ಸತಿ ದೇವಿಯ ಮೂರು ಕಣ್ಣುಗಳು ಬಿದ್ದ ಮಹಾಕ್ಷೇತ್ರವಿದು!
Image credits : Patrika
ಕೊಲ್ಹಾಪುರ ಮಹಾಲಕ್ಷ್ಮಿಯ ಮಹಿಮೆ ಅಪಾರ
ಕೊಲ್ಹಾಪುರ ಮಹಾಲಕ್ಷ್ಮಿ ದೇವಿಯ ದೇಗುಲವು, ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಇದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿದೆ. ಇದು 51 ಶಕ್ತಿಪೀಠ, ಅಷ್ಟದಶ ಎಂದರೆ 18 ಶಕ್ತಿಪೀಠಗಳ ಪೈಕಿ ಒಂದು. ಮಹಾರಾಷ್ಟ್ರದಲ್ಲಿರುವ ಮೂರುವರೆ ಶಕ್ತಿಪೀಠಗಳ ಪೈಕಿ ಕೂಡ ಒಂದಾಗಿದೆ.
ದಕ್ಷ ಯಜ್ಞದಿಂದಾಗಿ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ, ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದನು. ಆಗ ಸತಿಯ ಮೂರು ಕಣ್ಣುಗಳು ಬಿದ್ದಿದ್ದು ಕೊಲ್ಹಾಪುರದಲ್ಲಿ. ಇಲ್ಲಿ ಮಹಾದೇವಿಯನ್ನು `ಆಯಿ ಅಂಬಾಬಾಯಿ' ಎಂದು ಕರೆಯಲಾಗುತ್ತದೆ.
ದೇವಿಯ ಮೂರು ಕಣ್ಣುಗಳು ಇಲ್ಲಿ ಬಿದ್ದಿದ್ದರಿಂದ ಇಲ್ಲಿ ಮೂರು ಮಂದಿಗಳು ಇವೆ. ಮಹಾಕಾಳಿ, ಮಹಾಸರಸ್ವತಿ ಹಾಗೂ ಮಹಾಲಕ್ಷ್ಮಿ. ಈ ಮೂರು ದೇಗುಲಗಳು ದೇವಿಯ ಮೂರು ಕಣ್ಣುಗಳನ್ನು ಸೂಚಿಸುತ್ತವೆ.
ಇದೊಂದು ಬಹಳ ವಿಶೇಷವಾದ ಕ್ಷೇತ್ರ!
ಕೊಲ್ಹಾಪುರ ಶಕ್ತಿ ಪೀಠವು, ಬಹಳ ವಿಶೇಷವಾದ ಶಕ್ತಿಪೀಠ. ಇಲ್ಲಿ ದೇವಿಯು ತನ್ನ ಭಕ್ತರ ಆಸೆಗಳನ್ನು ಈಡೇರಿಸುತ್ತಾಳೆ, ಅದೇ ರೀತಿಯಾಗಿ ಭಕ್ತರನ್ನು ಆಸೆ ಎನ್ನುವ ಬಂಧನದಿಂದ ಬಿಡುಗಡೆಯನ್ನೂಗೊಳಿಸುತ್ತಾಳೆ. ಪುರಾಣಗಳ ಪ್ರಕಾರ, ಈ ರೀತಿ ಎರಡೂ ನಡೆಯುವುದು ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ.
ಕ್ರಿ.ಶ 109ರಲ್ಲಿ ಕೊಂಕಣದ ರಾಜ ಕರ್ಣದೇವನು, ಸುತ್ತಮುತ್ತಲಿನ ಅರಣ್ಯವನ್ನು ಕಡಿದು, ದೇವಾಲಯವನ್ನು ನಿರ್ಮಿಸಿದನು. ಆ ಬಳಿಕ ಹಲವು ರಾಜ ಮನೆತನಗಳು ದೇವಾಲಯದ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡರು. ಚಾಲುಕ್ಯರು, ಯಾದವರು, ಸಿಲ್ಹಾರರು ಈ ದೇಗುಲಕ್ಕೆ ಭೇಟಿ ನೀಡುತ್ತಿದ್ದರು ಎನ್ನುತ್ತದೆ ಇತಿಹಾಸ. ಛತ್ರಪತಿ ಶಿವಾಜಿ, ಸಂಭಾಜಿ ಸಹ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಆದಿ ಶಂಕರಾಚಾರ್ಯರು ಈ ದೇಗುಲಕ್ಕೆ ಭೇಟಿ ನೀಡಿದ್ದರು.
Image credits : Indiatales
ಪಶ್ಚಿಮಕ್ಕೆ ಮುಖ ಮಾಡಿದ್ದಾಳೆ ಮಹಾಲಕ್ಷ್ಮಿ!
ಇಲ್ಲಿನ ಮಹಾಲಕ್ಷ್ಮಿ ವಿಗ್ರಹವು 3 ಅಡಿ ಎತ್ತರವಿದೆ. ಸಾಮಾನ್ಯವಾಗಿ ದೇಗುಲಗಳಲ್ಲಿ ವಿಗ್ರಹಗಳು ಉತ್ತರ ಇಲ್ಲವೇ ಪೂರ್ವಕ್ಕೆ ಮುಖ ಮಾಡಿರುತ್ತವೆ. ಆದರೆ, ಈ ದೇಗುಲದಲ್ಲಿ ಮಹಾಲಕ್ಷ್ಮಿಯ ವಿಗ್ರಹವು ಪಶ್ಚಿಮಕ್ಕಿದೆ.
ದೇವಿಯ ಮೇಲೆ ಸೂರ್ಯ ಕಿರಣಗಳು
ಜನವರಿ 31ರಿಂದ ಫೆಬ್ರವರಿ 02 ಹಾಗೂ ನವೆಂಬರ್ 9ರಿಂದ 11ರ ವರೆಗೂ ವರ್ಷದಲ್ಲಿ 2 ಬಾರಿ 3 ದಿನಗಳ ಕಾಲ ಸಂಜೆ ವೇಳೆ ಸೂರ್ಯನ ಕಿರಣಗಳು ದೇವಿಯ ಮೇಲೆ ಬೀಳಲಿವೆ. ದೇವಿಯ ವಿಗ್ರಹದ ಹಿಂದೆ ಆಕೆಯ ವಾಹನ ಸಿಂಹವು ನಿಂತಿದೆ.
ದೇವಿಗೆ ನಾಲ್ಕು ಕೈಗಳಿದ್ದು ಕೆಳಗಡೆಯ ಬಲಗೈನಲ್ಲಿ ಹೆರಳಿಕಾಯಿ, ಮೇಲ್ಭಾಗದ ಬಲಗೈನಲ್ಲಿರು ದೊಡ್ಡ ಗದೆ (ಕೌಮೊದಕಿ) ನೆಲಕ್ಕೆ ತಗುಲುತ್ತಿದೆ. ಮೇಲ್ಭಾಗದ ಎಡಗೈನಲ್ಲಿ ಗುರಾಣಿ (ಖೇತಕ) ಹಾಗೂ ಕೆಳಭಾಗ ಎಡಗೈನಲ್ಲಿ ಬಟ್ಟಲು (ಪಾನ್ಪಾತ್ರ) ಹೊಂದಿದ್ದಾಳೆ.
Image credits : Pinterest Image Credits : Mahalaxmi Today
ಕೊಲ್ಹಾಪುರ ಎಂದು ಹೆಸರು ಬಂದಿದ್ದೇಗೆ?
ಒಂದಾನೊಂದು ಕಾಲದಲ್ಲಿ ಈ ನಗರವನ್ನು ಕೊಲ್ಹಾ ಎನ್ನುವ ರಾಕ್ಷಸನು ಆಳುತ್ತಿದ್ದನು. ಆತ ತಪ್ಪಸ್ಸಿಗೆ ಹೋದಾಗ, ಸುಕೇಶಿ ಎನ್ನುವ ಮತ್ತೊಬ್ಬ ರಾಕ್ಷಸನು ನಗರವನ್ನು ಆಕ್ರಮಿಸಿಕೊಂಡನು. ತನ್ನ ತಪ್ಪಸ್ಸು ಮುಗಿಸಿ ಬ್ರಹ್ಮನಿಂದ ವರ ಪಡೆದು, ತನ್ನ ನಗರಕ್ಕೆ ವಾಪಸಾದ ಕೊಲ್ಹನಿಗೆ ಸುಕೇಶಿಯು ಆಕ್ರಮಿಸಿಕೊಂಡಿರುವ ಬಗ್ಗೆ ತಿಳಿಯಿತು.
ಇದರಿಂದ ಕೋಪಗೊಂಡ ಕೊಲ್ಹಾ, ಸುಕೇಶಿಯನ್ನು ಕೊಂದು ನಗರವನ್ನು ವಶಪಡಿಸಿಕೊಂಡ. ಕೊಲ್ಹಾ ನಗರಕ್ಕೆ ತನ್ನ ಪುತ್ರ ಕರವೀರನನ್ನು ಉಸ್ತುವಾರಿಯಾಗಿ ನೇಮಿಸಿದ. ಆದರೆ ಶಿವನೊಂದಿಗೆ ಯುದ್ಧದಲ್ಲಿ ಕರವೀರ ಮರಣ ಹೊಂದಿದ. ಆದರೆ ಆತನಿಗೆ ಶಿವನಿಂದ ವರವೊಂದು ದೊರೆಯಿತು. ನಗರವನ್ನು ಕರವೀರಪುರ ಎಂದು ಕರೆಯಲಾಯಿತು.
ಇದರಿಂದ ಕೊಲ್ಹಾ ಮತ್ತೆ ಕೋಪಗೊಂಡು, ದೇವತೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ, ಮಹಾಲಕ್ಷ್ಮಿಯನ್ನು ಕುರಿತು ತಪ್ಪಸ್ಸನ್ನಾಚರಿಸಿದ. ಕೊಲ್ಹಾನು, ಮಹಾಲಕ್ಷ್ಮಿ ಬಳಿ ಆಕೆ 100 ವರ್ಷಗಳ ಕಾಲ ನಗರಕ್ಕೆ ಬರುವುದಿಲ್ಲ ಎಂದು ಮಾತು ಪಡೆದ.
ಇದನ್ನೇ ಲಾಭವಾಗಿಸಿಕೊಂಡ ಕೊಲ್ಹಾನು ದೇವತೆಗಳಿಗೆ ಬಹಳಷ್ಟು ತೊಂದರೆಗಳನ್ನು ನೀಡಿದನು. ದೇವತೆಗಳು ಮಹಾಲಕ್ಷ್ಮಿಯನ್ನು ಕೇಳಿದಾಗ, 100 ವರ್ಷಗಳ ಕಾಲ ಕಾಯುವಂತೆ ತಿಳಿಸಿದಳು.
100 ವರ್ಷಗಳ ಬಳಿಕ ಕರವೀಪುರಕ್ಕೆ ಬಂದ ಮಹಾಲಕ್ಷ್ಮಿಯು, ಕೊಲ್ಹಾನನ್ನು ಸೋಲಿಸಿದಳು. ತನ್ನ ತಪ್ಪಿನ ಅರಿವಾದ ಬಳಿಕ ಕೊಲ್ಹಾನು ಆಕೆಗೆ ಶರಣಾಗಿ, 3 ವರಗಳನ್ನು ಬೇಡಿದನು. ಮೊದಲನೇಯದ್ದು, ನಗರಕ್ಕೆ ತನ್ನ ಹೆಸರನ್ನು ಇಡಬೇಕು ಎಂದರೆ ಕರವೀಪುರಕ್ಕೆ ಕೊಲ್ಹಾಪುರ ಎಂದು ಮರು ನಾಮಕರಣ ಮಾಡಬೇಕು.
ಎರಡನೇಯದ್ದು, ಮಹಾಲಕ್ಷ್ಮಿಯು ಈ ಕ್ಷೇತ್ರದಲ್ಲೇ ನೆಲೆಸಬೇಕು. ಮೂರನೇಯದ್ದು, ಈ ಕ್ಷೇತ್ರವು ಸಿದ್ಧಿ ಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಕೊಲ್ಹಾಪುರವು ಅತ್ಯಂತ ಮಹತ್ವದ ಶಕ್ತಿಪೀಠವಾಯಿತು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/34dmmFK
May 24, 2021 at 06:48PM