸಿಕ ಶಾಂತಿ ತುಂಬುತ್ತದೆ ಎಂದು ಹೇಳುತ್ತಾರೆ.
ಕೇವಲ ಮುಂಜಾನೆಯ ಹೊತ್ತಿನಲ್ಲಿ ಮಾತ್ರವೇ ಏಕೆ ಅರ್ಪಿಸಬೇಕು?
Image Source : Patrika
ಅರ್ಘ್ಯ ಅರ್ಪಿಸಲು ಮುಂಜಾನೆ ಅತ್ಯಂತ ಪ್ರಶಸ್ತ ಸಮಯವೆಂದು ತಿಳಿಯಲಾಗಿದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಕಡಿಮೆ ತೀಕ್ಷ್ಣವಾಗಿರುತ್ತವೆ. ಹೀಗಾಗಿ ಭಕ್ತರಿಗೆ ಸೂರ್ಯನನ್ನು ಪೂಜಿಸಲು ಮತ್ತು ಅರ್ಘ್ಯವನ್ನು ಅರ್ಪಿಸಲು ಈ ಸಮಯ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಸೂಯನ ಪ್ರಥಮ ಕಿರಣಗಳು ತಾಕುವ ಸಮಯವೇ ಅರ್ಘ್ಯ ಅರ್ಪಿಸಲು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.
ಇನ್ನು, ಇನ್ನೊಂದು ವಿಶೇಷತೆಯೆಂದರೆ ಅರ್ಘ್ಯವನ್ನು ಅರ್ಪಿಸಲು ಹೆಚ್ಚಾಗಿ ತಾಮ್ರದ ಪಾತ್ರೆಯನ್ನೇ ಬಳಸುತ್ತಾರೆ.ಇದಕ್ಕೆ ಕಾರಣ ತಾಮ್ರ ಸಮೃದ್ದಿಯ ಸಂಕೇತವಾಗಿದೆ. ತಾಮ್ರ ಸಹಸ್ರಾರು ವರ್ಷಗಳಿಂದ ಬಳಕೆಯಲ್ಲಿರುವ ಲೋಹವಾಗಿದೆ. ತಿಳಿದುಬಂದಿರುವ ಇತಿಹಾಸದ ಪ್ರಕಾರ ಕ್ರಿ. ಪೂ 9000 ನೇ ಇಸವಿಯಿಂದಲೂ ತಾಮ್ರ ಬಳಕೆಯಲ್ಲಿದೆ. ವೇದಕಾಲದಲ್ಲಿಯೂ ತಾಮ್ರದ ಬಳಕೆ ಪ್ರಮುಖವಾಗಿತ್ತು. ಆಯುರ್ವೇದದ ಪ್ರಕಾರವೂ ನೀರನ್ನು ಸಂಗ್ರಹಿಸಿಡಲು ತಾಮ್ರದ ಪಾತ್ರೆಯೇ ಅತ್ಯುತ್ತಮವಾಗಿದೆ. ಹೀಗಾಗಿ ಅರ್ಘ್ಯ ಅರ್ಪಿಸಲು ತಾಮ್ರದ ಪಾತ್ರೆಯೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ..
ಸೂರ್ಯನಿಗೆ ಜಲ ಅರ್ಪಿಸುವ ಸರಿಯಾದ ಕ್ರಮ
Image Source : Yoganandham
ಸೂರ್ಯನಿಗೆ ನೀರನ್ನು ಅರ್ಪಿಸುವ ಮೊದಲು, ಅನುಸರಿಸಬೇಕಾದ ನಿಯಮಗಳು ಇವು. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸ್ನಾನ ಮಾಡಿ ತಾಮ್ರದ ಲೋಟದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಸೂರ್ಯ ಉದಯಿಸಿದ 1 ಗಂಟೆಯೊಳಗೆ ನೀರನ್ನು ಅರ್ಪಿಸುವುದು ಉತ್ತಮ ಫಲ ನೀಡುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸುವ ಮೊದಲು, ನೀರಿಗೆ ಒಂದು ಚಿಟಿಕೆ ಕೆಂಪು ಶ್ರೀಗಂಧವನ್ನು ಸೇರಿಸುವುದು ಉತ್ತಮ. ಸೂರ್ಯನಿಗೆ ನೀರು ಅರ್ಪಿಸುವಾಗ ಆ ನೀರಿನಲ್ಲಿ ಕೆಂಪು ಹೂವು ಹಾಕುವುದನ್ನು ಮರೆಯಬೇಡಿ. ಸೂರ್ಯನಿಗೆ ನೀರು ಅರ್ಪಿಸುವ ವೇಳೆ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ನೀರನ್ನು ಅರ್ಪಿಸುವ ವೇಳೆ ಯಾವುದೇ ಕಾರಣಕ್ಕೂ ನೀರು ನಿಮ್ಮ ಕಾಲುಗಳ ಮೇಲೆ ಚೆಲ್ಲದಂತೆ ನೋಡಿಕೊಳ್ಳಬೇಕು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3k4kt7G
July 10, 2021 at 08:31AM