ಆರ್ಥಿಕ ಸಮಸ್ಯೆ ದೂರವಾಗಬೇಕೆ..? ಈ ವಸ್ತುಗಳನ್ನು ಮನೆಯೊಳಗಿಡಿ
source and pic credit: https://ift.tt/2vjl0e9
ನೆಮ್ಮದಿಯ ಜೀವನಕ್ಕಾಗಿ ಹೆಚ್ಚೆಚ್ಚು ಹಣವನ್ನು ಗಳಿಸಲು ಪ್ರತಿಯೊಬ್ಬರೂ ಬಯಸುತ್ತಾರೆ. ಉತ್ತಮ ಜೀವನಶೈಲಿಯನ್ನು ನಡೆಸಲುಹೆಚ್ಚಿನ ಹಣದ ಅಗತ್ಯವಿದೆ. ಅನೇಕ ಜನರು ಬಹಳಷ್ಟು ಹಣವನ್ನು ಸಂಪಾದಿಸುತ್ತಾರೆ.ಆದರೆ ಹಲವರ ಪಾಲಿಗೆ ಅದೆಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುವುದಿಲ್ಲ. ಅದೆಷ್ಟೇ ಮಿತವ್ಯಯ ಮಾಡಿದರೂ ಹಣ ಉಳಿತಾಯ ಆಗುವುದಿಲ್ಲ. ಹಲವು ಹೂಡಿಕೆಗಳನ್ನು ಮಾಡಿದರೂ ಸೋಲು ಬೆನ್ನಟ್ಟಿಕೊಂಡು ಬರುತ್ತದೆ. ಹಲವರು ಈ ಆರ್ಥಿಕ ಬಿಕ್ಕಟ್ಟಿಗೆ ಕಾರಣ ತಿಳಿಯದೆ ಗೊಂದಲಕ್ಕೆ ಸಿಲುಕುತ್ತಾರೆ.
ಮನೆಯಲ್ಲಿ ಹಣಕ್ಕೆ ಸಮಸ್ಯೆಯಾಗದೆ, ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಳ್ಳದೇ ಇರಬೇಕಾದರೆ ಲಕ್ಷ್ಮೀ ಕೃಪಾಕಟಾಕ್ಷ ಇರಬೇಕಾದುದು ಅತೀ ಅಗತ್ಯ. ಧನ ದೇವತೆಯಾದ ಲಕ್ಷ್ಮೀ ಮನೆಯಲ್ಲಿ ನೆಲೆಸಿದ್ದರೆ ಹಣಕಾಸಿನ ತೊಂದರೆ ಕಾಣಿಸಿಕೊಳ್ಳುವುದಿಲ್ಲ ಎಂದು ನಂಬಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎದುರಿಸದಂತೆ ಖಚಿತಪಡಿಸಿಕೊಳ್ಳಲು ಪೂಜಾ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕಾದುದು ಅಗತ್ಯ. ಈ ವಸ್ತುಗಳು ಮನೆಯೊಳಗಿದ್ದರೆ ಹಣದ ಮುಗ್ಗಟ್ಟು ಉಂಟಾಗುವುದಿಲ್ಲ ಎಂದು ನಂಬಲಾಗುತ್ತದೆ.
source and pic credit: https://www.themuse.com
ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೇಗೆ ಪರಿಹರಿಸುವುದುಎಂಬ ಸಂಶಯ ಪ್ರತಿಯೊಬ್ಬರಿಗೂ ಇದೆ. ಈ ಸಮಸ್ಯೆಯನ್ನು ಬಗೆಹರಿಸಿ ಮನೆಯಲ್ಲಿ ನೆಮ್ಮದಿಯುಂಟಾಗಲು ಏನು ಮಾಡಬಹುದು. ಯಾವ ವಸ್ತುವನ್ನು ಮನೆಯೊಳಗಿಟ್ಟರೆ ಒಳ್ಳೆಯದು, ಯಾವುದು ಮನೆಯಲ್ಲಿರುವುದರಿಂದ ಹಣಕಾಸಿನ ತೊಂದರೆಯುಂಟಾಗುತ್ತದೆ ಎಂಬುದನ್ನು ತಿಳಿಯೋಣ.
ಶಂಖ ಮನೆಯಲ್ಲಿದ್ದರೆ ಉತ್ತಮ
source and pic credit: https://ift.tt/2FLzuri
ಶಂಖ ಎಂದರೆ ಶುಭ. ಮನೆಯಲ್ಲಿ ಶಂಖಗಳನ್ನು ಇಟ್ಟುಕೊಳ್ಳುವುದರಿಂದಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮನೆಯ ಸದಸ್ಯರು ಯಾವುದೇ ಸಂಕಷ್ಟಕ್ಕೆ ಸಿಲುಕುವಿದಿಲ್ಲ. ಶಂಖ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆಎಂದು ಹೇಳಲಾಗುತತದೆ.ಪೂಜಾ ಕೊಠಡಿಯಲ್ಲಿಶಂಖವನ್ನು ಇಟ್ಟುಕೊಳ್ಳುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗುತ್ತದೆ.
ದೇವರಕೋಣೆಯಲ್ಲಿ ಶಂಖವನ್ನು ಇರಿಸುವುದರಿಂದ ಲಕ್ಷ್ಮೀದೇವಿ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಮನೆಯಲ್ಲಿ ಎಲ್ಲಿ ಪೂಜಾ ಗೃಹ ನಿರ್ಮಿಸಿದ್ದೀರೋ ಅಲ್ಲಿ ಶಂಖವನ್ನುಇಡಬೇಕು ಎಂದು ಹೇಳುತ್ತಾರೆ. ಸರಿಯಾದ ಶಂಖವು ಮನೆಯಲ್ಲಿ ಇರುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ನಂಬಲಾಗುತ್ತದೆ.
ಪೂಜಾ ಕೊಠಡಿಯಲ್ಲಿ ಗಂಗಾಜಲ ಇಡಬೇಕು
source and pic credit: https://www.patrika.com
ಪೂಜಾ ಗೃಹದಲ್ಲಿ ಗಂಗಾ ಜಲವನ್ನುಇಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಇದುಕುಟುಂಬ ಸದಸ್ಯರಿಗೆ ಲಕ್ಷ್ಮಿ ತಾಯಿಯ ವಿಶೇಷ ಅನುಗ್ರಹವನ್ನು ನೀಡುತ್ತದೆ. ದೇವರ ಕೊಠಡಿಯ ಈಶಾನ್ಯ ದಿಕ್ಕಿನಲ್ಲಿ ಗಂಗಾಜಲವನ್ನು ಇಡುವುದರಿದ ಹಣದ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುತ್ತಾರೆ. ಧಾರ್ಮಿಕ ಉದ್ದೇಶಗಳಿಗಾಗಿ ಈ ದಿಕ್ಕು ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿರುವುದರಿಂದ ಗಂಗಾಜಲವನ್ನು ಪೂಜಾಕೋಣೆಯಈಶಾನ್ಯ ದಿಕ್ಕಿನಲ್ಲಿಯೇ ಇರಿಸಬೇಕು. ಗಂಗಾಜಲವನ್ನು ಎಂದಿಗೂ ಕತ್ತಲೆ ಕೋಣೆ ಅಥವಾ ಕತ್ತಲೆ ಮೂಲೆಯಲ್ಲಿ ಇಡಬಾರದು.
ನವಿಲುಗರಿಯನ್ನು ಮನೆಯೊಳಗಿರಿಸಿ
source and pic credit: https://ift.tt/3vj5hpQ
ನವಿಲುಗರಿಯನ್ನು ಮನೆಯಲ್ಲಿಡುವುದು ತುಂಬಾ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಪೂಜಾ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಆರ್ಥಿಕ ಸಮಸ್ಯೆಗಳು ತಲೆದೋರುವುದಿಲ್ಲ ಎಂದು ನಂಬಲಾಗುತ್ತದೆ. ವಿಷ್ಣುವಿನ ಅವತಾರವಾದ ಶ್ರೀಕೃಷ್ಣನಿಗೆ ನವಿಲು ಗರಿಗಳು ತುಂಬಾ ಇಷ್ಟವಾಗಿದೆ. ಹೀಗಾಗಿ ದೇವರ ಅನುಗ್ರಹದಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವುದು ನಂಬಿಕೆ.ನವಿಲುಗರಿಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಮನೆಯೊಳಗೆ ನವಿಲು ಗರಿಯನ್ನು ಫ್ರೇಮ್ ಮಾಡಿ ಮಾಡಬಹುದು.
ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಕನ್ನಡಿ ಇಡಬೇಕು
source and pic credit: google.com
ವಾಸ್ತುಶಾಸ್ತ್ರದ ಪ್ರಕಾರ ಕನ್ನಡಿಯಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳಿಗೆ ಕನ್ನಡಿಯನ್ನು ನೇತುಹಾಕುವುದರಿಂದ ಮನೆಯ ಸದಸ್ಯರಿಗೆ ಯಾವುದೇ ರೀತಿಯ ಹಣದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಕನ್ನಡಿ ಇಡುವ ದಿಕ್ಕನ್ನು ಗಮನಿಸಿಕೊಳ್ಳಬೇಕು.ವಾಸ್ತುವಿನ ಪ್ರಕಾರ ಕನ್ನಡಿಯನ್ನು ಮನೆಯ ಮುಖ್ಯ ಬಾಗಿಲಿನ ಮುಂದೆ ಎಂದಿಗೂ ಇಡಬಾರದು. ಇದರಿಂದಾಗಿ ಮನೆಯ ಸದಸ್ಯರಿಗೆ ಸಮಸ್ಯೆ ಹೆಚ್ಚುತ್ತಲೇ ಇರುತ್ತದೆ.ಮನೆಯ ಉತ್ತರ ಮತ್ತು ಪೂರ್ವ ದಿಕ್ಕು ಕನ್ನಡಿಯನ್ನಿಡಲು ಸೂಕ್ತ.
source and pic credit: https://framemytv.com
ಮನೆಯೊಳಗಡೆ ಸರಿಯಾದ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ವ್ಯವಹಾರದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದು ದೂರವಾಗುವುದು. ಅಲ್ಲದೇ ಅನಿರೀಕ್ಷಿತ ಹಣ ಗಳಿಕೆಗೂ ಅವಕಾಶವಿದೆ.ಅಥವಾ ಮನೆಯ ಡೈನಿಂಗ್ ಟೇಬಲ್ ಮುಂದೆ ಕನ್ನಡಿಯನ್ನು ಇರಿಸಿದರೂ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಮುಖ್ಯವಾದ ಅಂಶವೆಂದರೆ, ಆ ಕನ್ನಡಿಯಲ್ಲಿ ಡೈನಿಂಗ್ ಟೇಬಲ್ ಪೂರ್ತಿ ಕಾಣಿಸುವಂತಿರಬೇಕು
ಈ ವಸ್ತುಗಳು ಮನೆಯೊಳಗಿದ್ದರೆ ಹಣದ ಸಮಸ್ಯೆ
ಕಪ್ಪು ಬಾಗಿಲನ್ನು ಹಾಕಿಸಿದರೆ, ಅದು ತೊಂದರೆಯನ್ನು ತಂದು ಮನೆಯಲ್ಲಿ ಇಟ್ಟಂತೆ. ಕಪ್ಪು ವರ್ಣದ ಬಾಗಿಲು ನಕಾರಾತ್ಮಕ ಮತ್ತು... ಮತ್ತು ಕೆಟ್ಟ ಶಕ್ತಿಯನ್ನು ಬೇಗ ಆಕರ್ಷಿಸುತ್ತದೆ. ಯಾವ ಮನೆಯಲ್ಲಿ ಕಪ್ಪು ಬಾಗಿಲು ಇದೇಯೋ ಆ ಮನೆಯಲ್ಲಿಹಣದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಒಡೆದ ಪಾತ್ರೆ, ಮುರಿದ ಮಂಚ ಇಡುವುದು ಸಹ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಒಡೆದ ಗಡಿಯಾರ, ಫರ್ನೀಚರ್ ಗಳು ಸಹ ಇರುವುದು ಒಳ್ಳೆಯದಲ್ಲ.
from ಸುದ್ದಿ - Planet Tv https://ift.tt/3bRrNyA
May 26, 2021 at 10:47AM