ಅಂಪೈರ್ ಎಡವಟ್ಟಿನಿಂದ ಭಾರತಕ್ಕೆ ಎದುರಾಯ್ತಾ ಐತಿಹಾಸಿಕ ಸೋಲು?
ಬದ್ಧವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 2021ರ ಐಸಿಸಿ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಸೋಲುವ ಮೂಲಕ, ವಿಶ್ವಕಪ್ ಇತಿಹಾಸದಲ್ಲೇ ಪಾಕ್ ವಿರುದ್ಧ ಮೊದಲ ಸೋಲಿನ ಮುಖಭಂಗಕ್ಕೊಳಗಾಯಿತು. ವಿರಾಟ್ ಕೊಹ್ಲಿ ಪಡೆಯ ಸೋಲು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನೋವು ತರಿಸಿರುವುದು ಸುಳ್ಳಲ್ಲ.
Umpiring in #ind Vs Pakistan was worst....run out was neglected...side angle showed bat was not grounded & no ball LBW of Rahul ....#KLRahul #INDvPAK @ICC pic.twitter.com/PqKPSgzWoI
— Jigar tailor (@JJJKING_26) October 24, 2021
1992ರಿಂದ ವಿಶ್ವಕಪ್ಗಳಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲ್ಲಲು ಆಗಿರಲಿಲ್ಲ. ಆದರೆ 29 ವರ್ಷಗಳ ಬಳಿಕ ಪಾಕಿಸ್ತಾನ ಗೆದ್ದು `ಇಂದೇ ಪ್ರಪಂಚ ಮುಗಿಯಲಿದೆ' ಎನ್ನುವ ರೀತಿಯಲ್ಲಿ ಸಂಭ್ರಮಿಸಿದೆ.
Stupid umpiring in this crucial match is not accepted… Blind to see No Ball we lost Rahul 😡 #icc #ICCT20WorldCup #INDvPAK #KLRahul #ViratKohli #SanjayManjrekar. pic.twitter.com/pFASMXZtVM
— Shiv Sharma (@ShivShharma) October 24, 2021
ಭಾರತೀಯರಿಗೆ ತಮ್ಮ ತಂಡ ಸೋತ ನೋವು ಒಂದು ಕಡೆಯಾದರೆ ಅಂಪೈರ್ಗಳು ಎಡವಟ್ಟು ಮಾಡಿ ಭಾರತ ಸೋಲಲು ಕಾರಣರಾದರೇ? ಎನ್ನುವ ಪ್ರಶ್ನೆ ಮತ್ತೊಂದು ಕಡೆ.
THIS TYPE OF UMPIRING NOT ACCEPTABLE IN THIS TYPE OF CRUCIAL MATCH.. THIS WAS THE BALL WHEN KLRAHUL GOT OUT#klrahul #indvspak pic.twitter.com/XQvp8e2mcD
— Kl Rahul (@rahulkl_stans) October 24, 2021
ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್, ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ರಾಹುಲ್ ಔಟಾದ ಎಸೆತವನ್ನು ಶಾಹೀನ್ ಅಫ್ರಿದಿ ನೋಬಾಲ್ ಮಾಡಿದ್ದರೇ? ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಟೀವಿ ರೀಪ್ಲೇಗಳಲ್ಲಿ ಶಾಹೀನ್ ಅಫ್ರಿದಿ ಚೆಂಡನ್ನು ಎಸೆಯುವಾಗ ಅವರ ಕಾಲು ಕ್ರೀಸ್ನಿಂದ ಹೊರಗಿರುವುದು ಕಂಡು ಬಂದಿದೆ. ಈ ವಿವಾದದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ರಾಹುಲ್ ಇನ್ನಿಂಗ್ಸ್ನ ಆರಂಭದಲ್ಲೇ ಔಟಾಗಿದ್ದು ಭಾರತಕ್ಕೆ ಭಾರೀ ದೊಡ್ಡ ಹಿನ್ನಡೆ ಉಂಟು ಮಾಡಿತು. ಐಪಿಎಲ್ನಲ್ಲಿ ಅಮೋಘ ಫಾರ್ಮ್ನಲ್ಲಿದ್ದ ರಾಹುಲ್, ಅಭ್ಯಾಸ ಪಂದ್ಯಗಳಲ್ಲೂ ಅಬ್ಬರಿಸಿದ್ದರು. ಅವರು ನಾಯಕ ವಿರಾಟ್ ಕೊಹ್ಲಿ ಜೊತೆ ಕೆಲ ಕಾಲ ಕ್ರೀಸ್ನಲ್ಲಿ ಉಳಿದುಕೊಂಡಿದ್ದರೆ ಸಾಕಾಗಿತ್ತು.
ರಾಹುಲ್ 30-40 ರನ್ ಕೊಡುಗೆ ನೀಡಿದ್ದರೂ ಭಾರತ 170-180 ರನ್ ಕಲೆಹಾಕಬಹುದಾಗಿತ್ತು. ವಿಕೆಟ್ ಕಳೆದುಕೊಳ್ಳದೆ ರನ್ ಚೇಸ್ ಮಾಡಿದ ಪಾಕಿಸ್ತಾನಕ್ಕೆ ಸ್ಕೋರ್ ಬೋರ್ಡ್ ಒತ್ತಡ ಹಾಕುವ ಅವಕಾಶ ಭಾರತಕ್ಕೆ ಇರುತ್ತಿತ್ತು. 152 ರನ್ ಗುರಿ ಬೆನ್ನತ್ತುವುದಕ್ಕೂ 180 ರನ್ ಗುರಿ ಬೆನ್ನತ್ತುವುದಕ್ಕೂ ವ್ಯತ್ಯಾಸವಿದೆ. ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದ್ದರೆ ಭಾರತ, ಟಿ20 ವಿಶ್ವಕಪ್ನಲ್ಲಿ ತನ್ನ ಬದ್ಧವೈರಿಯ ಎದುರು ಸತತ 6ನೇ ಗೆಲುವು ಸಾಧಿಸಿ, ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳಬಹುದಿತ್ತು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3mj7Eal
October 25, 2021 at 05:32PM