ಕರ್ನಾಟಕದಲ್ಲಿರುವ ಪ್ರಸಿದ್ಧ ದೇವಿಯ ದೇವಾಲಯಗಳು ಇವೇ ನೋಡಿ..
Image credits: metrosaga.com
ಭಾರತದಲ್ಲಿ ಹಿಂದೂ ಧರ್ಮದ ದೇವರುಗಳಲ್ಲಿ ದೇವಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ದೇವಿಯು ವಿಭಿನ್ನ ಅವತಾರಗಳ ಮೂಲಕ ಶಿಷ್ಟರನ್ನು ರಕ್ಷಿಸುತ್ತಾಳೆ, ದುಷ್ಟರನ್ನು ಶಿಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ದುರ್ಗಾದೇವಿ, ಚಾಮುಂಡೇಶ್ವರಿ, ಶಾರದಾಂಬ, ಮೂಕಾಂಬಿಕಾ, ಅನ್ನಪೂರ್ಣೇಶ್ವರಿ ಹೀಗೆ ಹಲವು ಹೆಸರಿನಿಂದ ದೇವಿಯ ಹಲವು ಅವತಾರಗಳನ್ನುಕರೆಯಲಾಗುತ್ತದೆ. ದೇವಿ, ದೈವಿಕದ ಸಂಸ್ಕೃತ ಮೂಲ ಶಬ್ದ, ದೇವರ ಅದರ ಸಂಬಂಧಿತ ಪುಲ್ಲಿಂಗ ಪದ. ದೇವಿ, ಹಿಂದೂ ಸಂಪ್ರದಾಯದ ಶಾಕ್ತ ಸಂಪ್ರದಾಯದಿಂದ ಪರಿಕರಿಸಲ್ಪಟ್ಟ, ದೈವಿಕದ ಸ್ತ್ರೀ ಅಂಶವಾದ ಶಕ್ತಿಗೆ ಸಮಾನಾರ್ಥಕವಾಗಿದೆ. ಹಿಂದೂ ಧರ್ಮದಲ್ಲಿ ದೇವತೆಗಳೆಂದರೆ ಅಂತಿಮಶಕ್ತಿ ಎಂದು ಸೂಚಿಸಲಾಗಿದೆ.
ಭಾರತ ದೇಶದಲ್ಲಿ ಹಲವಾರು ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಕರ್ನಾಟಕದಲ್ಲಿಯೂ ಸಹ ದೇವಿಯ ಸಾಕಷ್ಟು ದೇವಾಲಯಗಳು, ಪುಣ್ಯ ಕ್ಷೇತ್ರಗಳು ಕಂಡುಬರುತ್ತವೆ. ಪ್ರತಿನಿತ್ಯ ಭಕ್ತಾದಿಗಳು, ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ತಮ್ಮ ಇಷ್ಟ ದೇವರ, ದೇವತೆಯರ ದರುಶನ ಬಯಸಿ ಈ ರಾಜ್ಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.ಕರ್ನಾಟಕದಲ್ಲಿರುವಪ್ರಸಿದ್ಧದೇವಾಲಯಗಳುಯಾವುದೆಂದುತಿಳಿಯೋಣ.
ಚಾಮುಂಡೇಶ್ವರಿ ದೇವಸ್ಥಾನ
Image credits:https://ift.tt/3g7KzTH
ಚಾಮುಂಡೇಶ್ವರಿ ದೇವಸ್ಥಾನವು ಕರ್ನಾಟಕದ ಅತ್ಯಂತ ಜನಪ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ಚಾಮುಂಡೇಶ್ವರಿ ದೇವಿಯನ್ನು ಮೈಸೂರು ನಗರದ ರಕ್ಷಕಿ ಎಂದು ಸಹ ಪರಿಗಣಿಸಲಾಗಿದೆ. ಚಾಮುಂಡೇಶ್ವರಿ ದೇವಿಯು ಮೈಸೂರು ವಂಶಸ್ಥರ ಕುಲದೇವತೆಯಾಗಿದ್ದಾಳೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಹಾವು ಮತ್ತು ಖಡ್ಗವನ್ನು ಹಿಡಿದುಕೊಂಡ ಪ್ರತಿಮೆ ನೋಡಬಹುದು. ಜನರನ್ನು ಪೀಡಿಸುತ್ತಿದ್ದ ಮಹಿಷಾಸುರನನ್ನು ಸಂಹರಿಸಿದ ದುರ್ಗಾದೇವಿಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯುತ್ತಾರೆ. ಚಾಮುಂಡೇಶ್ವರಿ ದೇವತೆಯು ಅಷ್ಟಭುಜಗಳಿಂದ ಕೂಡಿದ್ದು, ಅವಳ ಮೇಲಿನ ಬಲಗೈ, ಮತ್ತು ಎಡಗೈಯಲ್ಲಿ ತ್ರಿಶೂಲವಿದ್ದು, ಅದು ರಾಕ್ಷಸರ ಎದೆಯನ್ನು ಸೀಳುವಂತೆ ತೋರಿಸಲಾಗಿದೆ. ದೇವಿಯ ಉಳಿದ ಕೈಗಳಲ್ಲಿ ಖಡ್ಗ, ಬಾಣ, ವಜ್ರ, ಚಾಕು, ಈಟಿ, ಶಂಖ ಮತ್ತು ಸರ್ಪವಿದೆ. ಬೆಳ್ಳಿ ಮಂಟಪದಲ್ಲಿ ದೇವಿಯ ಹಲವಾರು ಅವತಾರಗಳಿವೆ.
ಕುದ್ರೋಳಿ ಭಗವತಿ ದೇವಾಲಯ
Image credits: https://ift.tt/3g1uu1C
ಮಂಗಳೂರು ನಗರದ ಹೃದಯ ಭಾಗದಲ್ಲಿ ಸುಮಾರು ಎರಡು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿಕುದ್ರೋಳಿ ಭಗವತಿ ದೇವಾಲಯವಿದೆ. ಈ ದೇವಾಲಯವು ಸಾವಿರಕ್ಕೂ ಅಧಿಕ ವರ್ಷಗಳಷ್ಟು ಪುರಾತನವಾಗಿದ್ದು ದಿನವೊಂದಕ್ಕೆ ಸಾವಿರಾರು ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ. ನಡವಳಿ, ಭರಣಿ, ಕರ್ಕಾಟಕ ಸಂಕ್ರಮಣ, ಸಿಂಹ ಸಂಕ್ರಮಣ, ನವರಾತ್ರಿ ಹೀಗೆ ಹಲವಾರು ಉತ್ಸವಗಳನ್ನು ಈ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ಮಂಗಳೂರಿನ ಕದ್ರಿಯಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನವೂ ಇದೇ ರೀತಿ ಪ್ರಸಿದ್ಧಿಯಾಗಿದೆ. ದುರ್ಗಾ ಮಾತೆಯ ಶಕ್ತಿ ರೂಪಕ್ಕೆ ಮುಡಿಪಾದ ದೇವಸ್ಥಾನವಾಗಿದೆ. ಪ್ರತಿನಿತ್ಯ ಸಕಾಷ್ಟು ಜನ ಭಕ್ತಾದಿಗಳು ಈ ದೇವಿಯ ದರುಶನ ಕೋರಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ
Image credits: metrosaga.com
ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಪೌರಾಣಿಕ ಹಿನ್ನಲೆಯ ಪ್ರಕಾರ, ಹಿಂದೆ ಇಲ್ಲಿ ಕ್ಷಾಮ ಉಂಟಾಗಿ ಜನರು ಕಷ್ಟ ಅನುಭವಿಸುತ್ತಿದ್ದರು. ಇದನ್ನು ಜ್ಞಾನದೃಷ್ಟಿಯಿಂದ ಕಂಡ ಜಬಲಿ ಮಹರ್ಷಿಯು ಪ್ರದೇಶವನ್ನು ಮತ್ತೆ ಫಲವತ್ತಾಗಿ ಮಾಡಲು ಯೋಜಿಸಿ ಕಾಮಧೇನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳುತ್ತಾರೆ. ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಕಾಮಧೇನುವಿನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ನಂದಿನಿಯು ಜಬಲಿ ಮಹರ್ಷಿ ಜತೆಗೆ ಭೂಲೋಕಕ್ಕೆ ಹೋಗಲು ಎಷ್ಟೇ ಬೇಡಿಕೊಂಡರೂ ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ಜಬಲಿ ಮಹರ್ಷಿಯು ಭೂಲೋಕಕ್ಕೆ ಬರಲೊಪ್ಪದ ನಂದಿನಿಯು ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತನು. ಅದರಂತೆ ನಂದಿನಿ ನದಿಯಾಗಿ ಭೂಮಿಗೆ ಹರಿಯುತ್ತಾಳೆ.
ಶೃಂಗೇರಿ ಶಾರದಾಂಬ ದೇವಸ್ಥಾನ
Image credits: google.com
ಶ್ರೀ ಶಾರದಾಂಬ ದೇವಸ್ಥಾನವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಈ ದೇವಾಲಯವನ್ನು ಶಾರದಾ ದೇವಿಗೆ ಅರ್ಪಿಸಲಾಗಿದೆ. ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ದೇವಸ್ಥಾನ ಕರ್ನಾಟಕದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದೆ.
ಅನ್ನಪೂರ್ಣೇಶ್ವರಿ ದೇವಸ್ಥಾನ
Image credits: https://ift.tt/2Rg2NtJ
ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡಿಗೆ ಸುಪ್ರಸಿದ್ಧ ಖ್ಯಾತಿಯನ್ನು ತಂದುಕೊಟ್ಟಿರುವ ದೇವಸ್ಥಾನ. ಜತೆಗೆ ಚಿಕ್ಕಮಗಳೂರಿನ ದಕ್ಷಿಣಕ್ಕೆ 100 ಕಿ.ಮೀ. ನಷ್ಟು ದೂರದ ರಮಣೀಯ ಮಲೆನಾಡಿನಲ್ಲಿ ಈ ದೇವಸ್ಥಾನವಿದೆ. ದೇವಸ್ಥಾನದಲ್ಲಿ ಮುಖ್ಯ ದೇವತೆ ಅನ್ನಪೂರ್ಣೇಶ್ವರಿಯ ಚಿನ್ನದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
Image credits: times of india
ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದೆ. ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹದ ವಿಗ್ರಹವನ್ನು ಆದಿ ಶಂಕಾರಾಚರ್ಯರು ಆ ಸ್ಥಳಕ್ಕೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಪುರಾಣದ ಹಿನ್ನಲೆಯ ಪ್ರಕಾರ ಮೂಕಾಂಬಿಕಾ ದೇವಿಯು ಚೊಟ್ಟಿನ್ನಕರ ದೇವಸ್ಥಾನದಲ್ಲಿ ಇರುತ್ತಾಳೆ. ಅಲ್ಲಿಂದ ಕೊಲ್ಲೂರಿಗೆ ಹಿಂತಿರುಗುತ್ತಾಳೆ. ದೇವಿಯನ್ನು ಕೇರಳಕ್ಕೆ ಆಹ್ವಾನಿಸುವುದು ಆದಿ ಶಂಕಾರಾಚಾರ್ಯರ ಆಶಯವಾಗಿತ್ತು.
ನಿಮಿಷಾಂಬಾ ದೇವಸ್ಥಾನ
Image credits: rva temples
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಕಾವೇರಿ ನದಿಯ ತಟದಲ್ಲಿದೆ ನಿಮಿಷಾಂಬ ದೇವಸ್ಥಾನ. ಇಲ್ಲಿನ ಅಂಬಿಕಾ ದೇವಿಯು ಪಾರ್ವತಿಯ ಅವತಾರವಾಗಿದ್ದು, ಈ ದೇವಿಯು ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ನಿಮಿಷ ಮಾತ್ರದಲ್ಲೆ ನಿವಾರಿಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಈ ದೇವರನ್ನು ನಿಮಿಷಾಂಬಿಕಾ ದೇವಿ ಎಂದು ಕರೆದು, ದೇವಾಲಯವನ್ನು ನಿಮಿಷಾಂಬಾ ದೇವಸ್ಥಾನ ಎಂದು ಕರೆಯುತ್ತಾರೆ.
ಸಿಗಂಧೂರು ಚೌಡೇಶ್ವರಿ ದೇವಿ ದೇವಸ್ಥಾನ
Image credits:https://ift.tt/3yPpeXs
ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗದ ಸಾಗರ ತಾಲೂಕಿನಲ್ಲಿದೆ. ಚೌಡೇಶ್ವರಿ ಸ್ವಯಂ ಅಭಿವ್ಯಕ್ತ ದೇವತೆ ಎಂದು ಹೇಳಲಾಗುತ್ತದೆ. ಇನ್ನು ತುಮಕೂರಿನಲ್ಲಿಯೂ ಒಂದು ಚೌಡೇಶ್ವರಿ ದೇವಸ್ಥಾನವಿದೆ.ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರವಿರುವ ತುಮಕೂರಿನಲ್ಲಿ ಈ ಪ್ರಸಿದ್ಧ ಚೌಡೇಶ್ವರಿ ದೇವಸ್ಥಾನವಿದೆ. ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ಈ ಪ್ರಖ್ಯಾತ ಅಮ್ಮನವರ ದೇಗುಲವಿದೆ. ದಸರಿಘಟ್ಟ ಗ್ರಾಮವು ತಿಪಟೂರಿನಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿದೆ.
ಮಾರಿಕಾಂಬ ದೇವಸ್ಥಾನ
Image credits: tripoto.com
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಶ್ರೀ ಮಾರಿಕಾಂಬ ದೇವಸ್ಥಾನವು ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ಜರುಗುವ ಸುಪ್ರಸಿದ್ಧ ಮಾರಿಕಾಂಬೆಯ ಜಾತ್ರೆಯಿಂದಪ್ರಸಿದ್ಧಿಯಾಗಿದೆ. ಈ ದೇವಸ್ಥಾನವು 17 ನೇಯ ಶತಮಾನದ್ದಾಗಿದ್ದು,ಇಲ್ಲಿ ನಡೆಯುವ ಜಾತ್ರೆಯು ಕರ್ನಾಟಕದ ದೊಡ್ಡ ಜಾತ್ರೆಗಳ ಪೈಕಿ ಒಂದಾಗಿದೆ. ಜಾತ್ರೆಯಲ್ಲಿ ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಪಕ್ಕದ ತಮಿಳುನಾಡು ಹಾಗು ಆಂಧ್ರಗಳಿಂದಲೂಭಕ್ತಾಧಿಗಳು ಬರುತ್ತಾರೆ.
ಸವದತ್ತಿ ಎಲ್ಲಮ್ಮನ ಗುಡಿ
Image credits: google.com
ರೇಣುಕಾ ಎಲ್ಲಮ್ಮ ಎಂದು ಕರೆಯಲ್ಪಡುವ ಸವದತ್ತಿ ಎಲ್ಲಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದ್ದು, ಬೆಳಗಾವಿಯ ಪೂರ್ವ ದಿಕ್ಕಿಗೆ ಸುಮಾರು 78 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡುತ್ತಿದ್ದ ಇದು ರಟ್ಟ ವಂಶದರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ, ಎಲ್ಲಮನ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3cc7wE5
June 02, 2021 at 02:45PM