ಇಲ್ಲಿ ಸಿಗುವ ಅರಿಶಿನ ಮೈಗೆ ಹಚ್ಚಿದರೆ ಎಂಥಹಾ ರೋಗವೂ ಪರಿಹಾರ..!
Image Source : Bhaktikishakti.com
ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರಬಹುದನ್ನು ನೋಡಿರಬಹುದು.
ದೇಶದ ಹಲವೆಡೆ ಶಿವ, ವಿಷ್ಣು, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ದೇವಿ, ದೇವಿಯ ಹಲವು ಅವತಾರಗಳ ದೇವಾಲಯಗಳನ್ನು ನಾವು ನೋಡಿದ್ದೇವೆ. ಅದಲ್ಲದೆ ದೇಶದಲ್ಲಿ ವಿಚಿತ್ರವೆನಿಸುವ, ವಿಚಿತ್ರ ಆಚರಣೆಯನ್ನು ಪಾಲಿಸಿಕೊಂಡು ಬಂದಿರುವ, ವಸ್ತು ಅಥವಾ ಪ್ರಾಣಿಗಳನ್ನು ಪೂಜಿಸುವ ಹಲವು ದೇವಸ್ಥಾನಗಳಿವೆ. ಸಾವಿರಾರು ಇಲಿಗಳಿಂದಲೇ ತುಂಬಿರುವ ಇಲಿಯನ್ನೇ ಪೂಜಿಸುವ ದೇವಸ್ಥಾನ ರಾಜಸ್ಥಾನದ ಕರ್ಣಿಮಾತಾ ದೇವಾಲಯ. ಹಾವನ್ನು ಪೂಜಿಸುವ ದೇವಸ್ಥಾನ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿದೆ.
ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಕೇರಳದಲ್ಲಿ ಈ ರೀತಿ ಸರ್ಪಗಳನ್ನೇ ಪೂಜಿಸುವ ದೇವಾಲಯವೊಂದಿದೆ. ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಹಾವುಗಳನ್ನು ಪೂಜಿಸುವ ಮಹಾ ಮನ್ನರಸಲ ಶ್ರೀ ನಾಗರಾಜ ದೇವಸ್ಥಾನವಿದೆ. ಈ ದೇವಸ್ಥಾನದ ಪ್ರಥಮ ಪುರೋಹಿತೆ ಐದು ತಲೆಯ ಹಾವುಗಳಿಗೆ ಜನ್ಮ ನೀಡಿದಳು ಎಂದು ಐತಿಹ್ಯವಿದೆ. ಹೀಗಾಗಿ ಇಂದಿಗೂ ಈ ದೇವಾಲಯವನ್ನು ಸರ್ಪವೇ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಾರೆ.
ಇದನ್ನು ಓದಿ : ಕೃಷ್ಣನೂರು ಮಥುರಾದಲ್ಲಿರುವ ಪ್ರಸಿದ್ಧ 8 ದೇವಾಲಯಗಳು
ದೇವಾಲಯದಲ್ಲಿ ಸಿಗುವ ಅರಿಶಿನ ಹಚ್ಚಿದರೆ ರೋಗ ಪರಿಹಾರ
Image Source : The New Indian Express
ಮಹಾ ಮನ್ನರಸಲ ಶ್ರೀ ನಾಗರಾಜ ದೇವಸ್ಥಾನದ ವಿಶೇಷವೆಂದರೆ ಈ ದೇವಸ್ಥಾನದಲ್ಲಿ ಸಿಗುವ ಅರಿಶಿನ ಪುಡಿ ಎಲ್ಲಾ ರೋಗವನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ. ಇಂದಿಗೂ ಜನರು ಈ ದೇವಾಲಯಕ್ಕೆ ವಿಶೇಷ ಅರಿಶಿನ ಪುಡಿಯನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಅರಿಶಿನ ಪುಡಿ ಹಚ್ಚಿದರೆ, ಕುಷ್ಠರೋಗ ಸೇರಿದಂತೆ ಅಪರೂಪದ ಕಾಯಿಲೆಗಳು ಗುಣವಾಗುತ್ತದೆ ಎಂದು ಹೇಳುತ್ತಾರೆ. ಮಕ್ಕಳಗಾಗದವರು ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ,
ಮನ್ನರಸಲ ಶ್ರೀ ನಾಗರಾಜ ದೇವಸ್ಥಾನವು ಕೇರಳದ ಅತಿದೊಡ್ಡ ದೇವಾಲಯವಾಗಿದೆ. ಇಲ್ಲಿಗೆ ಬರುವ ಭಕ್ತಾಧಿಗಳು ಹಾವಿನ ಚಿತ್ರಗಳನ್ನು ಅರ್ಪಣೆಗಳಾಗಿ ತರುತ್ತಾರೆ. ಶ್ರೀ ನಾಗರಾಜ ದೇವಸ್ಥಾನ ಎಂದೂ ಕರೆಯಲ್ಪಡುವ ಮನ್ನರಸಲ ದೇವಸ್ಥಾನವನ್ನು ಸರ್ಪ ದೇವರ ಭಕ್ತರು ಹೆಚ್ಚು ಪೂಜಿಸುತ್ತಾರೆ. ಇದು ಫಾರೆಸ್ಟ್ ಗ್ಲೇಡ್ ಮಧ್ಯದಲ್ಲಿದೆ ಮತ್ತು 30,000ಕ್ಕೂ ಹೆಚ್ಚು ಹಾವುಗಳ ಚಿತ್ರಗಳನ್ನು ಹೊಂದಿದೆ.
ಇದನ್ನು ಓದಿ : 3000 ಅಡಿ ಎತ್ತರದ ಬೆಟ್ಟದ ಮೇಲಿದೆ ಧೋಲ್ಕಲ್ ಪ್ರಾಚೀನ ಗಣೇಶ ದೇವಾಲಯ
ಪೌರಾಣಿಕ ಹಿನ್ನಲೆಯೇನು..?
Image Source : cravingsunlimited.com
ಮನ್ನರಸಲ ದೇವಾಲಯದ ವಿಕಾಸದ ಕುರಿತಾದ ಕಥೆಯು ಪರಶುರಾಮನೊಂದಿಗೆ ಸಂಬಂಧ ಹೊಂದಿದೆ. ಪರಶುರಾಮ ಈ ದೇವಾಲಯದ ಸೃಷ್ಟಿಕರ್ತ ಎಂದು ವ್ಯಾಪಕವಾಗಿ ನಂಬಲಾಗಿದೆ. ಕ್ಷತ್ರಿಯರನ್ನು ಕೊಲ್ಲುವ ಪಾಪದಿಂದ ತನ್ನನ್ನು ಬಿಡುಗಡೆ ಮಾಡಿಕೊಳ್ಳಲು ಪರಶುರಾಮನು ಋಷಿಗಳನ್ನು ಸಮೀಪಿಸಿ ಸಲಹೆ ಕೇಳಿದನು. ಋಷಿಗಳು, ಪರಶುರಾಮ ತಮ್ಮ ಸ್ವಂತ ಭೂಮಿಯನ್ನು ಬ್ರಾಹ್ಮಣರಿಗೆ ಉಡುಗೊರೆಯಾಗಿ ನೀಡಬೇಕೆಂದು ಸಲಹೆ ನೀಡಿದರು. ಜಮದಗ್ನಿಯ ಮಗನಾದ ಪರಶುರಾಮನು ತನಗಾಗಿ ಸ್ವಲ್ಪ ಭೂಮಿಯನ್ನು ಪಡೆಯಲು ಪ್ರಾರ್ಥಿಸಿದನು. ಶಿವನು ತನ್ನ ಆಶೀರ್ವಾದದ ಕೊಡಲಿಯನ್ನು ಪರಶುರಾಮನಿಗೆ ನೀಡಿದನು. ಹೀಗೆ ಪರಶುರಾಮನು ಕೊಡಲಿ ಎಸೆದು ಸೃಷ್ಟಿಯಾದ ಭೂಮಿಯನ್ನು ಕೇರಳ ಎಂದು ಕರೆಯಲಾಯಿತು.
ಮಣ್ಣಿನ ಲವಣಾಂಶದಿಂದಾಗಿ ಈ ಪ್ರದೇಶ ವಾಸಯೋಗ್ಯವಾಗಿರಲಿಲ್ಲ. ಕಾಡುಗಳಿಂದ ತುಂಬಿರುವ ಕೇರಳವು ಅತ್ಯಂತ ವಿಷಕಾರಿ ಹಾವುಗಳಿಂದ ತುಂಬಿಕೊಂಡಿತ್ತು. ಹಾವುಗಳಿಗೆ ಹೆದರಿ ಜನರು ಊರು ಬಿಟ್ಟು ಹೋಗಲು ಆರಂಭಿಸಿದರು. ಈ ಸಂದರ್ಭದಲ್ಲಿ ಹಾವುಗಳಿಂದ ರಕ್ಷಣೆ ಪಡೆಯಲು ಹಾವು ಪೂಜೆಯನ್ನು ನಡೆಸಲು ಪ್ರಾರಂಭಿಸಲಾಯಿತು. ಪರಶುರಾಮನು ಸಮಸ್ಯೆಯ ಪರಿಹಾರಕ್ಕಾಗಿ ಶಿವನಲ್ಲಿ ಮೊರೆಯಿಟ್ಟನು. ಪರಶಿವನು ದೇವಾಲಯ ನಿರ್ಮಿಸುವಂತೆ ಸೂಚಿಸಿದನು.
ಇದನ್ನು ಓದಿ : ರಾಮನೂ, ರಾವಣನೂ ಇಬ್ಬರೂ ಸಹ ಮಹಾನ್ ಶಿವಭಕ್ತರಾಗಿದ್ದರು..!
ನಾಗರಾಜನನ್ನು ಮೆಚ್ಚಿಸುವ ಸಲುವಾಗಿ ಪರಶುರಾಮನು ತನ್ನ ಶಿಷ್ಯರೊಂದಿಗೆ ನಿರ್ಜನ ಕಾಡಿನ ಹುಡುಕಾಟಕ್ಕೆ ಹೊರಟನು. ಕೇರಳದ ದಕ್ಷಿಣ ಭಾಗದ ಕಡಲತೀರದ ಬಳಿ ಸೂಕ್ತವಾದ ಸ್ಥಳವನ್ನು ಕಂಡುಕೊಂಡನು. ಅಲ್ಲೇ ಹಾವುಗಳಿಗಾಗಿ ಒಂದು ದೇವಾಲಯ ನಿರ್ಮಿಸಿದನು. ಅದುವೇ ಮಹಾ ಮನ್ನರಸಲ ಶ್ರೀ ನಾಗರಾಜ ದೇವಸ್ಥಾನ.
ಪರಶುರಾಮನ ಪ್ರಾರ್ಥನೆಗೆ ಮೆಚ್ಚಿ ನಾಗರಾಜನು ಪ್ರತ್ಯಕ್ಷನಾದನು. ಭೂಮಿಯನ್ನು ವಾಸಯೋಗ್ಯ ಮಾಡಿಕೊಡುವುದಾಗಿ ಹೇಳಿ ಎಲ್ಲಾ ಸರ್ಪಗಳಿಗೆ ಇದನ್ನೇ ಸೂಚಿಸಿದನು. ಅಂದಿನಿಂದ ಆ ಪ್ರದೇಶದಲ್ಲಿದ್ದ ಸರ್ಪಗಳೆಲ್ಲಾ ಮಾಯವಾಗಿ ವಾಸ ಯೋಗ್ಯವಾಯಿತು. ಇಂದಿಗೂ ಇಲ್ಲಿನ ಜನರ ರಕ್ಷಣೆಗೆ ಸರ್ಪಗಳು ಕಾವಲಿವೆ ಎಂದು ನಂಬಲಾಗುತ್ತದೆ. ಅಲಯಾಮ್ ಉತ್ಸವವು ಇಲ್ಲಿನ ಪ್ರಮುಖ ಹಬ್ಬವಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3icEdEC
July 29, 2021 at 06:24PM